ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಮಳೆ: ಭತ್ತ ಬೆಳೆಗಾರರಲ್ಲಿ ಆತಂಕದ ಕಾರ್ಮೋಡ

Published : 1 ಜುಲೈ 2024, 6:51 IST
Last Updated : 1 ಜುಲೈ 2024, 6:51 IST
ಫಾಲೋ ಮಾಡಿ
Comments
ಹೊಳೆ ಸಮೀಪದ ಜಮೀನುಗಳಲ್ಲಿ ಭತ್ತದ ಸಸಿ ಮಡಿ ಮಾಡಿಕೊಳ್ಳಲಾಗಿದೆ. ನೀರಿನ ಖಾತರಿ ಇರುವವರು ಸಸಿ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಉಳಿದ ರೈತರು ಭದ್ರಾ ಜಲಾಶಯದ ನೀರಿಗೆ ಕಾಯುತ್ತಿದ್ದಾರೆ.
ಶ್ರೀನಿವಾಸ್‌ ಚಿಂತಾಲ್‌ ಜಂಟಿ ನಿರ್ದೇಶಕ ಕೃಷಿ ಇಲಾಖೆ
ಭದ್ರ ಜಲಾಶಯದ ಒಳಹರಿವಿನ ಪ್ರಮಾಣ ಭರವಸೆ ಮೂಡಿಸುತ್ತಿಲ್ಲ. ಭತ್ತ ಸಸಿ ಮಡಿ ಮಾಡಿಕೊಳ್ಳಲು ಇನ್ನೂ 15 ದಿನ ಕಾಯುತ್ತೇವೆ. ಇಲ್ಲವಾದರೆ ಮೆಕ್ಕೆಜೋಳದಂತಹ ಪರ್ಯಾಯ ಬೆಳೆ ಅನಿವಾರ್ಯ.
ಕೊಳೇನಹಳ್ಳಿ ಬಿ.ಎಂ.ಸತೀಶ್‌ ರೈತ ಮುಖಂಡ
ಚಲ್ಲು ಪದ್ಧತಿಯತ್ತ ರೈತರ ಚಿತ್ತ
ಸಮಯ ಉಳಿತಾಯ ಹಾಗೂ ವೆಚ್ಚ ಕಡಿತಗೊಳಿಸಲು ಭತ್ತದ ಚಲ್ಲು ಪದ್ಧತಿ ಕುರಿತು ಕೃಷಿ ಇಲಾಖೆ ಮೂಡಿಸಿದ ಜಾಗೃತಿಗೆ ಸ್ಪಂದನೆ ವ್ಯಕ್ತವಾಗುತ್ತಿದೆ. ಕಳೆದ ವರ್ಷ 10 ಸಾವಿರ ಎಕರೆ ಭತ್ತವನ್ನು ಈ ಪದ್ಧತಿಯ ಮೂಲಕ ಬೆಳೆಯಲಾಗಿದೆ. ಪ್ರಸಕ್ತ ವರ್ಷವೂ ಚಲ್ಲು ಭತ್ತದ ಪದ್ಧತಿಯತ್ತ ರೈತರು ಆಸಕ್ತಿ ತೋರುವ ಸಾಧ್ಯತೆ ಇದೆ. ‘ಭತ್ತದ ಸಸಿ ನಾಟಿ ಮಾಡುವ ವ್ಯವಸ್ಥೆಗೆ ಪರ್ಯಾಯವಾಗಿ ಚಲ್ಲು ಪದ್ಧತಿ ಮುನ್ನೆಲೆಗೆ ಬಂದಿದೆ. ಸಮಯ ಹಾಗೂ ನಾಟಿ ಕಾರ್ಯಕ್ಕೆ ರೈತರು ಮಾಡುತ್ತಿದ್ದ ವೆಚ್ಚಕ್ಕೆ ಕಡಿವಾಣ ಬೀಳುತ್ತಿದೆ. ಯಾಂತ್ರೀಕೃತ ಪದ್ಧತ್ತಿಯಲ್ಲಿ 15 ದಿನದ ಸಸಿಯನ್ನು ನಾಟಿ ಮಾಡಬಹುದಾಗಿದೆ. ಜುಲೈ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ ಭತ್ತದ ನಾಟಿ ಆರಂಭವಾಗುತ್ತದೆ. ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದ್ದು ಮುಂಗಾರು ಮೇಲೆ ಭರವಸೆ ಇದೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT