ಕೆಪಿಟಿಸಿಎಲ್ ಸಿಬ್ಬಂದಿ ಸಿಲುಕಿರುವ ವಿಷಯವನ್ನು ಗ್ರಾಮಸ್ಥರು ಮಧ್ಯರಾತ್ರಿ ಒಂದು ಗಂಟೆಗೆ ತಿಳಿಸಿದ್ದಾರೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ನೇತೃತ್ವದಲ್ಲಿ ಹೊರಟ ತಂಡವು ಗ್ರಾಮಸ್ಥರ ಸಹಾಯ ಪಡೆದು ಕಾಡಜ್ಜಿಯ ಕೃಷಿ ಕೇಂದ್ರದವರೆಗೂ ಹೊರಟಿತು. ಕೃಷಿ ಕೇಂದ್ರದ ಬಳಿ ಮಳೆಯಿಂದಾಗಿ ಕಾಡಜ್ಜಿ ಹಳ್ಳ ತುಂಬಿದ್ದು, ಹಳ್ಳದಿಂದ 100 ಮೀಟರ್ ದೂರ ಇದ್ದ ಕೆಪಿಟಿಸಿಎಲ್ ಉಪಕೇಂದ್ರದ ಕಟ್ಟಡಕ್ಕೆ ಬರಲು ಗ್ರಾಮಸ್ಥರು ಹಿಂದೇಟು ಹಾಕಿದರು.