ಪರಿಸರ ಹಾಗೂ ವನ್ಯಪ್ರಾಣಿಗಳ ರಕ್ಷಣೆಯ ತುಡಿತದೊಂದಿಗೆ ಕೆಲಸ ಮಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಎನ್ಇಸಿಎಫ್ ತಂಡವು, ನಗರ ಪ್ರದೇಶಗಳಲ್ಲಿ ಖಾಲಿ ಬಿದ್ದಿರುವ ಜಾಗಗಳಲ್ಲಿ ಹಸಿರು ಬೆಳೆಸುವ ಕಾರ್ಯ ಕೈಗೆತ್ತಿಕೊಂಡಿದೆ. ಕಾಡನ್ನು ಉಳಿಸುವ, ಹಸಿರು ಉಕ್ಕಿಸುವ ಈ ಹಸಿರು ಯಜ್ಞಕ್ಕೆ ನೂರಾರು ಜನರು ಕೈ ಜೋಡಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ಕಾಯಿಲೆ ಆತಂಕ, ಲಾಕ್ಡೌನ್ ನಿಯಮಾವಳಿಗಳು ಈ ಹಸಿರು ತಂಡದ ಕಾರ್ಯ ಚಟುವಟಿಕೆಗೆ ಅಡ್ಡಿಯಾಗಿಲ್ಲ. ಇನ್ನೇನು ಮುಂಗಾರು ಬಂದೇ ಬಿಟ್ಟಿದೆ, ಈ ಹಸಿರು ತಂಡ ಗಿಡ ನೆಡಲು ಅಣಿಯಾಗಿದೆ.