ಚಲ್ಲು ಪದ್ಧತಿಯತ್ತ ರೈತರ ಚಿತ್ತ
ಸಮಯ ಉಳಿತಾಯ ಹಾಗೂ ವೆಚ್ಚ ಕಡಿತಗೊಳಿಸಲು ಭತ್ತದ ಚಲ್ಲು ಪದ್ಧತಿ ಕುರಿತು ಕೃಷಿ ಇಲಾಖೆ ಮೂಡಿಸಿದ ಜಾಗೃತಿಗೆ ಸ್ಪಂದನೆ ವ್ಯಕ್ತವಾಗುತ್ತಿದೆ. ಕಳೆದ ವರ್ಷ 10 ಸಾವಿರ ಎಕರೆ ಭತ್ತವನ್ನು ಈ ಪದ್ಧತಿಯ ಮೂಲಕ ಬೆಳೆಯಲಾಗಿದೆ. ಪ್ರಸಕ್ತ ವರ್ಷವೂ ಚಲ್ಲು ಭತ್ತದ ಪದ್ಧತಿಯತ್ತ ರೈತರು ಆಸಕ್ತಿ ತೋರುವ ಸಾಧ್ಯತೆ ಇದೆ. ‘ಭತ್ತದ ಸಸಿ ನಾಟಿ ಮಾಡುವ ವ್ಯವಸ್ಥೆಗೆ ಪರ್ಯಾಯವಾಗಿ ಚಲ್ಲು ಪದ್ಧತಿ ಮುನ್ನೆಲೆಗೆ ಬಂದಿದೆ. ಸಮಯ ಹಾಗೂ ನಾಟಿ ಕಾರ್ಯಕ್ಕೆ ರೈತರು ಮಾಡುತ್ತಿದ್ದ ವೆಚ್ಚಕ್ಕೆ ಕಡಿವಾಣ ಬೀಳುತ್ತಿದೆ. ಯಾಂತ್ರೀಕೃತ ಪದ್ಧತ್ತಿಯಲ್ಲಿ 15 ದಿನದ ಸಸಿಯನ್ನು ನಾಟಿ ಮಾಡಬಹುದಾಗಿದೆ. ಜುಲೈ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ ಭತ್ತದ ನಾಟಿ ಆರಂಭವಾಗುತ್ತದೆ. ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದ್ದು ಮುಂಗಾರು ಮೇಲೆ ಭರವಸೆ ಇದೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್.