ಶ್ರೀರಾಂಪುರ: ಸಂಕ್ರಾಂತಿ ಸಂಭ್ರಮ

ಶ್ರೀರಾಂಪುರ: ಹೋಬಳಿಯ ಎಸ್. ನೇರಲಕೆರೆ ಗ್ರಾಮಸ್ಥರು ಶನಿವಾರ ಕಾಡಿನಲ್ಲಿ ಜೀವಂತ ಮೊಲ ಹಿಡಿದು ತಂದು ದೇವರಿಗೆ ಹಾಗೂ ಮೊಲಕ್ಕೆ ಪೂಜೆ ಸಲ್ಲಿಸುವ ಮೂಲಕ ಮೊಲವನ್ನು ಬೀಳ್ಕೊಟ್ಟು ಸಂಕ್ರಾಂತಿ ಹಬ್ಬವನ್ನು ಆಚರಿಸಿದರು.
ಮೊದಲಿನಿಂದಲೂ ಗ್ರಾಮದಲ್ಲಿ ಮಕರ ಸಂಕ್ರಮಣದ ಮಾರನೆ ದಿನ ಸಂಕ್ರಾಂತಿ ಹಬ್ಬವನ್ನು ಆಚರಿಸುವುದು ರೂಢಿ. ಅದರಂತೆ ಶುಕ್ರವಾರ ಮೊಲ ಬಿಡುವ ಕಾರ್ಯಕ್ರಮವಿತ್ತು. ಆದರೆ ದಿನವಿಡೀ ಬೇಟೆ ಆಡಿದರೂ ಮೊಲ ಸಿಗದ ಕಾರಣ ದೇವರಿಗೆ ಪೂಜೆಯನ್ನೂ ಮಾಡದೆ ಸಂಕ್ರಾಂತಿ ಹಬ್ಬನ್ನು ಮುಂದೂಡಲಾಗಿತ್ತು.
ಶನಿವಾರ ಮಧ್ಯಾಹ್ನ 12ಕ್ಕೆ ಮೊಲ ಸಿಕ್ಕ ನಂತರ ಅದಕ್ಕೆ ಸ್ವಲ್ಪವೂ ಪೆಟ್ಟಾಗದಂತೆ ಪುಟ್ಟಿಯಲ್ಲಿ ಹಾಕಿಕೊಂಡು ಬಂದು ಅದಕ್ಕೆ ಸ್ನಾನ ಮಾಡಿಸಿ ನಾಮಧಾರಣೆ ಹಾಗೂ ಹೂಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಬಳಿಕ ಕಟ್ಟೆ ರಂಗನಾಥಸ್ವಾಮಿ ದೇವರ ಮುಂದೆ ಮೂರು ಬಾರಿ ಸುತ್ತು ಹಾಕಿಸಿ ವಾದ್ಯ ಸಮೇತ ಸಕಲ ಬಿರುದಾವಳಿಗಳೊಂದಿಗೆ ಮೊಲವನ್ನು ಬೀಳ್ಕೊಡಲಾಯಿತು. ಬಳಿಕ ಹಬ್ಬದ ಸಂಭ್ರಮ ಕಳೆಗಟ್ಟಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.