ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ: ಜಲ ಸಂಗ್ರಹ ಸಾಮರ್ಥ್ಯ ಕುಗ್ಗಿಸಿದ ಹೂಳು; ಜಲಮೂಲಗಳಿಗೆ ಬೇಕಿದೆ ಕಾಯಕಲ್ಪ

Published : 2 ಡಿಸೆಂಬರ್ 2024, 6:40 IST
Last Updated : 2 ಡಿಸೆಂಬರ್ 2024, 6:40 IST
ಫಾಲೋ ಮಾಡಿ
Comments
ಚನ್ನಗಿರಿ ತಾಲ್ಲೂಕು ಆಗರಬನ್ನಿಹಟ್ಟಿ ಗ್ರಾಮದ ಕೆರೆಯ ಹೂಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಘದಿಂದ ಎತ್ತಿದ್ದು ಈ ಬಾರಿ ಬಿದ್ದ ಮಳೆಗೆ ತುಂಬಿರುವುದರಿಂದ ಗ್ರಾಮದ ಮಹಿಳೆಯರು ಬಾಗಿನ ಅರ್ಪಿಸಿದರು
ಚನ್ನಗಿರಿ ತಾಲ್ಲೂಕು ಆಗರಬನ್ನಿಹಟ್ಟಿ ಗ್ರಾಮದ ಕೆರೆಯ ಹೂಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಘದಿಂದ ಎತ್ತಿದ್ದು ಈ ಬಾರಿ ಬಿದ್ದ ಮಳೆಗೆ ತುಂಬಿರುವುದರಿಂದ ಗ್ರಾಮದ ಮಹಿಳೆಯರು ಬಾಗಿನ ಅರ್ಪಿಸಿದರು
ಪ್ರಸಕ್ತ ವರ್ಷ ಸಮೃದ್ಧ ಮಳೆಯಾಗಿ ಜಿಲ್ಲೆಯ ಬಹುತೇಕ ಎಲ್ಲ ಕೆರೆಗಳೂ ತುಂಬಿವೆ. ಕೆಲವೆಡೆ ಒತ್ತುವರಿ ಸಮಸ್ಯೆಯಿಂದ ತಕ್ಕಷ್ಟು ನೀರು ಹರಿದಿಲ್ಲ. ಅಂತಹ ಕೆರೆಗಳನ್ನು ಗುರುತಿಸಿ ತೆರವು ಕಾರ್ಯ ಕೈಗೊಳ್ಳಲಾಗುವುದು.
ಸುರೇಶ್‌ ಇಟ್ನಾಳ್ ಜಿಲ್ಲಾ ಪಂಚಾಯಿತಿ ಸಿಇಒ 
ಕಾಲ ಕಾಲಕ್ಕೆ ಬಾಕಿ ಇರುವ ಕೆರೆಗಳ ಹೂಳನ್ನು ಎತ್ತುವ ಮೂಲಕ ರೈತರ ಬದಕು ಹಸನು ಮಾಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು
ಮಂಜುನಾಥ್ ಆಗರಬನ್ನಿಹಟ್ಟಿ ಚನ್ನಗಿರಿ ತಾಲ್ಲೂಕು
23 ಟಿಎಂಸಿ ಅಡಿ ನೀರು ಸಮುದ್ರದ ಪಾಲು
‘ಜಿಲ್ಲೆಯಲ್ಲಿ 538 ಕೆರೆಗಳಿದ್ದು 243 ಕೆರೆಗಳಿಗೆ ಮಾತ್ರ ಸಮರ್ಪಕ ನೀರು ಹರಿದು ಬಂದಿದೆ. ಉಳಿದ ಕೆರೆಗಳಲ್ಲಿ ನಿರೀಕ್ಷೆಯಷ್ಟು ನೀರು ಸಂಗ್ರಹವಾಗಿಲ್ಲ. ಒಟ್ಟು 40 ಟಿಎಂಸಿ ಅಡಿ ನೀರು ಶೇಖರಣೆಯಾಗಬೇಕಿತ್ತು. ಆದರೆ 17 ಟಿಎಂಡಿ ಅಡಿ ನೀರು ಮಾತ್ರವೇ ಸಂಗ್ರಹವಾಗಿದೆ. ಉಳಿದ 23 ಟಿಎಂಸಿ ಅಡಿ ನೀರು ಸಮುದ್ರದ ಪಾಲಾಗಿದೆ’ ಎನ್ನುವ ಲೆಕ್ಕಾಚಾರ ಮುಂದಿಡುತ್ತಾರೆ ಜಿಲ್ಲಾ ನೆಲ– ಜಲ ಪರಿಸರ ಆಂದೋಲನ ಸಮಿತಿ ಸಂಚಾಲಕ ಬಲ್ಲೂರು ರವಿಕುಮಾರ್‌. ‘ರೈಲ್ವೆ ಕಾಮಗಾರಿಗಳಿಗೆ ಹೆದ್ದಾರಿಗಳ ನಿರ್ಮಾಣಕ್ಕೆ ಮಣ್ಣು ಬೇಕು. ಅವುಗಳಿಗೆ ಮಣ್ಣು ಒದಗಿಸಲು ಮಾತ್ರ ಕೆರೆಯ ಹೂಳು ತೆಗೆಯಲು ಜಿಲ್ಲಾ ಪಂಚಾಯಿತಿಯಿಂದ ಸಹಕಾರ ಸಿಗುತ್ತಿದೆ. ರೈತರ ಜಮೀನುಗಳಿಗೆ ಹೂಳು ಒದಗಿಸಲು ಹಿಟಾಚಿ ನೆರವು ಸಿಗುವುದಿಲ್ಲ. ಸಣ್ಣ ಹಿಡುವಳಿ ರೈತರಿಗೆ ಪ್ರತಿ ಎಕರೆಗೆ 5 ಟ್ರ್ಯಾಕ್ಟರ್‌ ಹೂಳು ತುಂಬಿಸಿಕೊಳ್ಳಲು ಜಿಲ್ಲಾಡಳಿತದ ನೆರವು ಬೇಕು’ ಎಂದು ಒತ್ತಾಯಿಸುತ್ತಾರೆ ಅವರು.
ಹೂಳಿನಿಂದ ತುಂಬಿಹೋದ ದೊಡ್ಡ ಕೆರೆಗಳು ಡಿ. ಶ್ರೀನಿವಾಸ್
ಜಗಳೂರು: ನೂರಕ್ಕೂ ಹೆಚ್ಚು ಕೆರೆಗಳಿರುವ ಜಗಳೂರು ತಾಲ್ಲೂಕಿನಲ್ಲಿ ದಶಕಗಳಿಂದ ಹೂಳು ತೆಗೆಯದ ಕಾರಣ ಹಲವು ದೊಡ್ಡ ಕೆರೆಗಳು ಹೂಳಿನಿಂದ ತುಂಬಿಕೊಂಡಿದ್ದು ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹ ಸಾಧ್ಯವಾಗುತ್ತಿಲ್ಲ. ಸಣ್ಣ ನೀರಾವರಿ ಇಲಾಖೆ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಕೆರೆಗಳಿದ್ದರೂ ಬಯಲುಸೀಮೆಯ ನೀರಿನ ಪ್ರಮುಖ ಜಲಮೂಲಗಳಾಗಿರುವ ಕೆರೆಗಳು ಕಳೆಗುಂದಿವೆ. 516 ಎಕರೆಗೂ ಹೆಚ್ಚು ವಿಸ್ತೀರ್ಣದ ಐತಿಹಾಸಿಕ ಜಗಳೂರು ಕೆರೆ 5 ದಶಕಗಳ ನಂತರ ಭರ್ತಿಯಾಗಿದೆ. ಆದರೆ ಇಡೀ ಕೆರೆಯ ತುಂಬಾ ಕಳೆ ಸಸ್ಯಗಳು ಹಾಗೂ ಅಡಿಗಟ್ಟಲೆ ಹೂಳು ತುಂಬಿಕೊಂಡಿದೆ. 57 ಕೆರೆ ತುಂಬಿಸುವ ಯೋಜನೆ ಮತ್ತು ಉತ್ತಮ ಮಳೆ ಬಿದ್ದ ಕಾರಣ ಈ ಬಾರಿ ತಾಲ್ಲೂಕಿನಲ್ಲಿ ಚಿಕ್ಕ ದೊಡ್ಡ ಕೆರೆಗಳು ತುಂಬಿವೆ. ಆದರೆ ಯಥೇಚ್ಚ ಹೂಳು ನೀರು ಸಂಗ್ರಹಕ್ಕೆ ಅಡ್ಡಿಯಾಗಿದೆ. ಜಮ್ಮಾಪುರ ಭರಮಸಮುದ್ರ ಮುಂತಾದ ಕೆರೆಗಳಲ್ಲಿ ರೈತರೇ ತಮ್ಮ ಸ್ವಂತ ಖರ್ಚಿನಲ್ಲಿ ಜೆಸಿಬಿ ಯಂತ್ರಗಳು ಹಾಗೂ ಟ್ರ್ಯಾಕ್ಟರ್ ಮೂಲಕ ಕೆರೆ ಅಂಗಳದಲ್ಲಿನ ಹೂಳು ಹಾಗೂ ಕೆರೆಗೋಡನ್ನು ಪ್ರತಿ ವರ್ಷ ತಮ್ಮ ಜಮೀನುಗಳಿಗೆ ಸಾಗಿಸುತ್ತಿದ್ದಾರೆ. ಕೆಲವು ಸಣ್ಣಕೆರೆಗಳು ಮತ್ತು ಗೋಕಟ್ಟೆಗಳಲ್ಲಿ ಉದ್ಯೋಗಖಾತ್ರಿಯಡಿ ಆಗಾಗ್ಗೆ ಕಾಟಾಚಾರಕ್ಕೆ ಹೂಳು ತೆಗೆಯುವ ಕಾಮಗಾರಿ ನಡೆಯುತ್ತದೆ. ದೊಡ್ಡ ಪ್ರಮಾಣದಲ್ಲಿ ಇದರಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ ಎಂಬ ಆರೋಪಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT