<p><strong>ಬೆಳ್ತಂಗಡಿ</strong>: ಕಂಬಳದಲ್ಲಿ 147 ಜತೆ ಕೋಣಗಳು ಭಾಗವಹಿಸಿದ್ದವು.</p>.<p>ಕನೆ ಹಲಗೆ ವಿಭಾಗದಲ್ಲಿ 4 ಜತೆ ಕೋಣಗಳು ಭಾಗವಹಿಸಿದ್ದು, ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ ಅವರ ಕೋಣಗಳು (ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ), ನಿಡ್ಡೋಡಿ ಕಾನ ರಾಮ ಸುವರ್ಣ ಅವರ ಕೋಣಗಳು (ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ) 6.5 ಕೋಲು ನಿಶಾನೆಗೆ ನೀರು ಹಾಯಿಸುವ ಮೂಲಕ ಬಹುಮಾನ ಗೆದ್ದುಕೊಂಡವು.</p>.<p>ಅಡ್ಡಹಲಗೆ ವಿಭಾಗದಲ್ಲಿ ಭಾಗವಹಿಸಿದ 4 ಜತೆ ಕೋಣಗಳಲ್ಲಿ ನಾರಾವಿ ಯುವರಾಜ್ ಜೈನ್ ಅವರ (ಹಲಗೆ ಮುಟ್ಟಿದವರು: ಭಟ್ಕಳ ಹರೀಶ್) ಕೋಣಗಳು ಪ್ರಥಮ, ಬೋಳಾರ ತ್ರಿಶಾಲ್ ಕೆ.ಪೂಜಾರಿ ಅವರ (ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ್) ಕೋಣಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡವು.</p>.<p>ಹಗ್ಗ ಹಿರಿಯ ವಿಭಾಗದಲ್ಲಿ ಭಾಗವಹಿಸಿದ್ದ 12 ಜತೆ ಕೋಣಗಳ ಪೈಕಿ ವೇಣೂರು ಮುಡುಕೋಡಿ ಗಣೇಶ್ ನಾರಾಯಣ್ ಪಂಡಿತ್ ಅವರ ಕೋಣಗಳು (ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ) ಪ್ರಥಮ, ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ ಅವರ ಕೋಣಗಳು (ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ) ದ್ವಿತೀಯ ಸ್ಥಾನವನ್ನು ಪಡೆದುಕೊಂಡವು.</p>.<p>ಹಗ್ಗ ಕಿರಿಯ ವಿಭಾಗದ 12 ಜತೆ ಕೋಣಗಳಲ್ಲಿ ಬೆಳುವಾಯಿ ಉಮನೊಟ್ಟು ಶಿವರಾಮ್ ಹೆಗ್ಡೆ ಅವರ ಕೋಣಗಳು (ಓಡಿಸಿದವರು: ಬಾರಾಡಿ ನತೀಶ್) ಪ್ರಥಮ, ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ ಅವರ ‘ಬಿ’ ಕೋಣಗಳು (ಓಡಿಸಿದವರು: ಮಾಳ ಆಧೀಶ್ ಪೂಜಾರಿ) ದ್ವಿತೀಯ ಸ್ಥಾನ ಗಳಿಸಿದವು.</p>.<p>ನೇಗಿಲು ಹಿರಿಯ ವಿಭಾಗದ 24 ಜತೆ ಕೋಣಗಳಲ್ಲಿ ಶ್ರೀ ಪೊಳಲಿ ಬಿರಾವುಗುತ್ತು ಪ್ರಶಾಂತ್ ಶೆಟ್ಟಿ ಅವರ ‘ಎ’ ಕೋಣಗಳು (ಓಡಿಸಿದವರು: ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ) ಪ್ರಥಮ, ಬೋಳದ ಗುತ್ತು ಸತೀಶ್ ಶೆಟ್ಟಿ ಅವರ ‘ಬಿ’ ಕೋಣಗಳು (ಓಡಿಸಿದವರು: ಬಾರಾಡಿ ನತೀಶ್) ದ್ವಿತೀಯ ಸ್ಥಾನ ಗೆದ್ದುಕೊಂಡವು.</p>.<p>ನೇಗಿಲು ಕಿರಿಯ ವಿಭಾಗದ 85 ಜತೆ ಕೋಣಗಳಲ್ಲಿ ವೇಣೂರು ಮುಡುಕೋಡಿ ಜ್ನಾನ್ ಗಣೇಶ್ ನಾರಾಯಣ್ ಪಂಡಿತ್ ‘ಬಿ’ ಕೋಣಗಳು (ಓಡಿಸಿದವರು: ಕಕ್ಕೆಪದವು ಗೌತಮ್ ಗೌಡ) ಪ್ರಥಮ ಸ್ಥಾನ, ಮಿಜಾರ್ ಹರಿಮೀನಾಕ್ಷಿ ತೋಟ ಹರಿಯಪ್ಪ ಶೆಟ್ಟಿ ಅವರ ‘ಎ’ ಕೋಣಗಳು (ಓಡಿಸಿದವರು: ಪಟ್ಟೆ ಗುರುಚರಣ್) ದ್ವಿತೀಯ ಸ್ಥಾನವನ್ನು ಪಡೆದುಕೊಂಡವು.</p>.<p>ಬಹುಮಾನ ವಿತರಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ್ ಅಜಿಲ, ಕಂಬಳ ಸಮಿತಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ, ಸಮಿತಿ ಅಧ್ಯಕ್ಷ ನಿತೀಶ್ ಎಚ್.ಕೋಟ್ಯಾನ್, ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ, ಕಂಬಳ ಸಮಿತಿ ಪದಾಧಿಕಾರಿಗಳು ನೆರವೇರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳ್ತಂಗಡಿ</strong>: ಕಂಬಳದಲ್ಲಿ 147 ಜತೆ ಕೋಣಗಳು ಭಾಗವಹಿಸಿದ್ದವು.</p>.<p>ಕನೆ ಹಲಗೆ ವಿಭಾಗದಲ್ಲಿ 4 ಜತೆ ಕೋಣಗಳು ಭಾಗವಹಿಸಿದ್ದು, ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ ಅವರ ಕೋಣಗಳು (ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ), ನಿಡ್ಡೋಡಿ ಕಾನ ರಾಮ ಸುವರ್ಣ ಅವರ ಕೋಣಗಳು (ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ) 6.5 ಕೋಲು ನಿಶಾನೆಗೆ ನೀರು ಹಾಯಿಸುವ ಮೂಲಕ ಬಹುಮಾನ ಗೆದ್ದುಕೊಂಡವು.</p>.<p>ಅಡ್ಡಹಲಗೆ ವಿಭಾಗದಲ್ಲಿ ಭಾಗವಹಿಸಿದ 4 ಜತೆ ಕೋಣಗಳಲ್ಲಿ ನಾರಾವಿ ಯುವರಾಜ್ ಜೈನ್ ಅವರ (ಹಲಗೆ ಮುಟ್ಟಿದವರು: ಭಟ್ಕಳ ಹರೀಶ್) ಕೋಣಗಳು ಪ್ರಥಮ, ಬೋಳಾರ ತ್ರಿಶಾಲ್ ಕೆ.ಪೂಜಾರಿ ಅವರ (ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ್) ಕೋಣಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡವು.</p>.<p>ಹಗ್ಗ ಹಿರಿಯ ವಿಭಾಗದಲ್ಲಿ ಭಾಗವಹಿಸಿದ್ದ 12 ಜತೆ ಕೋಣಗಳ ಪೈಕಿ ವೇಣೂರು ಮುಡುಕೋಡಿ ಗಣೇಶ್ ನಾರಾಯಣ್ ಪಂಡಿತ್ ಅವರ ಕೋಣಗಳು (ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ) ಪ್ರಥಮ, ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ ಅವರ ಕೋಣಗಳು (ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ) ದ್ವಿತೀಯ ಸ್ಥಾನವನ್ನು ಪಡೆದುಕೊಂಡವು.</p>.<p>ಹಗ್ಗ ಕಿರಿಯ ವಿಭಾಗದ 12 ಜತೆ ಕೋಣಗಳಲ್ಲಿ ಬೆಳುವಾಯಿ ಉಮನೊಟ್ಟು ಶಿವರಾಮ್ ಹೆಗ್ಡೆ ಅವರ ಕೋಣಗಳು (ಓಡಿಸಿದವರು: ಬಾರಾಡಿ ನತೀಶ್) ಪ್ರಥಮ, ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ ಅವರ ‘ಬಿ’ ಕೋಣಗಳು (ಓಡಿಸಿದವರು: ಮಾಳ ಆಧೀಶ್ ಪೂಜಾರಿ) ದ್ವಿತೀಯ ಸ್ಥಾನ ಗಳಿಸಿದವು.</p>.<p>ನೇಗಿಲು ಹಿರಿಯ ವಿಭಾಗದ 24 ಜತೆ ಕೋಣಗಳಲ್ಲಿ ಶ್ರೀ ಪೊಳಲಿ ಬಿರಾವುಗುತ್ತು ಪ್ರಶಾಂತ್ ಶೆಟ್ಟಿ ಅವರ ‘ಎ’ ಕೋಣಗಳು (ಓಡಿಸಿದವರು: ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ) ಪ್ರಥಮ, ಬೋಳದ ಗುತ್ತು ಸತೀಶ್ ಶೆಟ್ಟಿ ಅವರ ‘ಬಿ’ ಕೋಣಗಳು (ಓಡಿಸಿದವರು: ಬಾರಾಡಿ ನತೀಶ್) ದ್ವಿತೀಯ ಸ್ಥಾನ ಗೆದ್ದುಕೊಂಡವು.</p>.<p>ನೇಗಿಲು ಕಿರಿಯ ವಿಭಾಗದ 85 ಜತೆ ಕೋಣಗಳಲ್ಲಿ ವೇಣೂರು ಮುಡುಕೋಡಿ ಜ್ನಾನ್ ಗಣೇಶ್ ನಾರಾಯಣ್ ಪಂಡಿತ್ ‘ಬಿ’ ಕೋಣಗಳು (ಓಡಿಸಿದವರು: ಕಕ್ಕೆಪದವು ಗೌತಮ್ ಗೌಡ) ಪ್ರಥಮ ಸ್ಥಾನ, ಮಿಜಾರ್ ಹರಿಮೀನಾಕ್ಷಿ ತೋಟ ಹರಿಯಪ್ಪ ಶೆಟ್ಟಿ ಅವರ ‘ಎ’ ಕೋಣಗಳು (ಓಡಿಸಿದವರು: ಪಟ್ಟೆ ಗುರುಚರಣ್) ದ್ವಿತೀಯ ಸ್ಥಾನವನ್ನು ಪಡೆದುಕೊಂಡವು.</p>.<p>ಬಹುಮಾನ ವಿತರಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ್ ಅಜಿಲ, ಕಂಬಳ ಸಮಿತಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ, ಸಮಿತಿ ಅಧ್ಯಕ್ಷ ನಿತೀಶ್ ಎಚ್.ಕೋಟ್ಯಾನ್, ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ, ಕಂಬಳ ಸಮಿತಿ ಪದಾಧಿಕಾರಿಗಳು ನೆರವೇರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>