<p><strong>ಹೊನ್ನಾಳಿ:</strong> ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಮಾರಿಕೊಪ್ಪ ಗ್ರಾಮದಲ್ಲಿ ದಸರಾ ಹಾಗೂ ಶರನ್ನವರಾತ್ರಿ ಮಹೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಹಳದಮ್ಮ ದೇವಿಯ ಬನ್ನಿ ಮಹೋತ್ಸವ ಸಹಸ್ರಾರು ಭಕ್ತರ ನಡುವೆ ಸಂಭ್ರಮದಿಂದ ನಡೆಯಿತು. </p>.<p>ಹಳದಮ್ಮ ದೇವಿಯ ದೇವಸ್ಥಾನದಿಂದ ಒಡ್ಡೊಲಗದೊಂದಿಗೆ ಮೆರವಣಿಗೆ ಹೊರಟ ಹಳದಮ್ಮ ದೇವಿಯು ಹೊನ್ನಾಳಿಯ ಹಿರೇಕಲ್ಮಠಕ್ಕೆ ಹೋಗಿ ಅಲ್ಲಿಂದ ಉಡಿಯಕ್ಕಿ ಪಡೆದುಕೊಂಡು ನೇರವಾಗಿ ಬನ್ನಿಮಂಟಪಕ್ಕೆ ಬಂದಿತು. </p>.<p>ದೇವಿಯ ಆಗಮನವಾಗುತ್ತಿದ್ದಂತೆ ಬನ್ನಿ ಮಂಟಪದಲ್ಲಿ ಕಾಯುತ್ತಿದ್ದ ಜೋಗಪ್ಪ, ಜೋಗತಿಯರು ತಮ್ಮ ದೀವಟಿಗೆಗಳನ್ನು ಹಿಡಿದು ಬನ್ನಿ ಮಂಟಪದತ್ತ ತಿರುಗಿ ಬೆಳಗಿದರು. </p>.<p>ದೇವಸ್ಥಾನದ ಪ್ರಧಾನ ಅರ್ಚಕ ಹಾಲನಗೌಡ ಅವರು 11 ದಿನ ಒಪ್ಪತ್ತು (ಉಪವಾಸ) ಇದ್ದು, ಶಮೀ ವೃಕ್ಷದ ಮುಂಭಾಗದಲ್ಲಿ ಮೂರು ಬಾಣಗಳನ್ನು (ಅಂಬು) ಹೂಡಿದರು. </p>.<p>ರೊಟ್ಟಿ ಬುತ್ತಿ ವಿಶೇಷ: ಹಳದಮ್ಮ ದೇವಿಯ ಭಕ್ತರು ಗುರುವಾರವೇ ರೊಟ್ಟಿ ಬುತ್ತಿ ಕಟ್ಟಿಕೊಂಡು ಕಾಲ್ನಡಿಗೆಯಲ್ಲಿ ಹೊರಟು ದೇವಸ್ಥಾನಕ್ಕೆ ಬಂದು ಎಡೆಹಾಕುವುದು ಇಲ್ಲಿನ ಸಂಪ್ರದಾಯ. ಎಡೆ ಹಾಕಿದ ನಂತರ ರೊಟ್ಟಿ ಬುತ್ತಿ ಸೇವಿಸಿ ಬನ್ನಿ ಮಂಟಪಕ್ಕೆ ಬರುತ್ತಾರೆ. </p>.<p>ಹರಕೆ ಹೊತ್ತವರು ಉಪವಾಸ ವ್ರತ ಕೈಗೊಂಡು ಬನ್ನಿ ಮುಡಿಯುವವರೆಗೂ ಆಹಾರ ಸೇವಿಸುವುದಿಲ್ಲ. ಬನ್ನಿ ವಿನಿಮಯದ ನಂತರವೇ ಆಹಾರ ಸೇವಿಸುತ್ತಾರೆ ಎನ್ನುತ್ತಾರೆ ಇಲ್ಲಿನ ಹಿರಿಯರು. </p>.<p>ಬನ್ನಿ ಉತ್ಸವದಲ್ಲಿ ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪರಸ್ಪರ ಬನ್ನಿಪತ್ರೆಗಳನ್ನು ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿತ್ತು. </p>.<p>ತಹಶೀಲ್ದಾರ್ ರಾಜಶೇಖರ್, ಸಿಪಿಐ ಸುನೀಲ್ಕುಮಾರ್, ಹತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹನುಮಂತಪ್ಪ, ಎಲ್. ಚಿನ್ನಪ್ಪ, ಹಳದಪ್ಪ, ಪುರಸಭೆ ಸದಸ್ಯ ಧರ್ಮಪ್ಪ, ಮುಜರಾಯಿ ಅಧೀಕ್ಷಕ ಬಿ.ಎನ್. ಕೃಷ್ಣಪ್ಪ, ರಾಜಸ್ವ ನಿರೀಕ್ಷಕ ರಮೇಶ್, ಗ್ರಾಮಾಡಳಿತಾಧಿಕಾರಿ ಮುನೇಶ್, ಶ್ರೀದೇವಿ ಧರ್ಮಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ:</strong> ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಮಾರಿಕೊಪ್ಪ ಗ್ರಾಮದಲ್ಲಿ ದಸರಾ ಹಾಗೂ ಶರನ್ನವರಾತ್ರಿ ಮಹೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಹಳದಮ್ಮ ದೇವಿಯ ಬನ್ನಿ ಮಹೋತ್ಸವ ಸಹಸ್ರಾರು ಭಕ್ತರ ನಡುವೆ ಸಂಭ್ರಮದಿಂದ ನಡೆಯಿತು. </p>.<p>ಹಳದಮ್ಮ ದೇವಿಯ ದೇವಸ್ಥಾನದಿಂದ ಒಡ್ಡೊಲಗದೊಂದಿಗೆ ಮೆರವಣಿಗೆ ಹೊರಟ ಹಳದಮ್ಮ ದೇವಿಯು ಹೊನ್ನಾಳಿಯ ಹಿರೇಕಲ್ಮಠಕ್ಕೆ ಹೋಗಿ ಅಲ್ಲಿಂದ ಉಡಿಯಕ್ಕಿ ಪಡೆದುಕೊಂಡು ನೇರವಾಗಿ ಬನ್ನಿಮಂಟಪಕ್ಕೆ ಬಂದಿತು. </p>.<p>ದೇವಿಯ ಆಗಮನವಾಗುತ್ತಿದ್ದಂತೆ ಬನ್ನಿ ಮಂಟಪದಲ್ಲಿ ಕಾಯುತ್ತಿದ್ದ ಜೋಗಪ್ಪ, ಜೋಗತಿಯರು ತಮ್ಮ ದೀವಟಿಗೆಗಳನ್ನು ಹಿಡಿದು ಬನ್ನಿ ಮಂಟಪದತ್ತ ತಿರುಗಿ ಬೆಳಗಿದರು. </p>.<p>ದೇವಸ್ಥಾನದ ಪ್ರಧಾನ ಅರ್ಚಕ ಹಾಲನಗೌಡ ಅವರು 11 ದಿನ ಒಪ್ಪತ್ತು (ಉಪವಾಸ) ಇದ್ದು, ಶಮೀ ವೃಕ್ಷದ ಮುಂಭಾಗದಲ್ಲಿ ಮೂರು ಬಾಣಗಳನ್ನು (ಅಂಬು) ಹೂಡಿದರು. </p>.<p>ರೊಟ್ಟಿ ಬುತ್ತಿ ವಿಶೇಷ: ಹಳದಮ್ಮ ದೇವಿಯ ಭಕ್ತರು ಗುರುವಾರವೇ ರೊಟ್ಟಿ ಬುತ್ತಿ ಕಟ್ಟಿಕೊಂಡು ಕಾಲ್ನಡಿಗೆಯಲ್ಲಿ ಹೊರಟು ದೇವಸ್ಥಾನಕ್ಕೆ ಬಂದು ಎಡೆಹಾಕುವುದು ಇಲ್ಲಿನ ಸಂಪ್ರದಾಯ. ಎಡೆ ಹಾಕಿದ ನಂತರ ರೊಟ್ಟಿ ಬುತ್ತಿ ಸೇವಿಸಿ ಬನ್ನಿ ಮಂಟಪಕ್ಕೆ ಬರುತ್ತಾರೆ. </p>.<p>ಹರಕೆ ಹೊತ್ತವರು ಉಪವಾಸ ವ್ರತ ಕೈಗೊಂಡು ಬನ್ನಿ ಮುಡಿಯುವವರೆಗೂ ಆಹಾರ ಸೇವಿಸುವುದಿಲ್ಲ. ಬನ್ನಿ ವಿನಿಮಯದ ನಂತರವೇ ಆಹಾರ ಸೇವಿಸುತ್ತಾರೆ ಎನ್ನುತ್ತಾರೆ ಇಲ್ಲಿನ ಹಿರಿಯರು. </p>.<p>ಬನ್ನಿ ಉತ್ಸವದಲ್ಲಿ ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪರಸ್ಪರ ಬನ್ನಿಪತ್ರೆಗಳನ್ನು ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿತ್ತು. </p>.<p>ತಹಶೀಲ್ದಾರ್ ರಾಜಶೇಖರ್, ಸಿಪಿಐ ಸುನೀಲ್ಕುಮಾರ್, ಹತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹನುಮಂತಪ್ಪ, ಎಲ್. ಚಿನ್ನಪ್ಪ, ಹಳದಪ್ಪ, ಪುರಸಭೆ ಸದಸ್ಯ ಧರ್ಮಪ್ಪ, ಮುಜರಾಯಿ ಅಧೀಕ್ಷಕ ಬಿ.ಎನ್. ಕೃಷ್ಣಪ್ಪ, ರಾಜಸ್ವ ನಿರೀಕ್ಷಕ ರಮೇಶ್, ಗ್ರಾಮಾಡಳಿತಾಧಿಕಾರಿ ಮುನೇಶ್, ಶ್ರೀದೇವಿ ಧರ್ಮಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>