<p><strong>ಧಾರವಾಡ:</strong> ‘ಕ್ರೀಡೆಗಳಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಕ್ರೀಡೆಗಳಿಗೆ ಆದ್ಯತೆ ನೀಡುವುದರಿಂದ ನೆಮ್ಮದಿ ಜೀವನ ನಡೆಸಬಹುದು’ ಎಂದು ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ ಹೇಳಿದರು. </p>.<p>ಜಿಲ್ಲಾ ಒಲಿಂಪಿಕ್ ಅಸೋಸಿಯೇಷನ್ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಹಯೋಗದಲ್ಲಿ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ 10 ಕಿ.ಮೀ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. </p>.<p>‘ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿರುವ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಬದಲಿಗೆ ಭಾಗವಹಿಸುವಿಕೆ ಮುಖ್ಯ. ಕ್ರೀಡೆಗಳಿಂದ ಸ್ಪರ್ಧಾ ಮನೋಭಾವ ಮೂಡುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸಿದರೆ ಒತ್ತಡ ನಿವಾರಣೆಯಾಗುತ್ತದೆ’ ಎಂದರು.</p>.<p>ಕ್ರಾಸ್ ಕಂಟ್ರಿ ಓಟವು ದೈಹಿಕ ಸಾಮರ್ಥ್ಯದ ನೈಜ ಪರೀಕ್ಷೆ. ಇಂತಹ ಸ್ಪರ್ಧೆಯಲ್ಲಿ ಯುವ ಜನಾಂಗವು ಹೆಚ್ಚೆಚ್ಚು ಪಾಲ್ಗೊಳ್ಳಬೇಕು. ಸ್ಪರ್ಧೆಯ ನಿಮಯಮಗಳಿಗೆ ಬದ್ಧರಾಗಿ ನಡೆಯಬೇಕು ಎಂದು ಹೇಳಿದರು. </p>.<p>ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಶಿವು ಹಿರೇಮಠ ಮಾತನಾಡಿ, ಕ್ರೀಡೆಯು ಬದುಕಿನಲ್ಲಿ ಶಿಸ್ತು, ಸದೃಢದಿಂದ ಇರುವ ವಿಧಾನ ಕಲಿಸಲಿದೆ. ಓಟಗಾರರು ಗೆಲುವಿನತ್ತ ಗಮನ ಹರಿಸದೆ, ಕ್ರೀಡಾ ಸ್ಪೂರ್ತಿಯಿಂದ ಪಾಲ್ಗೊಳ್ಳಬೇಕು ಎಂದರು.</p>.<p>ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಎಲಿಗಾರ ಮಾತನಾಡಿ, ಎಲ್ಲರೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಉತ್ತಮ ಸಾಧನೆ ಮಾಡುವ ಮೂಲಕ ದೇಶಕ್ಕೆ ಹೆಮ್ಮೆ ತರಬೇಕು ಎಂದರು. </p>.<p>ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಬಸವರಾಜ ತಾಳಿಕೋಟಿ,ಅಂತರರಾಷ್ಟ್ರೀಯ ಕ್ರೀಡಾಪಟು ಸಿದ್ದಪ್ಪ ಶಿವನೂರ, ರಾಷ್ಟ್ರೀಯ ಕ್ರೀಡಾಪಟು ರಾಜೇಶ್ವರಿ ಪಾಟೀಲ, ಮಹೇಶ್ವರಿ ಉದಗಟ್ಟಿ, ಕೆ.ಎಸ್.ಭೀಮಣ್ಣವರ, ರಾಮಚಂದ್ರ ಪಡತಾರೆ ಉಪಸ್ಥಿತರಿದ್ದರು.</p>.<h2>ಜಿಲ್ಲಾ ಮಟ್ಟದ ಫಲಿತಾಂಶ</h2>.<p> <strong>4 ಕಿ.ಮೀ ಬಾಲಕರ ವಿಭಾಗ (16 ವರ್ಷದೊಳಗಿನವರು):</strong> 1.ಕುಮಾರಗೌಡ ಪಾಟೀಲ (ಧಾರವಾಡ) 2.ಮಹೇಶ ಕಲಗೌತ್ತಿ(ಧಾರವಾಡ) 3.ಮಂಜುನಾಥ ಪಾಟೀಲ (ಹುಬ್ಬಳ್ಳಿ) 4.ಸಂದೀಪ ವಡ್ಡರ (ಧಾರವಾಡ) 5.ಚನ್ನಬಸಯ್ಯ ಹಿರೇಮಠ (ಧಾರವಾಡ) 6.ಅರ್ಜುನ ತಳವಾರ (ಹುಬ್ಬಳ್ಳಿ). </p><p><strong>ಬಾಲಕಿಯರ ವಿಭಾಗ</strong>: 1.ಲಕ್ಷ್ಮಿ ಓಬ್ಬಣ್ಣವರ 2.ಶ್ರೇಯಾ ಗಂಟಿ 3.ತೈರಾ ಗಡದ 4.ರಾಜಶ್ರೀ ಮರೆಡ 5.ಸುಮಾ ನಂದೆಣ್ಣವರ 6ನೇ ಸ್ಥಾನ ಲಕ್ಷ್ಮೀ ಜಿ.ಪಡೆದಿದ್ದಾರೆ. (ಎಲ್ಲರೂ ಧಾರವಾಡದವರು).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ‘ಕ್ರೀಡೆಗಳಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಕ್ರೀಡೆಗಳಿಗೆ ಆದ್ಯತೆ ನೀಡುವುದರಿಂದ ನೆಮ್ಮದಿ ಜೀವನ ನಡೆಸಬಹುದು’ ಎಂದು ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ ಹೇಳಿದರು. </p>.<p>ಜಿಲ್ಲಾ ಒಲಿಂಪಿಕ್ ಅಸೋಸಿಯೇಷನ್ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಹಯೋಗದಲ್ಲಿ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ 10 ಕಿ.ಮೀ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. </p>.<p>‘ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿರುವ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಬದಲಿಗೆ ಭಾಗವಹಿಸುವಿಕೆ ಮುಖ್ಯ. ಕ್ರೀಡೆಗಳಿಂದ ಸ್ಪರ್ಧಾ ಮನೋಭಾವ ಮೂಡುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸಿದರೆ ಒತ್ತಡ ನಿವಾರಣೆಯಾಗುತ್ತದೆ’ ಎಂದರು.</p>.<p>ಕ್ರಾಸ್ ಕಂಟ್ರಿ ಓಟವು ದೈಹಿಕ ಸಾಮರ್ಥ್ಯದ ನೈಜ ಪರೀಕ್ಷೆ. ಇಂತಹ ಸ್ಪರ್ಧೆಯಲ್ಲಿ ಯುವ ಜನಾಂಗವು ಹೆಚ್ಚೆಚ್ಚು ಪಾಲ್ಗೊಳ್ಳಬೇಕು. ಸ್ಪರ್ಧೆಯ ನಿಮಯಮಗಳಿಗೆ ಬದ್ಧರಾಗಿ ನಡೆಯಬೇಕು ಎಂದು ಹೇಳಿದರು. </p>.<p>ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಶಿವು ಹಿರೇಮಠ ಮಾತನಾಡಿ, ಕ್ರೀಡೆಯು ಬದುಕಿನಲ್ಲಿ ಶಿಸ್ತು, ಸದೃಢದಿಂದ ಇರುವ ವಿಧಾನ ಕಲಿಸಲಿದೆ. ಓಟಗಾರರು ಗೆಲುವಿನತ್ತ ಗಮನ ಹರಿಸದೆ, ಕ್ರೀಡಾ ಸ್ಪೂರ್ತಿಯಿಂದ ಪಾಲ್ಗೊಳ್ಳಬೇಕು ಎಂದರು.</p>.<p>ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಎಲಿಗಾರ ಮಾತನಾಡಿ, ಎಲ್ಲರೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಉತ್ತಮ ಸಾಧನೆ ಮಾಡುವ ಮೂಲಕ ದೇಶಕ್ಕೆ ಹೆಮ್ಮೆ ತರಬೇಕು ಎಂದರು. </p>.<p>ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಬಸವರಾಜ ತಾಳಿಕೋಟಿ,ಅಂತರರಾಷ್ಟ್ರೀಯ ಕ್ರೀಡಾಪಟು ಸಿದ್ದಪ್ಪ ಶಿವನೂರ, ರಾಷ್ಟ್ರೀಯ ಕ್ರೀಡಾಪಟು ರಾಜೇಶ್ವರಿ ಪಾಟೀಲ, ಮಹೇಶ್ವರಿ ಉದಗಟ್ಟಿ, ಕೆ.ಎಸ್.ಭೀಮಣ್ಣವರ, ರಾಮಚಂದ್ರ ಪಡತಾರೆ ಉಪಸ್ಥಿತರಿದ್ದರು.</p>.<h2>ಜಿಲ್ಲಾ ಮಟ್ಟದ ಫಲಿತಾಂಶ</h2>.<p> <strong>4 ಕಿ.ಮೀ ಬಾಲಕರ ವಿಭಾಗ (16 ವರ್ಷದೊಳಗಿನವರು):</strong> 1.ಕುಮಾರಗೌಡ ಪಾಟೀಲ (ಧಾರವಾಡ) 2.ಮಹೇಶ ಕಲಗೌತ್ತಿ(ಧಾರವಾಡ) 3.ಮಂಜುನಾಥ ಪಾಟೀಲ (ಹುಬ್ಬಳ್ಳಿ) 4.ಸಂದೀಪ ವಡ್ಡರ (ಧಾರವಾಡ) 5.ಚನ್ನಬಸಯ್ಯ ಹಿರೇಮಠ (ಧಾರವಾಡ) 6.ಅರ್ಜುನ ತಳವಾರ (ಹುಬ್ಬಳ್ಳಿ). </p><p><strong>ಬಾಲಕಿಯರ ವಿಭಾಗ</strong>: 1.ಲಕ್ಷ್ಮಿ ಓಬ್ಬಣ್ಣವರ 2.ಶ್ರೇಯಾ ಗಂಟಿ 3.ತೈರಾ ಗಡದ 4.ರಾಜಶ್ರೀ ಮರೆಡ 5.ಸುಮಾ ನಂದೆಣ್ಣವರ 6ನೇ ಸ್ಥಾನ ಲಕ್ಷ್ಮೀ ಜಿ.ಪಡೆದಿದ್ದಾರೆ. (ಎಲ್ಲರೂ ಧಾರವಾಡದವರು).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>