ಸೆ. 2ರಂದು ವಾಣಿವಿಲಾಸ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದ್ದು, ಇಂದಿಗೂ ಕೋಡಿಯಲ್ಲಿ ನೀರು ಹರಿಯುತ್ತಿರುವ ಕಾರಣ ಹಿರಿಯೂರು–ಹೊಸದುರ್ಗ ನಗರಗಳ ನಡುವೆ ವಾಹನಗಳ ಓಡಾಟ ಬಂದ್ ಆಗಿತ್ತು. ಇದರಿಂದ ಹೊಸದುರ್ಗಕ್ಕೆ ಹೋಗುವ ಬಸ್ಗಳು ವಾಣಿವಿಲಾಸಪುರಕ್ಕೆ ಬಂದು, ಮರಳಿ ಕಕ್ಕಯ್ಯನಹಟ್ಟಿ ಮೂಲಕ ಭರಮಗಿರಿ– ಬಳಗಟ್ಟ ರಸ್ತೆಗೆ ಹೋಗಿ ಅಲ್ಲಿಂದ ಲಕ್ಕಿಹಳ್ಳಿ ಕಡೆ ಸಾಗುತ್ತಿದ್ದವು. ಇದರಿಂದ ಹೊಸದುರ್ಗ– ಹಿರಿಯೂರು ನಡುವಿನ ದೂರ ಎಂಟ್ಟತ್ತು ಕಿ.ಮೀ. ಹೆಚ್ಚಾಗುತ್ತಿದ್ದು, ಅರ್ಧ ಗಂಟೆ ಹೆಚ್ಚಿನ ಸಮಯ ಬೇಕಿದೆ. ಈ ಬಗ್ಗೆ ಜ. 11ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.