<p>ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಶ್ರಾವಣ ಮಾಸದ ಮೊದಲ ಮಂಗಳವಾರ ಮಂಗಳಗೌರಿ ವ್ರತಾಚರಣೆಯು ಶ್ರದ್ಧಾಭಕ್ತಿಯಿಂದ ನೆರವೇರಿತು. ನಗರದ ನವದುರ್ಗೆಯರ ದೇಗುಲಗಳಲ್ಲೂ ಮುಂಜಾನೆಯಿಂದಲೇ ಪೂಜೆಗಳು ಜರುಗಿದವು.</p>.<p>ಅಧಿದೇವತೆ ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಬರಗೇರಮ್ಮ ದೇವತೆಗಳಿಗೆ ಪುಷ್ಪ ಮತ್ತು ತರಕಾರಿಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಮಹಿಳೆಯರ ಹಬ್ಬವೆಂದೇ ಖ್ಯಾತಿಯಾದ ಈ ವ್ರತಾಚರಣೆಯನ್ನು ಅನೇಕರು ಮನೆಗಳಲ್ಲಿ ಆಚರಿಸಿದರು. ಪತಿಗೆ ದೀರ್ಘಾಯಸ್ಸು ಲಭಿಸಲಿ ಎಂದು ಪ್ರಾರ್ಥಿಸಿ ಮಹಿಳೆಯರು ಶ್ರಾವಣ ಮಾಸದ ಪ್ರತಿ ಮಂಗಳವಾರ ಮಂಗಳಗೌರಿ ವ್ರತ ಆಚರಿಸುವುದು ವಾಡಿಕೆ.</p>.<p>ಮಹಿಳೆಯರು ಮನೆಯಲ್ಲಿ ಮಂಗಳಗೌರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಪರಂಪರೆ ಇದೆ. ಪರಸ್ಪರ ಫಲ–ತಾಂಬೂಲ ವಿನಿಮಯ ಮಾಡಿಕೊಂಡು ಗೌರಿ ಹಬ್ಬದ ಶುಭಾಶಯ ಕೋರಿದರು. ಕೋವಿಡ್ ಕಾರಣಕ್ಕೆ ಅಕ್ಕಪಕ್ಕದ ಮನೆಯವರನ್ನು ಕರೆಯಲಿಲ್ಲ. ಕುಟುಂಬದ ಸದಸ್ಯರಿಗೆ ಫಲ–ತಾಂಬೂಲ ನೀಡುವ ಮೂಲಕ ಸರಳವಾಗಿ ಆಚರಿಸಿದರು.</p>.<p>ಕೋಟೆ ಒಳಾಂಗಣದ ಮೇಲುದುರ್ಗದಲ್ಲಿರುವ ಏಕನಾಥೇಶ್ವರಿ ದೇಗುಲದಲ್ಲಿ ದೇವಿಗೆ ಅರ್ಚಕರಿಂದ ಮುಂಜಾನೆ ಪೂಜೆ ನೆರವೇರಿತು. ಮೂಲಂಗಿ, ಬದನೆಕಾಯಿ, ಈರುಳ್ಳಿ ಸೇರಿ ವಿವಿಧ ತರಕಾರಿಗಳಿಂದ ದೇವಿಯನ್ನು ವಿಶೇಷವಾಗಿ ಅಲಂಕರಿಸಿದ್ದರು. ನೂರಾರು ಭಕ್ತರು ಕೋಟೆಯನ್ನು ಏರಿ ಪೂಜೆ ಸಲ್ಲಿಸಿದರು.</p>.<p>ರಾಜಬೀದಿಯಲ್ಲಿ ಇರುವ ಉಚ್ಚಂಗಿ ಯಲ್ಲಮ್ಮ ದೇಗುಲದಲ್ಲಿಯೂ ದೇವಿಗೆ ಅರ್ಚಕರು ತರಕಾರಿಗಳಿಂದ ಅಲಂಕರಿಸಿದ್ದರು. ಶ್ರಾವಣ ಆರಂಭದ ಬಳಿಕ ದೇಗುಲಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿಯ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಗೆ ಪುಷ್ಪಾಲಂಕಾರ ನೆರವೇರಿಸಲಾಗಿತ್ತು. ಪ್ರಧಾನ ಅರ್ಚಕರಿಂದ ಪೂಜೆಯಾದ ಬಳಿಕ ಭಕ್ತರು ಮಹಾಮಂಗಳಾರತಿ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಶ್ರಾವಣ ಮಾಸದ ಮೊದಲ ಮಂಗಳವಾರ ಮಂಗಳಗೌರಿ ವ್ರತಾಚರಣೆಯು ಶ್ರದ್ಧಾಭಕ್ತಿಯಿಂದ ನೆರವೇರಿತು. ನಗರದ ನವದುರ್ಗೆಯರ ದೇಗುಲಗಳಲ್ಲೂ ಮುಂಜಾನೆಯಿಂದಲೇ ಪೂಜೆಗಳು ಜರುಗಿದವು.</p>.<p>ಅಧಿದೇವತೆ ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಬರಗೇರಮ್ಮ ದೇವತೆಗಳಿಗೆ ಪುಷ್ಪ ಮತ್ತು ತರಕಾರಿಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಮಹಿಳೆಯರ ಹಬ್ಬವೆಂದೇ ಖ್ಯಾತಿಯಾದ ಈ ವ್ರತಾಚರಣೆಯನ್ನು ಅನೇಕರು ಮನೆಗಳಲ್ಲಿ ಆಚರಿಸಿದರು. ಪತಿಗೆ ದೀರ್ಘಾಯಸ್ಸು ಲಭಿಸಲಿ ಎಂದು ಪ್ರಾರ್ಥಿಸಿ ಮಹಿಳೆಯರು ಶ್ರಾವಣ ಮಾಸದ ಪ್ರತಿ ಮಂಗಳವಾರ ಮಂಗಳಗೌರಿ ವ್ರತ ಆಚರಿಸುವುದು ವಾಡಿಕೆ.</p>.<p>ಮಹಿಳೆಯರು ಮನೆಯಲ್ಲಿ ಮಂಗಳಗೌರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಪರಂಪರೆ ಇದೆ. ಪರಸ್ಪರ ಫಲ–ತಾಂಬೂಲ ವಿನಿಮಯ ಮಾಡಿಕೊಂಡು ಗೌರಿ ಹಬ್ಬದ ಶುಭಾಶಯ ಕೋರಿದರು. ಕೋವಿಡ್ ಕಾರಣಕ್ಕೆ ಅಕ್ಕಪಕ್ಕದ ಮನೆಯವರನ್ನು ಕರೆಯಲಿಲ್ಲ. ಕುಟುಂಬದ ಸದಸ್ಯರಿಗೆ ಫಲ–ತಾಂಬೂಲ ನೀಡುವ ಮೂಲಕ ಸರಳವಾಗಿ ಆಚರಿಸಿದರು.</p>.<p>ಕೋಟೆ ಒಳಾಂಗಣದ ಮೇಲುದುರ್ಗದಲ್ಲಿರುವ ಏಕನಾಥೇಶ್ವರಿ ದೇಗುಲದಲ್ಲಿ ದೇವಿಗೆ ಅರ್ಚಕರಿಂದ ಮುಂಜಾನೆ ಪೂಜೆ ನೆರವೇರಿತು. ಮೂಲಂಗಿ, ಬದನೆಕಾಯಿ, ಈರುಳ್ಳಿ ಸೇರಿ ವಿವಿಧ ತರಕಾರಿಗಳಿಂದ ದೇವಿಯನ್ನು ವಿಶೇಷವಾಗಿ ಅಲಂಕರಿಸಿದ್ದರು. ನೂರಾರು ಭಕ್ತರು ಕೋಟೆಯನ್ನು ಏರಿ ಪೂಜೆ ಸಲ್ಲಿಸಿದರು.</p>.<p>ರಾಜಬೀದಿಯಲ್ಲಿ ಇರುವ ಉಚ್ಚಂಗಿ ಯಲ್ಲಮ್ಮ ದೇಗುಲದಲ್ಲಿಯೂ ದೇವಿಗೆ ಅರ್ಚಕರು ತರಕಾರಿಗಳಿಂದ ಅಲಂಕರಿಸಿದ್ದರು. ಶ್ರಾವಣ ಆರಂಭದ ಬಳಿಕ ದೇಗುಲಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿಯ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಗೆ ಪುಷ್ಪಾಲಂಕಾರ ನೆರವೇರಿಸಲಾಗಿತ್ತು. ಪ್ರಧಾನ ಅರ್ಚಕರಿಂದ ಪೂಜೆಯಾದ ಬಳಿಕ ಭಕ್ತರು ಮಹಾಮಂಗಳಾರತಿ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>