ಬುಧವಾರ, 1 ಅಕ್ಟೋಬರ್ 2025
×
ADVERTISEMENT
ADVERTISEMENT

ಹೊರಗುತ್ತಿಗೆ ನೇಮಕ | ಕಾರ್ಮಿಕರಿಗೆ ಅನ್ಯಾಯ: ಸಂಸದ ಜಗದೀಶ ಶೆಟ್ಟರ್‌

Published : 1 ಅಕ್ಟೋಬರ್ 2025, 6:56 IST
Last Updated : 1 ಅಕ್ಟೋಬರ್ 2025, 6:56 IST
ಫಾಲೋ ಮಾಡಿ
Comments
ಪ್ರೊ. ಕೆ.ಎಸ್‌. ಶರ್ಮಾ ಅವರ ವ್ಯಕ್ತಿತ್ವ ಪ್ರಶಸ್ತಿಯನ್ನೂ ಮೀರಿದ್ದು. ಅವರು ಜನಸಾಮಾನ್ಯರ ಹೃದಯದಲ್ಲಿದ್ದಾರೆ. ಅವರ ಶ್ರಮ ಹೋರಾಟಕ್ಕೆ ಯಾವ ಪುರಸ್ಕಾರ ಕೊಟ್ಟರೂ ಕಡಿಮೆ
ಜಗದೀಶ ಶೆಟ್ಟರ್‌ ಸಂಸದ
‘ನದಿನೀರು ಹಂಚಿಕೆ ಪರಿಹಾರ ಬೇಕಿದೆ’
‘ರಾಜ್ಯ–ರಾಜ್ಯಗಳ ನಡುವಿನ ನದಿ ನೀರು ಹಂಚಿಕೆ ವಿಷಯದಲ್ಲಿ ಕಾನೂನು ತೊಡಕುಗಳು ಸಮಸ್ಯೆಯನ್ನು ತಂದೊಡ್ಡುತ್ತಿದ್ದು ಸೂಕ್ತ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು. ‘ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸುವ ಕರ್ನಾಟಕದ ನಿರ್ಧಾರಕ್ಕೆ ಮಹಾರಾಷ್ಟ್ರ ಆಕ್ಷೇಪಿಸುತ್ತಿದೆ. ಕೊಲ್ಲಾಪುರ ಸಾಂಗ್ಲಿ ಭಾಗದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎನ್ನುವುದು ಅದರ ವಾದ. ಕೃಷ್ಣಾ ನ್ಯಾಯಮಂಡಳಿ ಆದೇಶದ ಪ್ರಕಾರ ಎತ್ತರ ಹೆಚ್ಚಿಸುವುದು ರಾಜ್ಯದ ಹಕ್ಕು. ಇಂತಹ ಕಲಹಗಳಿಂದ ನದಿ ನೀರು ಸರಿಯಾಗಿ ಹಂಚಿಕೆ ಆಗುತ್ತಿಲ್ಲ. ಕೋರ್ಟ್‌ನಲ್ಲಿ ವಾದ ಸರಿಯಾಗಿ ಮಂಡಿಸಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT