‘ದ್ರಾವಿಡ ಆಚರಣೆಯ ಪ್ರಕಾರ ಇದು ಹೊಸವರ್ಷದ ಆರಂಭ. ಜಗತ್ತಿಗೆ ಬೆಳಕು ಕೊಡುವ, ಸರ್ವಶಕ್ತನಾದ ಸೂರ್ಯನಿಗೆ ಹಬ್ಬಕ್ಕೆಂದೇ ಮೀಸಲಿಟ್ಟಿರುವ ಮಡಕೆಯಲ್ಲಿ ಪೊಂಗಲ್ ತಯಾರಿಸಲಾಗುತ್ತದೆ. ಪೊಂಗಲ್ ಬೇಯುವಾಗ ಮಡಕೆಯಿಂದ ಉಕ್ಕಿ ಬರುವ ನೊರೆ ಪೂರ್ವ ಅಥವಾ ಉತ್ತರ ದಿಕ್ಕಿಗೆ ಚೆಲ್ಲಿದರೆ ಶುಭ ಎಂಬ ನಂಬಿಕೆ ಇದೆ. ಪೊಂಗಲ್ ನೊರೆ ಉಕ್ಕಿ ಹೊರ ಬರುವುದನ್ನು ಶಾಲೆಯ ಮಕ್ಕಳು ಕುತೂಹಲದಿಂದ ಎದುರು ನೋಡುವುದು ಖುಷಿ ಕೊಡುತ್ತದೆ. ದನಕರುಗಳು ಸೇರಿದಂತೆ ಸಾಕು ನಾಯಿಯವರೆಗೆ ಎಲ್ಲಾ ಪ್ರಾಣಿಗಳನ್ನು ಪೂಜಿಸುವುದು, ಈ ಪ್ರಾಣಿಗಳನ್ನು ಸಲಹುವವರಿಗೆ ಹೊಸಬಟ್ಟೆ ಕೊಡುವುದು ಬಹಳಷ್ಟು ಕಡೆ ವಾಡಿಕೆಯಲ್ಲಿದೆ. ಇದನ್ನೆಲ್ಲ ಮಕ್ಕಳಿಗೆ ವಿವರಿಸುವ ಮೂಲಕ ಹಬ್ಬ ಆಚರಿಸುತ್ತೇವೆ’ ಎಂದು ಹೇಳಿದರು.