<p><strong>ಕಾಸರಗೋಡು:</strong> ಜಿಲ್ಲೆಯಲ್ಲಿ ಬುಧವಾರ ನಡೆದ ಕಾರ್ಮಿಕರ ಹರತಾಳ ನಡೆಯಿತು.</p>.<p>ಕೇಂದ್ರ ಸರ್ಕಾರ ತಪ್ಪು ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳು ನಡೆಸಿದ ಪ್ರತಿಭಟನೆಯ ಖಾಸಗಿ ಮತ್ತು ಸರ್ಕಾರಿ ಬಸ್ಗಳು ಸಂಚಾರ ನಡೆಸಿರಲಿಲ್ಲ.</p>.<p>ಬಹುತೇಕ ಬಸ್ ನಿಲ್ದಾಣಗಳು ಬಿಕೋ ಅನ್ನುವಂತಿದ್ದವು. ಜಿಲ್ಲೆಯ ಕೆಲವೆಡೆ ಸಂಚಾರ ನಡೆಸಿದ ಖಾಸಗಿ ವಾಹನಗಳನ್ನು ಮುಷ್ಕರ ನಿರತರು ತಡೆದಾಗ ವಾಗ್ವಾದ ನಡೆಯಿತು. ಈ ಸಂಬಂಧ ಮುಷ್ಕರ ನಿರತರ ಮತ್ತು ಪೊಲೀಸರ ನಡುವೆಯೂ ಕೊಂಚ ಹೊತ್ತು ಚರ್ಚೆ ನಡೆಯಿತು.</p>.<p>ನಗರದಲ್ಲಿ ಮುಷ್ಕರ ನಿರತ ಕಾರ್ಮಿಕ ಸಂಘಟನೆಗಳ ಮೆರವಣಿಗೆ ನಡೆಯಿತು. ನಗರದ ಪ್ರಧಾನ ಅಂಚೆ ಕಚೇರಿ ಮುಂದೆ ಶಾಸಕ ಸಿ.ಎಚ್.ಕುಂಞಂಬು ಎಡರಂಗ ಬೆಂಬಲಿತ ಕಾರ್ಮಿಕರ ಮೆರವಣಿಗೆಯನ್ನು ಉದ್ಘಾಟಿಸಿದರು.</p>.<p>ಎಐಟಿಯುಸಿ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.</p>.<p>ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಟಿ.ಕೆ.ರಾಜನ್, ಸಿ.ಎಂ.ಎ.ಜಲೀಲ್, ರಾಘವನ್ ಮಾಸ್ಟರ್ ಭಾಗವಹಿಸಿದ್ದರು.</p>.<p>ಎಂ.ಜಿ.ರಸ್ತೆಯಲ್ಲಿ ಐಕ್ಯರಂಗ ಬೆಂಬಲಿತ ಕಾರ್ಮಿಕರ ಮೆರವಣಿಗೆಯನ್ನು ಎಸ್.ಟಿ.ಯು.ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮುಹಮ್ಮದ್ ಅಶ್ರಫ್ ಉದ್ಘಾಟಿಸಿದರು. ಐ.ಎನ್.ಟಿ.ಯು.ಸಿ. ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ವಿ.ಕುಂಞಿರಾಮನ್ ಅಧ್ಯಕ್ಷತೆ ವಹಿಸಿದ್ದರು. ಅಶ್ರಫ್ ಎಡನೀರು, ಎ.ಅಹಮ್ಮದ್, ಅರ್ಜುನನ್ ತಾಯಲಂಗಾಡಿ, ಟಿ.ಜಿ.ಟೋನಿ ಭಾಗವಹಿಸಿದ್ದರು.</p>.<p><strong>ಕಾಣೆಯಾಗಿದ್ದ ಯುವಕನ ಶವ ನದಿಯಲ್ಲಿ ಪತ್ತೆ</strong></p>.<p>ಕಾಸರಗೋಡು: ಕಾಣೆಯಾಗಿದ್ದ ಯುವಕ, ಕಸಬ ನಿವಾಸಿ ಆದಿತ್ಯ (22) ಅವರ ಶವ ಕಸಬ ಕರಾವಳಿಯ ಹಾರ್ಬರ್ ಗೇಟ್ ಬಳಿಯ ನದಿಯಲ್ಲಿ ಬುಧವಾರ ಪತ್ತೆಯಾಗಿದೆ. ಶವದಲ್ಲಿ ಗಾಯಗಳು ಪತ್ತೆಯಾಗಿದ್ದು, ಊಹಾಪೋಹಕ್ಕೆ ಕಾರಣವಾಗಿದೆ. 2 ದಿನಗಳಿಂದ ಅವರು ಕಾಣೆಯಾಗಿದ್ದರು. ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.</p>.<p><strong>ಮೂರು ನಕಲಿ ಬಂದೂಕು ಸಹಿತ ಬಂಧನ</strong></p>.<p>ಕಾಸರಗೋಡು: ಕಳ್ಳಾರಿನ ಕೋಟೆಕುನ್ನು ಕೈಕಳಂ ಎಂಬಲ್ಲಿನ ಮನೆಯೊಂದಕ್ಕೆ ಬುಧವಾರ ದಾಳಿ ನಡೆಸಿದ ಪೊಲೀಸರು ಮೂರು ನಕಲಿ ಬಂದೂಕುಗಳ ಸಹಿತ ಕಣ್ಣೂರು ಆಲಕ್ಕೋಡು ಕಾರ್ತಿಕಪುರಂ ಎರುದಮಾಡ ಮೇಲರುಗಿಲ್ ನಿವಾಸಿ ಎಂ.ಕೆ.ಅಜಿತ್ ಕುಮಾರ್ (55) ಎಂಬಾತನನ್ನು ಬಂಧಿಸಿದ್ದಾರೆ.</p>.<p>ಪ್ರಕರಣ ಸಂಬಂಧ ರಾಜಪುರಂ ಪೂಂಜಕ್ಕರ ನಿವಾಸಿ ಸಂತೋಷ್, ಪರಪ್ಪ ನಿವಾಸಿ ಷಾಜಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>ಕಾಞಂಗಾಡು, ಬೇಕಲ ಡಿವೈಎಸ್ಪಿ ನೇತೃತ್ವದಲ್ಲಿ ರಾಜಪುರಂ ಪೊಲೀಸರು ದಾಳಿ ನಡೆಸಿದ್ದರು. ಬಂಧಿತನ ಹೆಚ್ಚುವರಿ ವಿಚಾರಣೆ ನಡೆಸಲಾಗುತ್ತಿದೆ.</p>.<p><strong>ಮಸೀದಿಗೆ ಕನ್ನ: ಆರೋಪಿ ಬಂಧನ</strong></p>.<p>ಕಾಸರಗೋಡು: ಸೂರ್ಲು ಸಲಫಿ ಮಸೀದಿಯಲ್ಲಿ ಜೂನ್ 24ರಂದು ₹ 3.10 ಲಕ್ಷ, 2 ಪವನ್ ಚಿನ್ನದ ಆಭರಣ ಕಳವು ನಡೆಸಿದ ಆರೋಪಿ ಆಂಧ್ರಪ್ರದೇಶದ ವೆಸ್ಟ್ ಗೋದಾವರಿ ಆಕ್ಕಿವಿಡು ನಿವಾಸಿ ಸಲ್ಮಾನ್ ಅಹಮ್ಮದ್ (34) ಎಂಬಾತನನ್ನು ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.</p>.<p>ಸಿಸಿಟಿವಿ ಕ್ಯಾಮೆರಾದ ದೃಶ್ಯದ ಆಧಾರದಲ್ಲಿ ಆರೋಪಿಯ ಪತ್ತೆ ನಡೆದಿತ್ತು.</p>.<p><strong>ಮದ್ಯ, ಮಾದಕ ವಸ್ತು ಸಹಿತ ಬಂಧನ</strong></p>.<p>ಕಾಸರಗೋಡು: ಮೇಲ್ಪರಂಬ ಕೊಪ್ಪಲ್ ಎಂಬಲ್ಲಿ ಬುಧವಾರ ಕಾರಿನಲ್ಲಿ ಸಾಗಿಸುತ್ತಿದ್ದ 181.44 ಲೀ. ಮದ್ಯ ಸಹಿತ ಚಾವಕಡ ಎಡಕ್ಕರ ನಿವಾಸಿಗಳಾದ ಅನ್ಸೀಫ್ ಎ.ಎಚ್. (38) ಮತ್ತು ಚಂದ್ರಶೇಖರನ್ (39) ಎಂಬುವರನ್ನು ಅಬಕಾರಿ ದಳ ಬಂಧಿಸಿದೆ.</p>.<p>ಇನ್ನೊಂದು ಪ್ರಕರಣದಲ್ಲಿ ಪೆರಿಯ ಮುತ್ತಡ್ಕ ಪುಳಿಕ್ಕಾಲು ಎಂಬಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 256 ಗ್ರಾಂ ಎಂಡಿಎಂಎ ಸಹಿತ ಪೊವ್ವಲ್ ನಿವಾಸಿ ಅಹಮ್ಮದ್ ಡ್ಯಾನಿಷ್ (30) ಮತ್ತು ಆಲಂಪಾಡಿಯ ಅಬ್ದುಲ್ ಖಾದರ್ (40) ಎಂಬುವರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸರಗೋಡು:</strong> ಜಿಲ್ಲೆಯಲ್ಲಿ ಬುಧವಾರ ನಡೆದ ಕಾರ್ಮಿಕರ ಹರತಾಳ ನಡೆಯಿತು.</p>.<p>ಕೇಂದ್ರ ಸರ್ಕಾರ ತಪ್ಪು ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳು ನಡೆಸಿದ ಪ್ರತಿಭಟನೆಯ ಖಾಸಗಿ ಮತ್ತು ಸರ್ಕಾರಿ ಬಸ್ಗಳು ಸಂಚಾರ ನಡೆಸಿರಲಿಲ್ಲ.</p>.<p>ಬಹುತೇಕ ಬಸ್ ನಿಲ್ದಾಣಗಳು ಬಿಕೋ ಅನ್ನುವಂತಿದ್ದವು. ಜಿಲ್ಲೆಯ ಕೆಲವೆಡೆ ಸಂಚಾರ ನಡೆಸಿದ ಖಾಸಗಿ ವಾಹನಗಳನ್ನು ಮುಷ್ಕರ ನಿರತರು ತಡೆದಾಗ ವಾಗ್ವಾದ ನಡೆಯಿತು. ಈ ಸಂಬಂಧ ಮುಷ್ಕರ ನಿರತರ ಮತ್ತು ಪೊಲೀಸರ ನಡುವೆಯೂ ಕೊಂಚ ಹೊತ್ತು ಚರ್ಚೆ ನಡೆಯಿತು.</p>.<p>ನಗರದಲ್ಲಿ ಮುಷ್ಕರ ನಿರತ ಕಾರ್ಮಿಕ ಸಂಘಟನೆಗಳ ಮೆರವಣಿಗೆ ನಡೆಯಿತು. ನಗರದ ಪ್ರಧಾನ ಅಂಚೆ ಕಚೇರಿ ಮುಂದೆ ಶಾಸಕ ಸಿ.ಎಚ್.ಕುಂಞಂಬು ಎಡರಂಗ ಬೆಂಬಲಿತ ಕಾರ್ಮಿಕರ ಮೆರವಣಿಗೆಯನ್ನು ಉದ್ಘಾಟಿಸಿದರು.</p>.<p>ಎಐಟಿಯುಸಿ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.</p>.<p>ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಟಿ.ಕೆ.ರಾಜನ್, ಸಿ.ಎಂ.ಎ.ಜಲೀಲ್, ರಾಘವನ್ ಮಾಸ್ಟರ್ ಭಾಗವಹಿಸಿದ್ದರು.</p>.<p>ಎಂ.ಜಿ.ರಸ್ತೆಯಲ್ಲಿ ಐಕ್ಯರಂಗ ಬೆಂಬಲಿತ ಕಾರ್ಮಿಕರ ಮೆರವಣಿಗೆಯನ್ನು ಎಸ್.ಟಿ.ಯು.ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮುಹಮ್ಮದ್ ಅಶ್ರಫ್ ಉದ್ಘಾಟಿಸಿದರು. ಐ.ಎನ್.ಟಿ.ಯು.ಸಿ. ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ವಿ.ಕುಂಞಿರಾಮನ್ ಅಧ್ಯಕ್ಷತೆ ವಹಿಸಿದ್ದರು. ಅಶ್ರಫ್ ಎಡನೀರು, ಎ.ಅಹಮ್ಮದ್, ಅರ್ಜುನನ್ ತಾಯಲಂಗಾಡಿ, ಟಿ.ಜಿ.ಟೋನಿ ಭಾಗವಹಿಸಿದ್ದರು.</p>.<p><strong>ಕಾಣೆಯಾಗಿದ್ದ ಯುವಕನ ಶವ ನದಿಯಲ್ಲಿ ಪತ್ತೆ</strong></p>.<p>ಕಾಸರಗೋಡು: ಕಾಣೆಯಾಗಿದ್ದ ಯುವಕ, ಕಸಬ ನಿವಾಸಿ ಆದಿತ್ಯ (22) ಅವರ ಶವ ಕಸಬ ಕರಾವಳಿಯ ಹಾರ್ಬರ್ ಗೇಟ್ ಬಳಿಯ ನದಿಯಲ್ಲಿ ಬುಧವಾರ ಪತ್ತೆಯಾಗಿದೆ. ಶವದಲ್ಲಿ ಗಾಯಗಳು ಪತ್ತೆಯಾಗಿದ್ದು, ಊಹಾಪೋಹಕ್ಕೆ ಕಾರಣವಾಗಿದೆ. 2 ದಿನಗಳಿಂದ ಅವರು ಕಾಣೆಯಾಗಿದ್ದರು. ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.</p>.<p><strong>ಮೂರು ನಕಲಿ ಬಂದೂಕು ಸಹಿತ ಬಂಧನ</strong></p>.<p>ಕಾಸರಗೋಡು: ಕಳ್ಳಾರಿನ ಕೋಟೆಕುನ್ನು ಕೈಕಳಂ ಎಂಬಲ್ಲಿನ ಮನೆಯೊಂದಕ್ಕೆ ಬುಧವಾರ ದಾಳಿ ನಡೆಸಿದ ಪೊಲೀಸರು ಮೂರು ನಕಲಿ ಬಂದೂಕುಗಳ ಸಹಿತ ಕಣ್ಣೂರು ಆಲಕ್ಕೋಡು ಕಾರ್ತಿಕಪುರಂ ಎರುದಮಾಡ ಮೇಲರುಗಿಲ್ ನಿವಾಸಿ ಎಂ.ಕೆ.ಅಜಿತ್ ಕುಮಾರ್ (55) ಎಂಬಾತನನ್ನು ಬಂಧಿಸಿದ್ದಾರೆ.</p>.<p>ಪ್ರಕರಣ ಸಂಬಂಧ ರಾಜಪುರಂ ಪೂಂಜಕ್ಕರ ನಿವಾಸಿ ಸಂತೋಷ್, ಪರಪ್ಪ ನಿವಾಸಿ ಷಾಜಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>ಕಾಞಂಗಾಡು, ಬೇಕಲ ಡಿವೈಎಸ್ಪಿ ನೇತೃತ್ವದಲ್ಲಿ ರಾಜಪುರಂ ಪೊಲೀಸರು ದಾಳಿ ನಡೆಸಿದ್ದರು. ಬಂಧಿತನ ಹೆಚ್ಚುವರಿ ವಿಚಾರಣೆ ನಡೆಸಲಾಗುತ್ತಿದೆ.</p>.<p><strong>ಮಸೀದಿಗೆ ಕನ್ನ: ಆರೋಪಿ ಬಂಧನ</strong></p>.<p>ಕಾಸರಗೋಡು: ಸೂರ್ಲು ಸಲಫಿ ಮಸೀದಿಯಲ್ಲಿ ಜೂನ್ 24ರಂದು ₹ 3.10 ಲಕ್ಷ, 2 ಪವನ್ ಚಿನ್ನದ ಆಭರಣ ಕಳವು ನಡೆಸಿದ ಆರೋಪಿ ಆಂಧ್ರಪ್ರದೇಶದ ವೆಸ್ಟ್ ಗೋದಾವರಿ ಆಕ್ಕಿವಿಡು ನಿವಾಸಿ ಸಲ್ಮಾನ್ ಅಹಮ್ಮದ್ (34) ಎಂಬಾತನನ್ನು ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.</p>.<p>ಸಿಸಿಟಿವಿ ಕ್ಯಾಮೆರಾದ ದೃಶ್ಯದ ಆಧಾರದಲ್ಲಿ ಆರೋಪಿಯ ಪತ್ತೆ ನಡೆದಿತ್ತು.</p>.<p><strong>ಮದ್ಯ, ಮಾದಕ ವಸ್ತು ಸಹಿತ ಬಂಧನ</strong></p>.<p>ಕಾಸರಗೋಡು: ಮೇಲ್ಪರಂಬ ಕೊಪ್ಪಲ್ ಎಂಬಲ್ಲಿ ಬುಧವಾರ ಕಾರಿನಲ್ಲಿ ಸಾಗಿಸುತ್ತಿದ್ದ 181.44 ಲೀ. ಮದ್ಯ ಸಹಿತ ಚಾವಕಡ ಎಡಕ್ಕರ ನಿವಾಸಿಗಳಾದ ಅನ್ಸೀಫ್ ಎ.ಎಚ್. (38) ಮತ್ತು ಚಂದ್ರಶೇಖರನ್ (39) ಎಂಬುವರನ್ನು ಅಬಕಾರಿ ದಳ ಬಂಧಿಸಿದೆ.</p>.<p>ಇನ್ನೊಂದು ಪ್ರಕರಣದಲ್ಲಿ ಪೆರಿಯ ಮುತ್ತಡ್ಕ ಪುಳಿಕ್ಕಾಲು ಎಂಬಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 256 ಗ್ರಾಂ ಎಂಡಿಎಂಎ ಸಹಿತ ಪೊವ್ವಲ್ ನಿವಾಸಿ ಅಹಮ್ಮದ್ ಡ್ಯಾನಿಷ್ (30) ಮತ್ತು ಆಲಂಪಾಡಿಯ ಅಬ್ದುಲ್ ಖಾದರ್ (40) ಎಂಬುವರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>