ದೈವಸ್ಥಾನದ ಮೂಡುಪಡು, ತೆಂಕು ಬಡಗು ಗೋಪುರಗಳ ನಿರ್ಮಾಣ, ನೂತನ ಧ್ವಜ ಮರ ಪ್ರತಿಷ್ಠೆ, ಆವರಣ ಗೋಡೆ ದೈವಗಳ ಕೊಡಿ ಅಡಿ, ಸಾರ್ವಜನಿಕ ಸಭಾಭವನ, ಅರಸು ಕುಂಜರಾಯ ಪರಿವಾರ ದೈವಗಳ ನೂತನ ಭಂಡಾರ ಚಾವಡಿ, ಕಾಂತಾರಜಾಲಿನಲ್ಲಿ ಸಿಂಹಾಸನ ಕಟ್ಟೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ದಿನಂಪ್ರತಿ ನೂರಾರು ಗ್ರಾಮಸ್ಥರು ಕರಸೇವೆಯೊಂದಿಗೆ ಅಲಂಕಾರ, ಸ್ವಚ್ಛತೆ, ಸಿದ್ಧತೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.