ಸುಳ್ಯ: ನಿಂತಿಕಲ್ಲು ಸಮೀಪದ ಕಲ್ಲೇರಿಯಲ್ಲಿ ವಿದ್ಯುತ್ ಎಚ್.ಟಿ. ಲೈನ್ ಸ್ಪರ್ಶಗೊಂಡು ಬೈಕ್ ಸಹಿತ ಸವಾರ ಸುಟ್ಟು ಕರಕಲಾದ ಘಟನೆ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. ಮಂಡೆಕೋಲು ಗ್ರಾಮದ ಮೈತಡ್ಕ ತಿಮ್ಮಪ್ಪ ಗೌಡರ ಮಗ ಉಮೇಶ್ (45 ) ಮ್ರತಪಟ್ಟವರು.
ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿರುವ ಇವರು ಬಳ್ಪದ ಆಲ್ಕಬೆಯಲ್ಲಿರುವ ತನ್ನ ಪತ್ನಿಯ ಮನೆಗೆ ಬಂದಿದ್ದ ಬೆಳಗ್ಗಿನ ಜಾವ 4.3೦ಕ್ಕೆ ಅಲ್ಲಿಂದ ಹೊರಟು ತನ್ನ ಮನೆಗೆ ಹೋಗುತ್ತಿದ್ದಾಗ 4.45ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ.