<p><strong>ಚಳ್ಳಕೆರೆ</strong>: ನಾಮಪತ್ರ ತಿರಸ್ಕೃತವಾದರೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕೈ ತಪ್ಪುತ್ತದೆ ಎಂಬ ಕಾರಣದಿಂದ ತಾಲ್ಲೂಕಿನ ಗೋಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪನಹಳ್ಳಿ ಒಂದನೇ ಬ್ಲಾಕ್ನಲ್ಲಿ 4 ಸಾಮಾನ್ಯ ಮೀಸಲು ಸ್ಥಾನಕ್ಕೆ 8 ಜನ ದಂಪತಿ ನಾಮಪತ್ರ ಸಲ್ಲಿಸಿದ್ದು, ಈಗ 6 ಜನ ಪತಿಯರು ನಾಮಪತ್ರ ಹಿಂಪಡೆದಿದ್ದಾರೆ.</p>.<p>ಸಾಮಾನ್ಯ ಮೀಸಲು ಸ್ಥಾನಕ್ಕೆ ಒಟ್ಟು 17 ಜನ ನಾಮಪತ್ರ ಸಲ್ಲಿಸಿದ್ದರು.ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಶನಿವಾರ ಉಮೇದುವಾರಿಕೆ ಸಲ್ಲಿಸಿದ್ದ ಎಂಟು ಜನ ದಂಪತಿಯಲ್ಲಿ 6 ಜನ ಪತಿಯರು, ಒಬ್ಬ ಮಹಿಳೆ ನಾಮಪತ್ರ ವಾಪಸ್ ಪಡೆದಿದ್ದು, ಒಂದು ಜೋಡಿ ಮಾತ್ರ ಕಣದಲ್ಲಿ ಉಳಿದಿದೆ. 11 ಜನ ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿದಿದ್ದಾರೆ.</p>.<p>ಉಮೇಶ್, ಭವಾನಿ ದಂಪತಿ ಕಣದಲ್ಲಿ ಉಳಿದಿದ್ದಾರೆ. 6 ಜನ ಪತಿಯರು ನಾಮಪತ್ರ ವಾಪಸ್ ಪಡೆದ ಕಾರಣ ಅವರ ಪತ್ನಿಯರಾದ ರಾಧಮ್ಮ, ತಿಮ್ಮಕ್ಕ, ಲಕ್ಷ್ಮೀ, ಶರಾವತಿ, ಸುಮಿತ್ರಮ್ಮ, ಲತಾ ಸೇರಿ ಒಟ್ಟು 6 ಜನ ಪತ್ನಿಯರು ಅಂತಿಮ ಸ್ಪರ್ಧೆಯಲ್ಲಿದ್ದಾರೆ.ಶರಣಪ್ಪ, ಶಿವಣ್ಣ, ವಾಸುದೇವಮೂರ್ತಿ, ಮಂಜುನಾಥ, ದೇವರಾಜ ಸೇರಿ ಒಟ್ಟು 11 ಜನ ಹುರಿಯಾಳುಗಳು ಅಂತಿಮ ಕಣದಲ್ಲಿದ್ದಾರೆ.<br />ಸುಮಾ ಎಂಬ ಅಭ್ಯರ್ಥಿ ನಾಮಪತ್ರ ಹಿಂಪಡೆಯುವ ಮೂಲಕ ಪತಿ ದೇವರಾಜ ಅವರನ್ನು ಕಣಕ್ಕಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಳ್ಳಕೆರೆ</strong>: ನಾಮಪತ್ರ ತಿರಸ್ಕೃತವಾದರೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕೈ ತಪ್ಪುತ್ತದೆ ಎಂಬ ಕಾರಣದಿಂದ ತಾಲ್ಲೂಕಿನ ಗೋಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪನಹಳ್ಳಿ ಒಂದನೇ ಬ್ಲಾಕ್ನಲ್ಲಿ 4 ಸಾಮಾನ್ಯ ಮೀಸಲು ಸ್ಥಾನಕ್ಕೆ 8 ಜನ ದಂಪತಿ ನಾಮಪತ್ರ ಸಲ್ಲಿಸಿದ್ದು, ಈಗ 6 ಜನ ಪತಿಯರು ನಾಮಪತ್ರ ಹಿಂಪಡೆದಿದ್ದಾರೆ.</p>.<p>ಸಾಮಾನ್ಯ ಮೀಸಲು ಸ್ಥಾನಕ್ಕೆ ಒಟ್ಟು 17 ಜನ ನಾಮಪತ್ರ ಸಲ್ಲಿಸಿದ್ದರು.ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಶನಿವಾರ ಉಮೇದುವಾರಿಕೆ ಸಲ್ಲಿಸಿದ್ದ ಎಂಟು ಜನ ದಂಪತಿಯಲ್ಲಿ 6 ಜನ ಪತಿಯರು, ಒಬ್ಬ ಮಹಿಳೆ ನಾಮಪತ್ರ ವಾಪಸ್ ಪಡೆದಿದ್ದು, ಒಂದು ಜೋಡಿ ಮಾತ್ರ ಕಣದಲ್ಲಿ ಉಳಿದಿದೆ. 11 ಜನ ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿದಿದ್ದಾರೆ.</p>.<p>ಉಮೇಶ್, ಭವಾನಿ ದಂಪತಿ ಕಣದಲ್ಲಿ ಉಳಿದಿದ್ದಾರೆ. 6 ಜನ ಪತಿಯರು ನಾಮಪತ್ರ ವಾಪಸ್ ಪಡೆದ ಕಾರಣ ಅವರ ಪತ್ನಿಯರಾದ ರಾಧಮ್ಮ, ತಿಮ್ಮಕ್ಕ, ಲಕ್ಷ್ಮೀ, ಶರಾವತಿ, ಸುಮಿತ್ರಮ್ಮ, ಲತಾ ಸೇರಿ ಒಟ್ಟು 6 ಜನ ಪತ್ನಿಯರು ಅಂತಿಮ ಸ್ಪರ್ಧೆಯಲ್ಲಿದ್ದಾರೆ.ಶರಣಪ್ಪ, ಶಿವಣ್ಣ, ವಾಸುದೇವಮೂರ್ತಿ, ಮಂಜುನಾಥ, ದೇವರಾಜ ಸೇರಿ ಒಟ್ಟು 11 ಜನ ಹುರಿಯಾಳುಗಳು ಅಂತಿಮ ಕಣದಲ್ಲಿದ್ದಾರೆ.<br />ಸುಮಾ ಎಂಬ ಅಭ್ಯರ್ಥಿ ನಾಮಪತ್ರ ಹಿಂಪಡೆಯುವ ಮೂಲಕ ಪತಿ ದೇವರಾಜ ಅವರನ್ನು ಕಣಕ್ಕಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>