<p><strong>ಚಿತ್ರದುರ್ಗ</strong>: ‘ಬಹುತ್ವ ಭಾರತದಲ್ಲಿ ನೂರಾರು ಭಾಷೆ, ಸಾವಿರಾರು ಜಾತಿಗಳಿವೆ. ಬುಡಕಟ್ಟು ಸಂಸ್ಕೃತಿಯುಳ್ಳ ದೇಶ ನಮ್ಮದು’ ಎಂದು ಲೇಖಕ ಎಚ್. ಆನಂದ್ ಕುಮಾರ್ ತಿಳಿಸಿದರು.</p>.<p>ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ಈ ನೆಲದ ಬಹುತ್ವ ಎತ್ತಿ ಹಿಡಿದ ಸಂವಿಧಾನ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಬಹುಸಂಖ್ಯಾತರು ಶೋಷಣೆಯಿಂದ ಹೊರ ಬಂದಾಗ ಮಾತ್ರ ಈ ದೇಶದ ಸಂಪತ್ತನ್ನು ಅನುಭವಿಸಲು ಸಾಧ್ಯ’ ಎಂದರು.</p>.<p>‘ಬಹುಸಂಖ್ಯಾತರು ಬಲ ಪಂಥೀಯರ ಮಾತುಗಳನ್ನು ಕೇಳುವಂತಾಗಿರುವುದರಿಂದ ಇನ್ನು ಶೋಷಣೆ ಅನುಭವಿಸಬೇಕಾಗಿದೆ. ಅಂಬೇಡ್ಕರ್ ಇರದಿದ್ದರೆ ಶೋಷಿತರ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು’ ಎಂದು ತಿಳಿಸಿದರು.</p>.<p>‘ಬಹುತ್ವ ಎನ್ನುವುದು ಗಂಭೀರ ಹಾಗೂ ಅವಶ್ಯಕವಾಗಿ ಚರ್ಚೆಯಾಗಬೇಕಿದೆ. ಪ್ರಜಾಪ್ರಭುತ್ವದ ತತ್ವದ ಮೇಲೆ ಬಹುತ್ವ ರಚನೆಯಾಗಿದೆ. ಅಂತಹ ಸಮಾಜವನ್ನು ಬಹುತ್ವ ಎಂದು ಕರೆಯಲಾಗುವುದು. ಬಹುತ್ವ ಮತ್ತು ಭಾಷೆ ಅಪಾಯದಲ್ಲಿದೆ’ ಎಂದು ರಾಜ್ಯ ಘಟಕದ ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಎಂ.ರಮೇಶ್ ಹೇಳಿದರು.</p>.<p>‘ಬಹುಸಂಖ್ಯಾತರ ಆಚಾರ, ವಿಚಾರ, ನಂಬಿಕೆಗೆ ಧಕ್ಕೆಯಾಗಿದೆ. ಸಹಿಷ್ಣತೆಯಿಲ್ಲದ ಸಮಾಜ ಸರ್ವಾಧಿಕಾರದ ಕಡೆ ಹೋಗುತ್ತದೆ. ಪುರೋಹಿತಶಾಹಿ, ಬ್ರಾಹ್ಮಣ್ಯ ವ್ಯವಸ್ಥೆಯಲ್ಲಿ ಬಹುತ್ವ ಹಾಳಾಗುತ್ತಿದೆ’ ಎಂದು ಬೇಸರಿಸಿದರು.</p>.<p>ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಬಂಜಾರ ಸೇವಾ ಸಂಘದ ಅಧ್ಯಕ್ಷ ಗಿರೀಶ್ ನಾಯ್ಕ, ಅಲೆಮಾರಿ ಮತ್ತು ಅರೆ ಅಲೆಮಾರಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಲಕ್ಷ್ಮಿಕಾಂತ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ‘ಬಹುತ್ವ ಭಾರತದಲ್ಲಿ ನೂರಾರು ಭಾಷೆ, ಸಾವಿರಾರು ಜಾತಿಗಳಿವೆ. ಬುಡಕಟ್ಟು ಸಂಸ್ಕೃತಿಯುಳ್ಳ ದೇಶ ನಮ್ಮದು’ ಎಂದು ಲೇಖಕ ಎಚ್. ಆನಂದ್ ಕುಮಾರ್ ತಿಳಿಸಿದರು.</p>.<p>ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ಈ ನೆಲದ ಬಹುತ್ವ ಎತ್ತಿ ಹಿಡಿದ ಸಂವಿಧಾನ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಬಹುಸಂಖ್ಯಾತರು ಶೋಷಣೆಯಿಂದ ಹೊರ ಬಂದಾಗ ಮಾತ್ರ ಈ ದೇಶದ ಸಂಪತ್ತನ್ನು ಅನುಭವಿಸಲು ಸಾಧ್ಯ’ ಎಂದರು.</p>.<p>‘ಬಹುಸಂಖ್ಯಾತರು ಬಲ ಪಂಥೀಯರ ಮಾತುಗಳನ್ನು ಕೇಳುವಂತಾಗಿರುವುದರಿಂದ ಇನ್ನು ಶೋಷಣೆ ಅನುಭವಿಸಬೇಕಾಗಿದೆ. ಅಂಬೇಡ್ಕರ್ ಇರದಿದ್ದರೆ ಶೋಷಿತರ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು’ ಎಂದು ತಿಳಿಸಿದರು.</p>.<p>‘ಬಹುತ್ವ ಎನ್ನುವುದು ಗಂಭೀರ ಹಾಗೂ ಅವಶ್ಯಕವಾಗಿ ಚರ್ಚೆಯಾಗಬೇಕಿದೆ. ಪ್ರಜಾಪ್ರಭುತ್ವದ ತತ್ವದ ಮೇಲೆ ಬಹುತ್ವ ರಚನೆಯಾಗಿದೆ. ಅಂತಹ ಸಮಾಜವನ್ನು ಬಹುತ್ವ ಎಂದು ಕರೆಯಲಾಗುವುದು. ಬಹುತ್ವ ಮತ್ತು ಭಾಷೆ ಅಪಾಯದಲ್ಲಿದೆ’ ಎಂದು ರಾಜ್ಯ ಘಟಕದ ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಎಂ.ರಮೇಶ್ ಹೇಳಿದರು.</p>.<p>‘ಬಹುಸಂಖ್ಯಾತರ ಆಚಾರ, ವಿಚಾರ, ನಂಬಿಕೆಗೆ ಧಕ್ಕೆಯಾಗಿದೆ. ಸಹಿಷ್ಣತೆಯಿಲ್ಲದ ಸಮಾಜ ಸರ್ವಾಧಿಕಾರದ ಕಡೆ ಹೋಗುತ್ತದೆ. ಪುರೋಹಿತಶಾಹಿ, ಬ್ರಾಹ್ಮಣ್ಯ ವ್ಯವಸ್ಥೆಯಲ್ಲಿ ಬಹುತ್ವ ಹಾಳಾಗುತ್ತಿದೆ’ ಎಂದು ಬೇಸರಿಸಿದರು.</p>.<p>ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಬಂಜಾರ ಸೇವಾ ಸಂಘದ ಅಧ್ಯಕ್ಷ ಗಿರೀಶ್ ನಾಯ್ಕ, ಅಲೆಮಾರಿ ಮತ್ತು ಅರೆ ಅಲೆಮಾರಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಲಕ್ಷ್ಮಿಕಾಂತ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>