‘ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿ’ಯನ್ನು ಭಾಷಾ ಗಣಕ ಪಿತಾಮಹ ಕೆ.ಪಿ ರಾವ್ ಅವರಿಗೆ ಮತ್ತು ಡಾ.ಯು.ಪಿ. ಉಪಾಧ್ಯಾಯರ ಹೆಸರಿನಲ್ಲಿರುವ ‘ಮಹೋಪಾಧ್ಯಾಯ ಪ್ರಶಸ್ತಿ’ಯನ್ನು ಜಾನಪದ ವಿದ್ವಾಂಸ ಡಾ.ಕೆ.ಎಲ್. ಕುಂಡಂತಾಯ ಅವರಿಗೆ ನೀಡಲು ನಿರ್ಧರಿಸಲಾಗಿದೆ. ಪ್ರಶಸ್ತಿಯು ತಲಾ ₹10 ಸಾವಿರ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ.