‘ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಹಾವೇರಿ ಹೀಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಈಗ ಜನ ದುಬಾರಿ ಬಾಡಿಗೆ ತೆತ್ತು ವಾಹನ ಮಾಡಿಕೊಂಡು ಆಸ್ಪತ್ರೆಗೆ ಬರುತ್ತಿದ್ದಾರೆ. ಅವರಲ್ಲಿ ಶೇ 80ರಷ್ಟು ಜನರಿಗೆ ಕ್ಯಾನ್ಸರ್ ಗುಣಪಡಿಸಲಾಗದ ಸ್ಥಿತಿ ತಲುಪಿದೆ. ಕ್ಯಾನ್ಸರ್ ರೋಗಿಗಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ನಿಜ. ಕೊರೊನಾ ಸಮಯದಲ್ಲಿ ಬೇರೆಯವರಿಗಿಂತ ಹೆಚ್ಚು ಜಾಗ್ರತೆ ವಹಿಸಬೇಕು ಅದೂ ನಿಜ. ಆದರೆ, ಗುಣಪಡಿಸಿಕೊಳ್ಳಲು ಕಷ್ಟಪಡುವ ಕಾಯಿಲೆಗಿಂತ ಗುಣಪಡಿಸಿಕೊಳ್ಳಲು ಸಾಧ್ಯವಾಗುವ ಕಾಯಿಲೆಗೆ ಹೆದರುವುದನ್ನು ಜನ ಬಿಡಬೇಕು. ಕ್ಯಾನ್ಸರ್ ರೋಗಿಗಳು ಆಸ್ಪತ್ರೆಗೆ ತಡವಾಗಿ ಬಂದರೆ ಜೀವಕ್ಕೆ ಅಪಾಯ. ಚಿಕಿತ್ಸೆ ನೀಡಿದರೂ ಅಡ್ಡ ಪರಿಣಾಮ ಹೆಚ್ಚು, ಗುಣವಾಗುವುದು ಕಡಿಮೆ; ಆರ್ಥಿಕ ನಷ್ಟ ಮತ್ತಷ್ಟು’ ಎನ್ನುತ್ತಾರೆಡಾ.ಸುರೇಶ್ ರಾವ್.