ಇದಕ್ಕೆ ತಮಿಳುನಾಡು ಭಾಗದಿಂದ ಉತ್ತರ ಬರಲಿಲ್ಲ. ಈ ನಡುವೆ ರಿಬ್ಬನ್ ಫಿಶ್ (ಪಾಂಬೋಲ್) ಹಿಡಿಯಲು ತೆರಳಿದ ಮಂಗಳೂರಿನ ಮೀನುಗಾರರ ಮೇಲೆ ಆಕ್ರಮಣ ಮಾಡಲಾಗಿದೆ ಎಂಬ ದೂರುಗಳು ಕೇಳಿಬಂದಿವೆ. ಈ ನಡುವೆ, ತಮಿಳುನಾಡಿನ ಗಡಿ ದಾಟಿ ಮೀನುಗಾರಿಕೆ ಮಾಡಲು ಅವಕಾಶ ಇಲ್ಲ. ಹೀಗಿರುವಾಗ ಅಲ್ಲಿಗೆ ಯಾಕೆ ಹೋಗಬೇಕು ಎಂದು ಕೆಲವು ಬೋಟ್ಗಳ ಮಾಲೀಕರು ಹೇಳುತ್ತಿದ್ದಾರೆ.