ದೇವಿಕೆರೆ ಪಂಚಾಯಿತಿ ವ್ಯಾಪ್ತಿಯ ಮೆದಿಕೆರೇನಹಳ್ಳಿ ಗ್ರಾಮದ ಶಾಂತಕುಮಾರ್ ಎಂಬುವವರ ತಾಯಿ ಶಾರದಮ್ಮ ಹೆಸರಿನಲ್ಲಿರುವ ಮನೆಯ ಇ-ಸ್ವತ್ತು ಖಾತೆಯನ್ನು ಮಾಡಿಕೊಡಲು ಪಿಡಿಒ ಬಿ. ಬಸವರಾಜಪ್ಪ ₹ 10 ಸಾವಿರ ಹಣಕ್ಕೆ ಬೇಡಿಕೆ ಇಟ್ಟು ಸತಾಯಿಸುತ್ತಿದ್ದರು. ದೂರುದಾರರ ದೂರಿನ ಆಧಾರದ ಮೇಲೆ ಬಲೆ ಬೀಸಿದ ಲೋಕಾಯುಕ್ತರು ದಾವಣಗೆರೆ ನಗರದ ಹಳೇ ಬಸ್ ನಿಲ್ದಾಣದ ಸಮೀಪ ಕಟ್ಟಡವೊಂದರಲ್ಲಿ ಪಿಡಿಒ ಬಸವರಾಜಪ್ಪ ದೂರುದಾರರಿಂದ ₹ 5000 ಪಡೆಯುತ್ತಿದ್ದಾದ ದಾಳಿ ನಡೆಸಿ ಬಂಧಿಸಿದ್ದಾರೆ. ಜಿಲ್ಲಾ ಲೋಕಾಯುಕ್ತ ಅಧೀಕ್ಷಕರಾದ ಎಂ.ಎಸ್. ಕೌಲಾಪೂರೆ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ರಾಷ್ಟ್ರಪತಿ, ಆಂಜನೇಯ ಹಾಗೂ ಸಿಬ್ಬಂದಿ ಚಂದ್ರಶೇಖರ್, ವೀರೇಶಯ್ಯ, ಸುರೇಶ್, ಧನರಾಜ್, ಮೋಹನ್, ಬಸವರಾಜ ಹಾಗೂ ವಿನಾಯಕ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.