‘ಮನುಷ್ಯ ನಿಸರ್ಗದ ಭಾಗವಾಗಿ ಸರಳ ಜೀವನ ಶೈಲಿ, ಆರೋಗ್ಯಕರ ಬದುಕು ರೂಪಿಸಿಕೊಳ್ಳಬೇಕು. ರೋಗವನ್ನು ಗುಣಪಡಿಸಿಕೊಳ್ಳುವ ನಿರೋಧಕ ಶಕ್ತಿ ನಿಮ್ಮ ದೇಹದಲ್ಲಿದೆ. ರೋಗವನ್ನು ಆಹ್ವಾನಿಸಿಕೊಳ್ಳುವ ಅನಾರೋಗ್ಯಕರ ಜೀವನಶೈಲಿಯೂ ನಿಮ್ಮಲ್ಲಿಯೇ ಇದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವುದನ್ನು ನೀವೇ ನಿರ್ಧರಿಸಬೇಕು. ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ದೈಹಿಕ ಆರೋಗ್ಯವೂ ಚೆನ್ನಾಗಿ ಇರುತ್ತದೆ. ಔಷಧ, ಚಿಕಿತ್ಸೆ ಹಾಗೂ ಆಸ್ಪತ್ರೆ ಖರ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಆಯುರ್ವೇದ ಬಡವರಿಗೆ ಉತ್ತಮ ಔಷಧ’ ಎಂದು ಅಭಿಪ್ರಾಯಪಟ್ಟರು.