<p><strong>ದಾವಣಗೆರೆ:</strong> ಪ್ರಕರಣಗಳ ಇತ್ಯರ್ಥ ಮತ್ತು ತೀರ್ಪು ವಿಳಂಬವಾದರೆ ನ್ಯಾಯಾಲಯದ ಬಗ್ಗೆ ಜನರಲ್ಲಿ ವಿಶ್ವಾಸ ಕಡಿಮೆಯಾಗಲಿದೆ. ಆದ್ದರಿಂದ ಶೀಘ್ರ ವಿಲೇವಾರಿಗೆ ಒತ್ತು ನೀಡಬೇಕು. ಆ ಮುಖೇನ ನ್ಯಾಯಾಂಗದ ಘನತೆ ಎತ್ತಿ ಹಿಡಿಯಬೇಕು ಎಂದು ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಬಿ.ಎಲ್. ಜಿನರಾಳಕರ್ ಭೀಮರಾವ್ ಹೇಳಿದರು.</p>.<p>ವಕೀಲರ ದಿನಾಚರಣೆ ಅಂಗವಾಗಿ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ಕರ್ನಾಟಕದ ಜಿಲ್ಲಾ ಘಟಕದಿಂದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ನ್ಯಾಯಾಲಯಗಳ ಬಗ್ಗೆ ಜನವಿಶ್ವಾಸ ಹೆಚ್ಚಿಸುವಲ್ಲಿ ನ್ಯಾಯಾಧೀಶರು ಹಾಗೂ ವಕೀಲರ ಸಹಕಾರ ಅಗತ್ಯವಿದೆ’ ಎಂದರು.</p>.<p>ತ್ವರಿತವಾಗಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿಂದ ಜನರು ಕೋರ್ಟ್ಗಳಿಗೆ ಬರುತ್ತಿದ್ದಾರೆ. ಕೆಲಸದ ಒತ್ತಡ ಮತ್ತಿತರೆ ಕಾರಣದಿಂದಾಗಿ ಕೆಲ ಪ್ರಕರಣ ವಿಲೇ ತಡವಾಗಿರಬಹುದು. ಅಂತಹ ಪ್ರಕರಣ ವಿರಳ. 3ರಿಂದ 5 ತಿಂಗಳ ಅವಧಿಯೊಳಗೆ ಪ್ರಕರಣ ಇತ್ಯರ್ಥಪಡಿಸಲಾಗುತ್ತಿದೆ ಎಂದು ಹೇಳಿದರು.</p>.<p>‘ನ್ಯಾಯಾಧೀಶರು, ವಕೀಲರು ಇಬ್ಬರೂ ಸದಾ ವಿದ್ಯಾರ್ಥಿಗಳು. ಕೇವಲ ಕಾನೂನು ಪಠ್ಯ ಓದಿದರೆ ಸಾಲದು. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಮಾರ್ಪಾಡು, ಕಾಯ್ದೆಗಳು ಬರುತ್ತಿವೆ. ಹೀಗಾಗಿ ಕಾನೂನು ಅಧ್ಯಯನ ನಿರಂತರವಾಗಿರಬೇಕು. ನಮ್ಮಲ್ಲಿ ಕರಾರುವಕ್ಕಾದ ಫೀಡ್ಬ್ಯಾಕ್ ಇದ್ದರೆ ಪರಿಣಾಮಕಾರಿ ನ್ಯಾಯದಾನ ಮಾಡಬಹುದು’ ಎಂದು ಹೇಳಿದರು.</p>.<p>ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭು ಎನ್.ಬಡಿಗೇರ್ ಮಾತನಾಡಿ ಜನಸಾಮಾನ್ಯರಿಗೆ ನ್ಯಾಯದಾನ ದುಬಾರಿ ಆಗಬಾರದು ಎಂಬುದು ಅಧಿವಕ್ತಾ ಪರಿಷತ್ನ ಅಭಿಮತ. ಹೀಗಾಗಿ ಹಳೆ ಪ್ರಕರಣಗಳ ಇತ್ಯರ್ಥಕ್ಕೆ ಪ್ರತಿ 2 ತಿಂಗಳಿಗೊಮ್ಮೆ ನಡೆಯುತ್ತಿರುವ ಲೋಕ ಅದಾಲತ್ ಕಾರ್ಯಕ್ರಮಕ್ಕೆ ವಕೀಲರು ಸಹಕರಿಸಬೇಕು ಎಂದರು.</p>.<p>ನ್ಯಾಯಾಲಯದಲ್ಲಿ ಪ್ರಕರಣ ಗೆಲ್ಲಬಹುದು. ಆದರೆ ಲೋಕ ಅದಾಲತ್ನಲ್ಲಿ ರಾಜೀ ಸಂಧಾನದ ಮೂಲಕ ದಂಪತಿ, ಕುಟುಂಬ ಅಥವಾ ದಾಯಾದಿಗಳನ್ನು ಒಗ್ಗೂಡಿಸುವ ಪುಣ್ಯ ಸಿಗಲಿದೆ. ಹಣ ಸಂಪಾದನೆಗೆ ಗಮನ ಹರಿಸದೆ ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸುವ ಬದಲಾವಣೆ ಆಗಬೇಕು ಎಂದರು.</p>.<p>ವಕೀಲರ ಸಂಘದ ಜಿಲ್ಲಾಧ್ಯಕ್ಷ ಎನ್.ಟಿ. ಮಂಜುನಾಥ್ ಮಾತನಾಡಿ, 65-70ರ ದಶಕದಲ್ಲಿ ಎಂಬಿಬಿಎಸ್, ಎಂಜಿನಿಯರಿಂಗ್, ಬಿಎಸ್ಸಿ-ಎಂಎಸ್ಸಿ ನಂತರದಲ್ಲಿ ಎಲ್ಎಲ್ಬಿ ಕೋರ್ಸ್ ಕಡೆಯ ಆಯ್ಕೆ ಆಗಿರುತ್ತಿತ್ತು. 80ರಿಂದೀಚೆಗೆ ಕಾನೂನು ಪದವಿಗೆ ಆದ್ಯತೆ ನೀಡಲಾಗುತ್ತಿದೆ. ಈ ವೃತ್ತಿಯ ಬಗ್ಗೆ ತಾತ್ಸಾರ ಬೇಡ. ನೈತಿಕತೆ, ಸಾಮಾನ್ಯ ಜ್ಞಾನ ಮತ್ತು ಕಾನೂನಿನ ಅರಿವು ಇದ್ದವರೆ ಉತ್ತಮ ವಕೀಲರಾಗಲು ಸಾಧ್ಯ’ ಎಂದರು.</p>.<p>ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಜಿ.ಕೆ. ಸುರೇಶ್, ಅಧಿವಕ್ತಾ ಪರಿಷತ್ನ ಜಿಲ್ಲಾಧ್ಯಕ್ಷ ಎಲ್. ದಯಾನಂದ ಇದ್ದರು. ನಂತರ ನಡೆದ ಗೋಷ್ಠಿಗಳಲ್ಲಿ ಹೈಕೋರ್ಟ್ ವಕೀಲರಾದ ವಿಜಯಕುಮಾರ ಪಾಟೀಲ್, ಟಿ.ಪಿ. ಶ್ರೀನಿವಾಸ್, ಬಳ್ಳಾರಿಯ ಹಿರಿಯ ವಕೀಲ ವೈ. ರಂಗನಾಥರಾವ್ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಪ್ರಕರಣಗಳ ಇತ್ಯರ್ಥ ಮತ್ತು ತೀರ್ಪು ವಿಳಂಬವಾದರೆ ನ್ಯಾಯಾಲಯದ ಬಗ್ಗೆ ಜನರಲ್ಲಿ ವಿಶ್ವಾಸ ಕಡಿಮೆಯಾಗಲಿದೆ. ಆದ್ದರಿಂದ ಶೀಘ್ರ ವಿಲೇವಾರಿಗೆ ಒತ್ತು ನೀಡಬೇಕು. ಆ ಮುಖೇನ ನ್ಯಾಯಾಂಗದ ಘನತೆ ಎತ್ತಿ ಹಿಡಿಯಬೇಕು ಎಂದು ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಬಿ.ಎಲ್. ಜಿನರಾಳಕರ್ ಭೀಮರಾವ್ ಹೇಳಿದರು.</p>.<p>ವಕೀಲರ ದಿನಾಚರಣೆ ಅಂಗವಾಗಿ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ಕರ್ನಾಟಕದ ಜಿಲ್ಲಾ ಘಟಕದಿಂದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ನ್ಯಾಯಾಲಯಗಳ ಬಗ್ಗೆ ಜನವಿಶ್ವಾಸ ಹೆಚ್ಚಿಸುವಲ್ಲಿ ನ್ಯಾಯಾಧೀಶರು ಹಾಗೂ ವಕೀಲರ ಸಹಕಾರ ಅಗತ್ಯವಿದೆ’ ಎಂದರು.</p>.<p>ತ್ವರಿತವಾಗಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿಂದ ಜನರು ಕೋರ್ಟ್ಗಳಿಗೆ ಬರುತ್ತಿದ್ದಾರೆ. ಕೆಲಸದ ಒತ್ತಡ ಮತ್ತಿತರೆ ಕಾರಣದಿಂದಾಗಿ ಕೆಲ ಪ್ರಕರಣ ವಿಲೇ ತಡವಾಗಿರಬಹುದು. ಅಂತಹ ಪ್ರಕರಣ ವಿರಳ. 3ರಿಂದ 5 ತಿಂಗಳ ಅವಧಿಯೊಳಗೆ ಪ್ರಕರಣ ಇತ್ಯರ್ಥಪಡಿಸಲಾಗುತ್ತಿದೆ ಎಂದು ಹೇಳಿದರು.</p>.<p>‘ನ್ಯಾಯಾಧೀಶರು, ವಕೀಲರು ಇಬ್ಬರೂ ಸದಾ ವಿದ್ಯಾರ್ಥಿಗಳು. ಕೇವಲ ಕಾನೂನು ಪಠ್ಯ ಓದಿದರೆ ಸಾಲದು. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಮಾರ್ಪಾಡು, ಕಾಯ್ದೆಗಳು ಬರುತ್ತಿವೆ. ಹೀಗಾಗಿ ಕಾನೂನು ಅಧ್ಯಯನ ನಿರಂತರವಾಗಿರಬೇಕು. ನಮ್ಮಲ್ಲಿ ಕರಾರುವಕ್ಕಾದ ಫೀಡ್ಬ್ಯಾಕ್ ಇದ್ದರೆ ಪರಿಣಾಮಕಾರಿ ನ್ಯಾಯದಾನ ಮಾಡಬಹುದು’ ಎಂದು ಹೇಳಿದರು.</p>.<p>ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭು ಎನ್.ಬಡಿಗೇರ್ ಮಾತನಾಡಿ ಜನಸಾಮಾನ್ಯರಿಗೆ ನ್ಯಾಯದಾನ ದುಬಾರಿ ಆಗಬಾರದು ಎಂಬುದು ಅಧಿವಕ್ತಾ ಪರಿಷತ್ನ ಅಭಿಮತ. ಹೀಗಾಗಿ ಹಳೆ ಪ್ರಕರಣಗಳ ಇತ್ಯರ್ಥಕ್ಕೆ ಪ್ರತಿ 2 ತಿಂಗಳಿಗೊಮ್ಮೆ ನಡೆಯುತ್ತಿರುವ ಲೋಕ ಅದಾಲತ್ ಕಾರ್ಯಕ್ರಮಕ್ಕೆ ವಕೀಲರು ಸಹಕರಿಸಬೇಕು ಎಂದರು.</p>.<p>ನ್ಯಾಯಾಲಯದಲ್ಲಿ ಪ್ರಕರಣ ಗೆಲ್ಲಬಹುದು. ಆದರೆ ಲೋಕ ಅದಾಲತ್ನಲ್ಲಿ ರಾಜೀ ಸಂಧಾನದ ಮೂಲಕ ದಂಪತಿ, ಕುಟುಂಬ ಅಥವಾ ದಾಯಾದಿಗಳನ್ನು ಒಗ್ಗೂಡಿಸುವ ಪುಣ್ಯ ಸಿಗಲಿದೆ. ಹಣ ಸಂಪಾದನೆಗೆ ಗಮನ ಹರಿಸದೆ ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸುವ ಬದಲಾವಣೆ ಆಗಬೇಕು ಎಂದರು.</p>.<p>ವಕೀಲರ ಸಂಘದ ಜಿಲ್ಲಾಧ್ಯಕ್ಷ ಎನ್.ಟಿ. ಮಂಜುನಾಥ್ ಮಾತನಾಡಿ, 65-70ರ ದಶಕದಲ್ಲಿ ಎಂಬಿಬಿಎಸ್, ಎಂಜಿನಿಯರಿಂಗ್, ಬಿಎಸ್ಸಿ-ಎಂಎಸ್ಸಿ ನಂತರದಲ್ಲಿ ಎಲ್ಎಲ್ಬಿ ಕೋರ್ಸ್ ಕಡೆಯ ಆಯ್ಕೆ ಆಗಿರುತ್ತಿತ್ತು. 80ರಿಂದೀಚೆಗೆ ಕಾನೂನು ಪದವಿಗೆ ಆದ್ಯತೆ ನೀಡಲಾಗುತ್ತಿದೆ. ಈ ವೃತ್ತಿಯ ಬಗ್ಗೆ ತಾತ್ಸಾರ ಬೇಡ. ನೈತಿಕತೆ, ಸಾಮಾನ್ಯ ಜ್ಞಾನ ಮತ್ತು ಕಾನೂನಿನ ಅರಿವು ಇದ್ದವರೆ ಉತ್ತಮ ವಕೀಲರಾಗಲು ಸಾಧ್ಯ’ ಎಂದರು.</p>.<p>ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಜಿ.ಕೆ. ಸುರೇಶ್, ಅಧಿವಕ್ತಾ ಪರಿಷತ್ನ ಜಿಲ್ಲಾಧ್ಯಕ್ಷ ಎಲ್. ದಯಾನಂದ ಇದ್ದರು. ನಂತರ ನಡೆದ ಗೋಷ್ಠಿಗಳಲ್ಲಿ ಹೈಕೋರ್ಟ್ ವಕೀಲರಾದ ವಿಜಯಕುಮಾರ ಪಾಟೀಲ್, ಟಿ.ಪಿ. ಶ್ರೀನಿವಾಸ್, ಬಳ್ಳಾರಿಯ ಹಿರಿಯ ವಕೀಲ ವೈ. ರಂಗನಾಥರಾವ್ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>