ಸ್ವಚ್ಛತೆ ವಿಚಾರವಾಗಿ ಸಭೆ ನಡೆಸಿ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ವಾಣಿಜ್ಯ ಪ್ರದೇಶದಲ್ಲಿ ನಿತ್ಯ ಎರಡು ಬಾರಿ ಕಸ ವಿಲೇವಾರಿಗೆ ಕ್ರಮವಹಿಸಲಾಗಿದೆ. ಜನರು ರಸ್ತೆಬದಿ ಕಸ ಸುರಿಯದೇ ನಗರಸಭೆಯ ಕಸದ ವಾಹನಕ್ಕೆ ನೀಡಬೇಕು
ಎಸ್.ಲಕ್ಷ್ಮೀ, ಪೌರಾಯುಕ್ತೆ
ಮುಖ್ಯರಸ್ತೆ ಹೊರತುಪಡಿಸಿ ಒಳ ರಸ್ತೆಗಳು ಸ್ವಚ್ಛತೆಯಿಂದ ದೂರವಾಗಿವೆ. ಲಕ್ಷ್ಮಿ ಬಜಾರ್ ರಸ್ತೆಯ ಸ್ಥಿತಿ ಹೇಳತೀರದಾಗಿದೆ. ಈ ಬಗ್ಗೆ ನಗರಸಭೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ
ಎಸ್.ಶಿವಕುಮಾರ್, ಸ್ಥಳೀಯರು
ಸಕಾಲಕ್ಕೆ ನಗರದಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ ಎಂಬುದಕ್ಕೆ ರಸ್ತೆ ಬದಿ ಬಿದ್ದ ಕಸದ ರಾಶಿ ಸಾಕ್ಷಿಯಾಗಿದೆ. ಬಡಾವಣೆಗಳಲ್ಲಿ ಸ್ವಚ್ಛತೆ ದೂರವಾಗಿದೆ. ಕಸ ಸಂಗ್ರಹಿಸುವ ವಾಹನಗಳು ನಿತ್ಯ ಬಾರದಿರುವುದೇ ಸಮಸ್ಯೆಗೆ ಕಾರಣ.