<p>‘ನೋಡ್ಲಾ, ಪ್ರಯತ್ನಕ್ಕೆ ಸೋಲಾದರೂ ಪ್ರಾರ್ಥನೆಗೆ ಸೋಲಾಗಕುಲ್ಲ ಅಂತ ಅಣ್ಣ ಯಥೆ ಪಡದು <br>ನೋಡಕ್ಕಾಯ್ಕಿಲ್ಲ ಕಜಾ’ ತುರೇಮಣೆ ನೊಂದ್ಕತಿದ್ರು.</p>.<p>‘ಅಣ್ಣಂಗೆ ಕುರ್ಚಿ ಸಿಕ್ಕೇ ಸಿಕ್ತದೆ ಅಂತ ಹಿಂಬಾಲಕರು ಹೇಳಿಕ್ಯಂದು ಬರದೇ ಆಯ್ತು. ಇಕ್ಕಡೆ ಅವರು, ಇನ್ನೂ ನಾನೇ ದಸರಾದೇಲಿ ಪುಸ್ಪಾರ್ಚನೆ ಮಾಡದು. ಅವರ ಜೊತೆಗೆ ಮೂರೂ ಮುಕ್ಕಾಲು ಜನವೇ ಇರದು ಅಂತ ಟಾಂಗು ಕೊಡ್ತರೆ’ ನನ್ನ ಅನಿಸಿಕೆ ಹೇಳಿದೆ.</p>.<p>‘ದಿಟ ಕಲಾ, ಚೇರು ಚೇರು ಅಂತ ಕನವರಿಸಿಕ್ಯಂದು ಅಣ್ಣನ ಕಣ್ಣುಗುಡ್ಡೆಲ್ಲಾ ಬೆಳ್ಳಗಾಗೋದೊ. ಪಕ್ಸದೊಳಗಿರೋ ನೇಬರುಗಳು ದಾರಿಗೆ ಮುಳ್ಳೆಳೀತಾ ಕೂತವೆ. ದೇವೇಂದ್ರನ ಪೋಸ್ಟಿಗೂ ಒಂದು ಟರ್ಮು ಅಂತ ಅದೆ. ಇಲ್ಲ್ಯಾಕಿಲ್ಲ?’ ತುರೇಮಣೆ ವಿಚಾರಿಸಿದರು.</p>.<p>‘ಇದಕ್ಕೆಲ್ಲಾ ಪರಿಹಾರ ಅದೆ’ ತಿಪ್ಪಣ್ಣ ಸಿಡಿಗುಂಡು ಹಾರಿಸಿದ. ಎಲ್ಲಾರೂ ದಿಕ್ಕೆಟ್ಟು ತಿಪ್ಪಣ್ಣನ ಕಡೆ ನೋಡಿದೋ.</p>.<p>‘ಗಾಬರಾಗಬ್ಯಾಡಿ ತುರೇಮಣಣೈ. ಅಣ್ಣ ನನ್ನ ತಾವು ಒಂದು ವೆಲ್ಲೈಸಿ ಟರ್ಮು ಇನ್ಸ್ಯೂರೆನ್ಸು ತಕಂಡ್ರೆ ನಷ್ಟ ಪರಿಹಾರ ತುಂಬಿ ಕೊಡಬೈದು’ ಅಂತ ವಡಪು ಹಾಕಿದ.</p>.<p>‘ಅಯ್ಯೋ ನಿನ್ನಾ, ಅದೇನು ವೆಲ್ಲೈಸಿ ಅಂತ ಸರಿಯಾಗಿ ಹೇಳ್ಲಾ’ ಯಂಟಪ್ಪಣ್ಣ ಸಿಟ್ಟಾದ್ರು.</p>.<p>‘ಇದು ಪವರ್ ಇನ್ಸ್ಯೂರೆನ್ಸ್. ತಿಂಗಳಿಗಿಷ್ಟು ಅಂತ ವಿಮೆ ತುಂಬಿ ಟರ್ಮು ಮುಗಿದ ಮ್ಯಾಲೂ ಕುರ್ಚಿ ಸಿಗದೇ ಹೋದ್ರೆ ನಾವು ವೆಲ್ಲೈಸಿಯಿಂದ ಪವರ್ ಪರಿಹಾರ ಅಂತ ಕ್ಲೇಮು ಕೊಡ್ತೀವೇಳಿ’ ತಿಪ್ಪಣ್ಣ ವಿವರಿಸಿದ.</p>.<p>‘ಅಣ್ಣನ ಮನೇ ಮಗ್ಗುಲಗೇ ಇದ್ದೀಯಲ್ಲೋ. ನೀನು ಕ್ಲೇಮು ಸೆಟಲ್ ಮಾಡ್ದೇ ಹೋದ್ರೆ ಅಣ್ಣ ನಿನ್ನ ಬೋಟಿ, ಕಲೇಜಾ ಕಿತ್ತಾಕಿಬುಡ್ತನೆ ಕಲಾ. ಉಸಾರು’ ತುರೇಮಣೆ ಎಚ್ಚರಿಸಿದರು.</p>.<p>‘ಆಟೊತ್ತಿಗೆ ನಾವೂ ಬೋರ್ಡು ತಿರುವ್ಯಾಕಿ ಎಪ್ಪೆಸ್ ಆಗಿರತೀವಲ್ಲ. ನೈಬರ್ ಅಟ್ಯಾಕ್ ಮಾಡೋ ನಮ್ಮಂತಾ ಕೈನಾತಿಗಳನ್ನ ಎಲ್ಲಿ ಅಂತ ಹುಡುಕ್ಯಾರು?’ ತಿಪ್ಪಣ್ಣನ ವೆಲ್ಲೈಸಿ ಪ್ಲಾನಿಗೆ ನಾವು ಚಿತ್ತಾಗಿದ್ದೋ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನೋಡ್ಲಾ, ಪ್ರಯತ್ನಕ್ಕೆ ಸೋಲಾದರೂ ಪ್ರಾರ್ಥನೆಗೆ ಸೋಲಾಗಕುಲ್ಲ ಅಂತ ಅಣ್ಣ ಯಥೆ ಪಡದು <br>ನೋಡಕ್ಕಾಯ್ಕಿಲ್ಲ ಕಜಾ’ ತುರೇಮಣೆ ನೊಂದ್ಕತಿದ್ರು.</p>.<p>‘ಅಣ್ಣಂಗೆ ಕುರ್ಚಿ ಸಿಕ್ಕೇ ಸಿಕ್ತದೆ ಅಂತ ಹಿಂಬಾಲಕರು ಹೇಳಿಕ್ಯಂದು ಬರದೇ ಆಯ್ತು. ಇಕ್ಕಡೆ ಅವರು, ಇನ್ನೂ ನಾನೇ ದಸರಾದೇಲಿ ಪುಸ್ಪಾರ್ಚನೆ ಮಾಡದು. ಅವರ ಜೊತೆಗೆ ಮೂರೂ ಮುಕ್ಕಾಲು ಜನವೇ ಇರದು ಅಂತ ಟಾಂಗು ಕೊಡ್ತರೆ’ ನನ್ನ ಅನಿಸಿಕೆ ಹೇಳಿದೆ.</p>.<p>‘ದಿಟ ಕಲಾ, ಚೇರು ಚೇರು ಅಂತ ಕನವರಿಸಿಕ್ಯಂದು ಅಣ್ಣನ ಕಣ್ಣುಗುಡ್ಡೆಲ್ಲಾ ಬೆಳ್ಳಗಾಗೋದೊ. ಪಕ್ಸದೊಳಗಿರೋ ನೇಬರುಗಳು ದಾರಿಗೆ ಮುಳ್ಳೆಳೀತಾ ಕೂತವೆ. ದೇವೇಂದ್ರನ ಪೋಸ್ಟಿಗೂ ಒಂದು ಟರ್ಮು ಅಂತ ಅದೆ. ಇಲ್ಲ್ಯಾಕಿಲ್ಲ?’ ತುರೇಮಣೆ ವಿಚಾರಿಸಿದರು.</p>.<p>‘ಇದಕ್ಕೆಲ್ಲಾ ಪರಿಹಾರ ಅದೆ’ ತಿಪ್ಪಣ್ಣ ಸಿಡಿಗುಂಡು ಹಾರಿಸಿದ. ಎಲ್ಲಾರೂ ದಿಕ್ಕೆಟ್ಟು ತಿಪ್ಪಣ್ಣನ ಕಡೆ ನೋಡಿದೋ.</p>.<p>‘ಗಾಬರಾಗಬ್ಯಾಡಿ ತುರೇಮಣಣೈ. ಅಣ್ಣ ನನ್ನ ತಾವು ಒಂದು ವೆಲ್ಲೈಸಿ ಟರ್ಮು ಇನ್ಸ್ಯೂರೆನ್ಸು ತಕಂಡ್ರೆ ನಷ್ಟ ಪರಿಹಾರ ತುಂಬಿ ಕೊಡಬೈದು’ ಅಂತ ವಡಪು ಹಾಕಿದ.</p>.<p>‘ಅಯ್ಯೋ ನಿನ್ನಾ, ಅದೇನು ವೆಲ್ಲೈಸಿ ಅಂತ ಸರಿಯಾಗಿ ಹೇಳ್ಲಾ’ ಯಂಟಪ್ಪಣ್ಣ ಸಿಟ್ಟಾದ್ರು.</p>.<p>‘ಇದು ಪವರ್ ಇನ್ಸ್ಯೂರೆನ್ಸ್. ತಿಂಗಳಿಗಿಷ್ಟು ಅಂತ ವಿಮೆ ತುಂಬಿ ಟರ್ಮು ಮುಗಿದ ಮ್ಯಾಲೂ ಕುರ್ಚಿ ಸಿಗದೇ ಹೋದ್ರೆ ನಾವು ವೆಲ್ಲೈಸಿಯಿಂದ ಪವರ್ ಪರಿಹಾರ ಅಂತ ಕ್ಲೇಮು ಕೊಡ್ತೀವೇಳಿ’ ತಿಪ್ಪಣ್ಣ ವಿವರಿಸಿದ.</p>.<p>‘ಅಣ್ಣನ ಮನೇ ಮಗ್ಗುಲಗೇ ಇದ್ದೀಯಲ್ಲೋ. ನೀನು ಕ್ಲೇಮು ಸೆಟಲ್ ಮಾಡ್ದೇ ಹೋದ್ರೆ ಅಣ್ಣ ನಿನ್ನ ಬೋಟಿ, ಕಲೇಜಾ ಕಿತ್ತಾಕಿಬುಡ್ತನೆ ಕಲಾ. ಉಸಾರು’ ತುರೇಮಣೆ ಎಚ್ಚರಿಸಿದರು.</p>.<p>‘ಆಟೊತ್ತಿಗೆ ನಾವೂ ಬೋರ್ಡು ತಿರುವ್ಯಾಕಿ ಎಪ್ಪೆಸ್ ಆಗಿರತೀವಲ್ಲ. ನೈಬರ್ ಅಟ್ಯಾಕ್ ಮಾಡೋ ನಮ್ಮಂತಾ ಕೈನಾತಿಗಳನ್ನ ಎಲ್ಲಿ ಅಂತ ಹುಡುಕ್ಯಾರು?’ ತಿಪ್ಪಣ್ಣನ ವೆಲ್ಲೈಸಿ ಪ್ಲಾನಿಗೆ ನಾವು ಚಿತ್ತಾಗಿದ್ದೋ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>