<p><strong>ಬಸವಾಪಟ್ಟಣ: </strong>ಇಲ್ಲಿಯ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಭದ್ರಾ ಮತ್ತು ಸೂಳೆಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಗಾಲದ ಹಂಗಾಮಿನಲ್ಲಿ ನಾಟಿ ಮಾಡಲಾಗಿದ್ದ 3,200 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೊಯ್ಲು ಆರಂಭವಾಗಿದೆ.</p>.<p>ಈ ಭಾಗದಲ್ಲಿ ಶೇ 90ರಷ್ಟು ಪ್ರದೇಶದಲ್ಲಿ ಆರ್.ಎನ್.ಆರ್ ಮತ್ತು ಶೇ 10ರಷ್ಟು ಪ್ರದೇಶದಲ್ಲಿ ಶ್ರೀರಾಮ್<br />ತಳಿಯ ಭತ್ತವನ್ನು ರೈತರು ನಾಟಿ ಮಾಡಿದ್ದಾರೆ. ಈ ಹಂಗಾಮಿನಲ್ಲಿ ಸಾಕಷ್ಟು ಮಳೆ ಬಿದ್ದಿರುವುದರಿಂದ ಯಾವುದೇ ರೋಗ ಬಾಧೆ ಭತ್ತಕ್ಕೆ ಕಂಡು ಬಂದಿಲ್ಲ. ಎಕರೆಗೆ 25 ಕ್ವಿಂಟಲ್ದಿಂದ 30 ಕ್ವಿಂಟಲ್ ಇಳುವರಿ ಬಂದಿದ್ದು, ರೈತರಲ್ಲಿ ಸ್ವಲ್ಪ ನೆಮ್ಮದಿ ಕಂಡು ಬಂದಿದೆ ಎಂದು ಕೃಷಿ ಅಧಿಕಾರಿ ಡಾ.ಡಿ.ಎಂ.ರಂಗಸ್ವಾಮಿ<br />ತಿಳಿಸಿದ್ದಾರೆ.</p>.<p>ಗಂಗಾವತಿ ಮತ್ತು ಆಂಧ್ರ ಪ್ರದೇಶದಿಂದ ಬಂದಿರುವ ಹಾಗೂ ಸ್ಥಳೀಯರ ಭತ್ತದ ಕೊಯ್ಲಿನ ಯಂತ್ರಗಳಿಂದ ಕಟಾವು ನಡೆಯುತ್ತಿದ್ದು, ಗಂಟೆಯೊಂದಕ್ಕೆ ₹ 2,600 ಬಾಡಿಗೆಯಂತೆ ಕೊಯ್ಲು ನಡೆಯುತ್ತಿದೆ. ಈ ಯಂತ್ರಗಳು ಗದ್ದೆಗಳು ಒಣಗಿದ್ದರೆ ಒಂದೂ ಕಾಲು ಗಂಟೆಗೆ ಒಂದು<br />ಎಕರೆ ಭತ್ತವನ್ನು ಕಟಾವು ಮಾಡಿದರೆ, ತೇವವಿದ್ದ ಗದ್ದೆಗಳಲ್ಲಿ ಒಂದೂವರೆ ಗಂಟೆ ಬೇಕಾಗುತ್ತದೆ. ಪ್ರತಿ ವರ್ಷ ಮಳೆಗಾಲದ ಭತ್ತದ ಕೊಯ್ಲಿನ ವೇಳೆಗೆ ಮಳೆ ಸಂಪೂರ್ಣ ನಿಲ್ಲುತ್ತಿತ್ತು. ಆದರೆ ಈ ವರ್ಷ ನವೆಂಬರ್ನಲ್ಲಿಯೂ ಮಳೆ ಸುರಿಯುತ್ತಿದ್ದು, ಕೊಯ್ಲಿಗೆ ತೊಂದರೆಯಾಗಿದೆ. ಕಟಾವು ಮಾಡಿದ ಭತ್ತವನ್ನು ಒಣಗಿಸಲು ರೈತರು ಪರದಾಡಬೇಕಿದೆ’ ಎಂದು ರೈತರು ತಿಳಿಸಿದ್ದಾರೆ.</p>.<p>‘ಈಗ ಖಾಸಗಿ ವ್ಯಾಪಾರಿಗಳು ಒಂದು ಕ್ವಿಂಟಲ್ ಭತ್ತಕ್ಕೆ ₹ 2,150 ದರದಂತೆ ಖರೀದಿಸುತ್ತಿದ್ದಾರೆ. ಅಲ್ಲದೇ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ದಿನ ದಿನಕ್ಕೂ ಕುಸಿತವಾಗುತ್ತಿದೆ. ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದೆ. ಒಂದು ಎಕರೆ ಭತ್ತದ ಬೆಳೆಗೆ ₹ 25,000ಕ್ಕೂ ಹೆಚ್ಚು ಖರ್ಚು ಬರುತ್ತಿದ್ದು, ಕೇಂದ್ರ ಸರ್ಕಾರ ಒಂದು ಕ್ವಿಂಟಲ್ ಭತ್ತಕ್ಕೆ ₹ 1,940 ನಿಗದಿಪಡಿಸಿದೆ. ಆದರೆ ಇಡೀ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಸರ್ಕಾರ ಈವರೆಗೂ ಆರಂಭಿಸಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿ ಕ್ವಿಂಟಲ್ಗೆ ಕನಿಷ್ಠ ₹ 2,800ನ್ನು ನಿಗದಿಪಡಿಸಿ ಖರೀದಿಸಬೇಕು’ ಎಂದು ರೈತ ಸಂಘದ ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಎಸ್.ಆರ್. ರವಿಕುಮಾರ್ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಾಪಟ್ಟಣ: </strong>ಇಲ್ಲಿಯ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಭದ್ರಾ ಮತ್ತು ಸೂಳೆಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಗಾಲದ ಹಂಗಾಮಿನಲ್ಲಿ ನಾಟಿ ಮಾಡಲಾಗಿದ್ದ 3,200 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೊಯ್ಲು ಆರಂಭವಾಗಿದೆ.</p>.<p>ಈ ಭಾಗದಲ್ಲಿ ಶೇ 90ರಷ್ಟು ಪ್ರದೇಶದಲ್ಲಿ ಆರ್.ಎನ್.ಆರ್ ಮತ್ತು ಶೇ 10ರಷ್ಟು ಪ್ರದೇಶದಲ್ಲಿ ಶ್ರೀರಾಮ್<br />ತಳಿಯ ಭತ್ತವನ್ನು ರೈತರು ನಾಟಿ ಮಾಡಿದ್ದಾರೆ. ಈ ಹಂಗಾಮಿನಲ್ಲಿ ಸಾಕಷ್ಟು ಮಳೆ ಬಿದ್ದಿರುವುದರಿಂದ ಯಾವುದೇ ರೋಗ ಬಾಧೆ ಭತ್ತಕ್ಕೆ ಕಂಡು ಬಂದಿಲ್ಲ. ಎಕರೆಗೆ 25 ಕ್ವಿಂಟಲ್ದಿಂದ 30 ಕ್ವಿಂಟಲ್ ಇಳುವರಿ ಬಂದಿದ್ದು, ರೈತರಲ್ಲಿ ಸ್ವಲ್ಪ ನೆಮ್ಮದಿ ಕಂಡು ಬಂದಿದೆ ಎಂದು ಕೃಷಿ ಅಧಿಕಾರಿ ಡಾ.ಡಿ.ಎಂ.ರಂಗಸ್ವಾಮಿ<br />ತಿಳಿಸಿದ್ದಾರೆ.</p>.<p>ಗಂಗಾವತಿ ಮತ್ತು ಆಂಧ್ರ ಪ್ರದೇಶದಿಂದ ಬಂದಿರುವ ಹಾಗೂ ಸ್ಥಳೀಯರ ಭತ್ತದ ಕೊಯ್ಲಿನ ಯಂತ್ರಗಳಿಂದ ಕಟಾವು ನಡೆಯುತ್ತಿದ್ದು, ಗಂಟೆಯೊಂದಕ್ಕೆ ₹ 2,600 ಬಾಡಿಗೆಯಂತೆ ಕೊಯ್ಲು ನಡೆಯುತ್ತಿದೆ. ಈ ಯಂತ್ರಗಳು ಗದ್ದೆಗಳು ಒಣಗಿದ್ದರೆ ಒಂದೂ ಕಾಲು ಗಂಟೆಗೆ ಒಂದು<br />ಎಕರೆ ಭತ್ತವನ್ನು ಕಟಾವು ಮಾಡಿದರೆ, ತೇವವಿದ್ದ ಗದ್ದೆಗಳಲ್ಲಿ ಒಂದೂವರೆ ಗಂಟೆ ಬೇಕಾಗುತ್ತದೆ. ಪ್ರತಿ ವರ್ಷ ಮಳೆಗಾಲದ ಭತ್ತದ ಕೊಯ್ಲಿನ ವೇಳೆಗೆ ಮಳೆ ಸಂಪೂರ್ಣ ನಿಲ್ಲುತ್ತಿತ್ತು. ಆದರೆ ಈ ವರ್ಷ ನವೆಂಬರ್ನಲ್ಲಿಯೂ ಮಳೆ ಸುರಿಯುತ್ತಿದ್ದು, ಕೊಯ್ಲಿಗೆ ತೊಂದರೆಯಾಗಿದೆ. ಕಟಾವು ಮಾಡಿದ ಭತ್ತವನ್ನು ಒಣಗಿಸಲು ರೈತರು ಪರದಾಡಬೇಕಿದೆ’ ಎಂದು ರೈತರು ತಿಳಿಸಿದ್ದಾರೆ.</p>.<p>‘ಈಗ ಖಾಸಗಿ ವ್ಯಾಪಾರಿಗಳು ಒಂದು ಕ್ವಿಂಟಲ್ ಭತ್ತಕ್ಕೆ ₹ 2,150 ದರದಂತೆ ಖರೀದಿಸುತ್ತಿದ್ದಾರೆ. ಅಲ್ಲದೇ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ದಿನ ದಿನಕ್ಕೂ ಕುಸಿತವಾಗುತ್ತಿದೆ. ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದೆ. ಒಂದು ಎಕರೆ ಭತ್ತದ ಬೆಳೆಗೆ ₹ 25,000ಕ್ಕೂ ಹೆಚ್ಚು ಖರ್ಚು ಬರುತ್ತಿದ್ದು, ಕೇಂದ್ರ ಸರ್ಕಾರ ಒಂದು ಕ್ವಿಂಟಲ್ ಭತ್ತಕ್ಕೆ ₹ 1,940 ನಿಗದಿಪಡಿಸಿದೆ. ಆದರೆ ಇಡೀ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಸರ್ಕಾರ ಈವರೆಗೂ ಆರಂಭಿಸಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿ ಕ್ವಿಂಟಲ್ಗೆ ಕನಿಷ್ಠ ₹ 2,800ನ್ನು ನಿಗದಿಪಡಿಸಿ ಖರೀದಿಸಬೇಕು’ ಎಂದು ರೈತ ಸಂಘದ ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಎಸ್.ಆರ್. ರವಿಕುಮಾರ್ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>