‘ಎರಡು ತಿಂಗಳಿಂದ ಕಳಪೆ ಕಡಲೆಬೇಳೆ, ಸಕ್ಕರೆ, ಮಸಾಲೆಪುಡಿ, ಶೆಂಗಾ, ಗೋಧಿ, ತೊಗರಿಬೇಳೆ, ಹೆಸರುಕಾಳುಗಳನ್ನು ತೂಕ ಮಾಡದೆ ಅಂದಾಜಿನ ಮೇಲೆ ವಿತರಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡಲಾದ ಆಹಾರ ಪದಾರ್ಥಗಳ ದಾಸ್ತಾನು ಪಟ್ಟಿ ಮತ್ತು ವಿತರಣೆಯ ಬಗ್ಗೆ ಫಲಕ ಹಾಕುವುದಿಲ್ಲ’ ಎಂದು ಪೋಷಕಿ ಶಾಲಿನಿ ಗೀರೀಶ ಆರೋಪಿಸಿದರು.