<p><strong>ಕಡರನಾಯ್ಕನಹಳ್ಳಿ</strong>: ಸಮೀಪದ ಹಿಂಡಸಘಟ್ಟ ಕ್ಯಾಂಪಿನ ಬಳಿ ಇರುವ ವಿದ್ಯುತ್ ಪರಿವರ್ತಕವು (ಟಿ.ಸಿ) ಗಿಡಗಳು, ಬಳ್ಳಿಗಳಿಂದ ಆವೃತವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. </p>.<p>ಹಸಿರನ್ನೇ ಹೊದ್ದು ಮಲಗಿರುವ ವಿದ್ಯುತ್ ಪರಿವರ್ತಕದಿಂದ ಸ್ಥಳೀಯರಿಗೆ ಅಪಾಯ ಎದುರಾಗಿದೆ. ಅದರ ಬಳಿ ಹುಲ್ಲು ತಿನ್ನಲು ಜಾನುವಾರುಗಳು ತೆರಳುವ ಕಾರಣ ಅವಘಡ ಸಂಭವಿಸುವ ಸಾಧ್ಯತೆ ಇದೆ. </p>.<p>ಬೆಸ್ಕಾಂ ಸಿಬ್ಬಂದಿಯು ವಿದ್ಯುತ್ ಪರಿವರ್ತಕವನ್ನು ಸುತ್ತುವರಿದಿರುವ ಗಿಡ, ಬಳ್ಳಿಗಳನ್ನು ಕೂಡಲೇ ಕತ್ತರಿಸಬೇಕಿದೆ. </p>.<p>-ಎಂ.ಎಚ್.ರಾಮನಗೌಡ, ರಾಮಾನಾಯ್ಕ, ಎ.ಕೆ.ಚೌಡಪ್ಪ, ಸ್ಥಳೀಯರು</p><p><strong>ತ್ಯಾವಣಿಗೆ: ಎಟಿಎಂ ದುರಸ್ತಿಪಡಿಸಿ</strong></p><p>ತ್ಯಾವಣಿಗೆ: ಗ್ರಾಮದ ರಾಷ್ಟ್ರೀಕೃತ ಯೂನಿಯನ್ ಬ್ಯಾಂಕ್ನ ಎಟಿಎಂ ಬಂದ್ ಆಗಿ 1 ತಿಂಗಳು ಕಳೆದರೂ, ದುರಸ್ತಿಯಾಗಿಲ್ಲ. ಇದರಿಂದ ಗ್ರಾಹಕರು ಎಟಿಎಂ ಬಳಿ ಬಂದು ನಿರಾಶೆಯಿಂದ ಮರಳುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಎಟಿಎಂ ದುರಸ್ತಿಗೆ ಮುಂದಾಗುತ್ತಿಲ್ಲ. </p><p>ಬ್ಯಾಂಕ್ನಲ್ಲಿ ಯಾವಾಗಲೂ ಜನಜಂಗುಳಿ ಇರುತ್ತದೆ. ಇದರಿಂದಾಗಿ ಖಾತೆಯಿಂದ ಹಣ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಯೂನಿಯನ್ ಬ್ಯಾಂಕ್ ಖಾತೆದಾರರೇ ಹೆಚ್ಚಾಗಿದ್ದರೂ, ಎಟಿಎಂ ಸೇವೆ ಮಾತ್ರ ಸರಿಯಾಗಿಲ್ಲ. </p><p>ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಎಟಿಎಂ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.</p><p>-ಪ್ರಸನ್ನ, ರವಿ, ರಾಜು, ಸುರೇಶ್, ರೇಣುಕಾ, ದಾದಾಪೀರ್, ಗ್ರಾಮಸ್ಥರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡರನಾಯ್ಕನಹಳ್ಳಿ</strong>: ಸಮೀಪದ ಹಿಂಡಸಘಟ್ಟ ಕ್ಯಾಂಪಿನ ಬಳಿ ಇರುವ ವಿದ್ಯುತ್ ಪರಿವರ್ತಕವು (ಟಿ.ಸಿ) ಗಿಡಗಳು, ಬಳ್ಳಿಗಳಿಂದ ಆವೃತವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. </p>.<p>ಹಸಿರನ್ನೇ ಹೊದ್ದು ಮಲಗಿರುವ ವಿದ್ಯುತ್ ಪರಿವರ್ತಕದಿಂದ ಸ್ಥಳೀಯರಿಗೆ ಅಪಾಯ ಎದುರಾಗಿದೆ. ಅದರ ಬಳಿ ಹುಲ್ಲು ತಿನ್ನಲು ಜಾನುವಾರುಗಳು ತೆರಳುವ ಕಾರಣ ಅವಘಡ ಸಂಭವಿಸುವ ಸಾಧ್ಯತೆ ಇದೆ. </p>.<p>ಬೆಸ್ಕಾಂ ಸಿಬ್ಬಂದಿಯು ವಿದ್ಯುತ್ ಪರಿವರ್ತಕವನ್ನು ಸುತ್ತುವರಿದಿರುವ ಗಿಡ, ಬಳ್ಳಿಗಳನ್ನು ಕೂಡಲೇ ಕತ್ತರಿಸಬೇಕಿದೆ. </p>.<p>-ಎಂ.ಎಚ್.ರಾಮನಗೌಡ, ರಾಮಾನಾಯ್ಕ, ಎ.ಕೆ.ಚೌಡಪ್ಪ, ಸ್ಥಳೀಯರು</p><p><strong>ತ್ಯಾವಣಿಗೆ: ಎಟಿಎಂ ದುರಸ್ತಿಪಡಿಸಿ</strong></p><p>ತ್ಯಾವಣಿಗೆ: ಗ್ರಾಮದ ರಾಷ್ಟ್ರೀಕೃತ ಯೂನಿಯನ್ ಬ್ಯಾಂಕ್ನ ಎಟಿಎಂ ಬಂದ್ ಆಗಿ 1 ತಿಂಗಳು ಕಳೆದರೂ, ದುರಸ್ತಿಯಾಗಿಲ್ಲ. ಇದರಿಂದ ಗ್ರಾಹಕರು ಎಟಿಎಂ ಬಳಿ ಬಂದು ನಿರಾಶೆಯಿಂದ ಮರಳುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಎಟಿಎಂ ದುರಸ್ತಿಗೆ ಮುಂದಾಗುತ್ತಿಲ್ಲ. </p><p>ಬ್ಯಾಂಕ್ನಲ್ಲಿ ಯಾವಾಗಲೂ ಜನಜಂಗುಳಿ ಇರುತ್ತದೆ. ಇದರಿಂದಾಗಿ ಖಾತೆಯಿಂದ ಹಣ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಯೂನಿಯನ್ ಬ್ಯಾಂಕ್ ಖಾತೆದಾರರೇ ಹೆಚ್ಚಾಗಿದ್ದರೂ, ಎಟಿಎಂ ಸೇವೆ ಮಾತ್ರ ಸರಿಯಾಗಿಲ್ಲ. </p><p>ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕೂಡಲೇ ಎಟಿಎಂ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.</p><p>-ಪ್ರಸನ್ನ, ರವಿ, ರಾಜು, ಸುರೇಶ್, ರೇಣುಕಾ, ದಾದಾಪೀರ್, ಗ್ರಾಮಸ್ಥರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>