<p><strong>ದಾವಣಗೆರೆ</strong>: ಮೆಕ್ಕೆಜೋಳಕ್ಕೆ ಈಗ ಉತ್ತಮ ದರವಿದ್ದರೂ ಮಳೆಯಿಂದಾಗಿ ಬೆಳೆ ಕಟಾವು ಮಾಡಲಾಗದೆ ರೈತರು ಪರಿತಪಿಸುತ್ತಿದ್ದಾರೆ. ಕಟಾವು ಮುಗಿಯುವ ವೇಳೆಗೆ ಬೆಳೆ ಕುಸಿಯುವ ಆತಂಕ ಅವರನ್ನು ಕಾಡುತ್ತಿದೆ. </p>.<p>ಇಲ್ಲಿನ ಎಪಿಎಂಸಿಯಲ್ಲಿ ಮೆಕ್ಕೆಜೋಳಕ್ಕೆ ಕ್ವಿಂಟಲ್ಗೆ ₹2,200 ದರವಿದೆ. ಜಿಲ್ಲೆಯಲ್ಲಿ ಸದ್ಯ ಕಟಾವು ಪೂರ್ತಿಯಾಗಿ ಆರಂಭಗೊಂಡಿಲ್ಲ. ಎಪಿಎಂಸಿಗೆ ಸದ್ಯ ನಿತ್ಯ ಸರಾಸರಿ 9 ಸಾವಿರ ಕ್ವಿಂಟಲ್ ಆವಕವಾಗುತ್ತಿದೆ. </p>.<p>ಜಿಲ್ಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ 1.20 ಲಕ್ಷ ಹೆಕ್ಟೇರ್ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಹಾವೇರಿ, ಶಿವಮೊಗ್ಗ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗಿದೆ.</p>.<p>ಮಳೆಯಿಂದ ಹಲವೆಡೆ ಜಮೀನುಗಳಲ್ಲಿ ನೀರು ನಿಂತಿದೆ. ಇದರಿಂದ ಕಟಾವು ಯಂತ್ರಗಳು ತೆರಳಲು ಸಾಧ್ಯವಾಗುತ್ತಿಲ್ಲ. ಕೂಲಿ ಕಾರ್ಮಿಕರ ಅಲಭ್ಯತೆಯಿಂದಾಗಿಯೂ ಕಟಾವು ಮುಂದೂಡಲಾಗುತ್ತಿದೆ. </p>.<p>‘ಮೆಕ್ಕೆಜೋಳಕ್ಕೆ ಒಳ್ಳೆ ದರ ಇದೆ. ದಲ್ಲಾಳಿಗಳು ಜಮೀನಿಗೆ ಬಂದು ಖರೀದಿಸುತ್ತಿದ್ದು, ಕ್ವಿಂಟಲ್ಗೆ ₹1,900 ರಿಂದ ₹2,100 ಸಿಗುತ್ತಿದೆ’ ಎಂದು ಚನ್ನಗಿರಿ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ರೈತ ಎಸ್.ಎಂ.ಮುನಿ ತಿಳಿಸಿದರು. </p>.<p>‘ಕೆಲ ಜಮೀನಿನಲ್ಲಿ ನೀರು ನಿಂತಿರುವುದರಿಂದ ಕಟಾವು ಯಂತ್ರ ತರಲಾಗುತ್ತಿಲ್ಲ. ತಗ್ಗು ಭಾಗದಲ್ಲಿ ಬೆಳೆಯು ನೀರು ಪಾಲಾಗಿದೆ’ ಎಂದು ಜಗಳೂರು ತಾಲ್ಲೂಕಿನ ಅಸಗೋಡುವಿನ ರಾಘವೇಂದ್ರ ಹೇಳಿದರು. </p>.<p>ಆರಂಭವಾಗದ ಖರೀದಿ ಕೇಂದ್ರ: ಮೆಕ್ಕೆಜೋಳಕ್ಕೆ ಈ ಬಾರಿ ಕೇಂದ್ರ ಸರ್ಕಾರವು ಕ್ವಿಂಟಲ್ಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ₹2,400 ಘೋಷಿಸಿದೆ. ಆದರೆ, ಇದುವರೆಗೂ ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ.</p>.<p>‘ರೈತರು ಮೆಕ್ಕೆಜೋಳವನ್ನು ದಲ್ಲಾಳಿಗಳಿಗೆ ಹಾಗೂ ಎಪಿಎಂಸಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಶೀಘ್ರವೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಒತ್ತಾಯಿಸಿದರು.</p>.<div><blockquote>ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಾರದೊಳಗೆ ಅನುಮತಿ ಸಿಗುವ ನಿರೀಕ್ಷೆ ಇದೆ.</blockquote><span class="attribution">ಮಧುಸೂದನ್ ಕೆ.ಪಿ. ಜಂಟಿ ನಿರ್ದೇಶಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ</span></div>.<p><strong>‘ತಮಿಳುನಾಡಿನಲ್ಲಿ ಕಟಾವು ಶುರುವಾಗಿಲ್ಲ’ </strong></p><p> ‘ತಮಿಳುನಾಡು ಬಿಹಾರ ಸೇರಿ ಕೆಲ ರಾಜ್ಯಗಳಲ್ಲಿ ಮೆಕ್ಕೆಜೋಳ ಬೆಳೆ ಕಟಾವು ಶುರುವಾಗಿಲ್ಲ. ಅಲ್ಲಿ ಕಟಾವು ಶುರುವಾದರೆ ಬೆಲೆ ಇಳಿಯುವ ಸಾಧ್ಯತೆ ಇದೆ’ ಎಂದು ದಾವಣಗೆರೆ ಎಪಿಎಂಸಿಯ ಸಹಾಯಕ ನಿರ್ದೇಶಕ ಜೆ.ಪ್ರಭು ತಿಳಿಸಿದರು. ‘ರಾಜ್ಯದಿಂದ ಹೆಚ್ಚಿನ ಪ್ರಮಾಣದ ಜೋಳವನ್ನು ತಮಿಳುನಾಡಿಗೆ ಪೂರೈಸಲಾಗುತ್ತಿದೆ. ಈ ಭಾಗದ ಸಕ್ಕರೆ ಕಾರ್ಖಾನೆಗಳು ಮೆಕ್ಕೆಜೋಳ ಬಳಸಿ ಎಥೆನಾಲ್ ತಯಾರಿಸುತ್ತಿವೆ. ಸಕ್ಕರೆ ಕಾರ್ಖಾನೆಗಳವರು ವ್ಯಾಪಾರಿಗಳ ಮೂಲಕ ಖರೀದಿಸುತ್ತಿದ್ದಾರೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ಮೆಕ್ಕೆಜೋಳಕ್ಕೆ ಈಗ ಉತ್ತಮ ದರವಿದ್ದರೂ ಮಳೆಯಿಂದಾಗಿ ಬೆಳೆ ಕಟಾವು ಮಾಡಲಾಗದೆ ರೈತರು ಪರಿತಪಿಸುತ್ತಿದ್ದಾರೆ. ಕಟಾವು ಮುಗಿಯುವ ವೇಳೆಗೆ ಬೆಳೆ ಕುಸಿಯುವ ಆತಂಕ ಅವರನ್ನು ಕಾಡುತ್ತಿದೆ. </p>.<p>ಇಲ್ಲಿನ ಎಪಿಎಂಸಿಯಲ್ಲಿ ಮೆಕ್ಕೆಜೋಳಕ್ಕೆ ಕ್ವಿಂಟಲ್ಗೆ ₹2,200 ದರವಿದೆ. ಜಿಲ್ಲೆಯಲ್ಲಿ ಸದ್ಯ ಕಟಾವು ಪೂರ್ತಿಯಾಗಿ ಆರಂಭಗೊಂಡಿಲ್ಲ. ಎಪಿಎಂಸಿಗೆ ಸದ್ಯ ನಿತ್ಯ ಸರಾಸರಿ 9 ಸಾವಿರ ಕ್ವಿಂಟಲ್ ಆವಕವಾಗುತ್ತಿದೆ. </p>.<p>ಜಿಲ್ಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ 1.20 ಲಕ್ಷ ಹೆಕ್ಟೇರ್ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಹಾವೇರಿ, ಶಿವಮೊಗ್ಗ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗಿದೆ.</p>.<p>ಮಳೆಯಿಂದ ಹಲವೆಡೆ ಜಮೀನುಗಳಲ್ಲಿ ನೀರು ನಿಂತಿದೆ. ಇದರಿಂದ ಕಟಾವು ಯಂತ್ರಗಳು ತೆರಳಲು ಸಾಧ್ಯವಾಗುತ್ತಿಲ್ಲ. ಕೂಲಿ ಕಾರ್ಮಿಕರ ಅಲಭ್ಯತೆಯಿಂದಾಗಿಯೂ ಕಟಾವು ಮುಂದೂಡಲಾಗುತ್ತಿದೆ. </p>.<p>‘ಮೆಕ್ಕೆಜೋಳಕ್ಕೆ ಒಳ್ಳೆ ದರ ಇದೆ. ದಲ್ಲಾಳಿಗಳು ಜಮೀನಿಗೆ ಬಂದು ಖರೀದಿಸುತ್ತಿದ್ದು, ಕ್ವಿಂಟಲ್ಗೆ ₹1,900 ರಿಂದ ₹2,100 ಸಿಗುತ್ತಿದೆ’ ಎಂದು ಚನ್ನಗಿರಿ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ರೈತ ಎಸ್.ಎಂ.ಮುನಿ ತಿಳಿಸಿದರು. </p>.<p>‘ಕೆಲ ಜಮೀನಿನಲ್ಲಿ ನೀರು ನಿಂತಿರುವುದರಿಂದ ಕಟಾವು ಯಂತ್ರ ತರಲಾಗುತ್ತಿಲ್ಲ. ತಗ್ಗು ಭಾಗದಲ್ಲಿ ಬೆಳೆಯು ನೀರು ಪಾಲಾಗಿದೆ’ ಎಂದು ಜಗಳೂರು ತಾಲ್ಲೂಕಿನ ಅಸಗೋಡುವಿನ ರಾಘವೇಂದ್ರ ಹೇಳಿದರು. </p>.<p>ಆರಂಭವಾಗದ ಖರೀದಿ ಕೇಂದ್ರ: ಮೆಕ್ಕೆಜೋಳಕ್ಕೆ ಈ ಬಾರಿ ಕೇಂದ್ರ ಸರ್ಕಾರವು ಕ್ವಿಂಟಲ್ಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ₹2,400 ಘೋಷಿಸಿದೆ. ಆದರೆ, ಇದುವರೆಗೂ ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ.</p>.<p>‘ರೈತರು ಮೆಕ್ಕೆಜೋಳವನ್ನು ದಲ್ಲಾಳಿಗಳಿಗೆ ಹಾಗೂ ಎಪಿಎಂಸಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಶೀಘ್ರವೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಒತ್ತಾಯಿಸಿದರು.</p>.<div><blockquote>ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಾರದೊಳಗೆ ಅನುಮತಿ ಸಿಗುವ ನಿರೀಕ್ಷೆ ಇದೆ.</blockquote><span class="attribution">ಮಧುಸೂದನ್ ಕೆ.ಪಿ. ಜಂಟಿ ನಿರ್ದೇಶಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ</span></div>.<p><strong>‘ತಮಿಳುನಾಡಿನಲ್ಲಿ ಕಟಾವು ಶುರುವಾಗಿಲ್ಲ’ </strong></p><p> ‘ತಮಿಳುನಾಡು ಬಿಹಾರ ಸೇರಿ ಕೆಲ ರಾಜ್ಯಗಳಲ್ಲಿ ಮೆಕ್ಕೆಜೋಳ ಬೆಳೆ ಕಟಾವು ಶುರುವಾಗಿಲ್ಲ. ಅಲ್ಲಿ ಕಟಾವು ಶುರುವಾದರೆ ಬೆಲೆ ಇಳಿಯುವ ಸಾಧ್ಯತೆ ಇದೆ’ ಎಂದು ದಾವಣಗೆರೆ ಎಪಿಎಂಸಿಯ ಸಹಾಯಕ ನಿರ್ದೇಶಕ ಜೆ.ಪ್ರಭು ತಿಳಿಸಿದರು. ‘ರಾಜ್ಯದಿಂದ ಹೆಚ್ಚಿನ ಪ್ರಮಾಣದ ಜೋಳವನ್ನು ತಮಿಳುನಾಡಿಗೆ ಪೂರೈಸಲಾಗುತ್ತಿದೆ. ಈ ಭಾಗದ ಸಕ್ಕರೆ ಕಾರ್ಖಾನೆಗಳು ಮೆಕ್ಕೆಜೋಳ ಬಳಸಿ ಎಥೆನಾಲ್ ತಯಾರಿಸುತ್ತಿವೆ. ಸಕ್ಕರೆ ಕಾರ್ಖಾನೆಗಳವರು ವ್ಯಾಪಾರಿಗಳ ಮೂಲಕ ಖರೀದಿಸುತ್ತಿದ್ದಾರೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>