ವರಿಷ್ಠರು ಹೇಳಿದ ಕಡೆ ಸ್ಪರ್ಧೆ:
‘ಲೋಕಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡುವ ವಿಷಯ ವರಿಷ್ಠರಿಗೆ ಬಿಟ್ಟಿದ್ದು. ಧಾರವಾಡ, ಹಾವೇರಿ, ಬೆಳಗಾವಿ ಸೇರಿದಂತೆ ವರಿಷ್ಠರು ಸೂಚಿಸಿದ ಕ್ಷೇತ್ರಗಳಲ್ಲಿ ಸ್ಪರ್ಧಿಸುವೆ. ಒಂದು ವೇಳೆ ಸ್ಪರ್ಧೆ ಬೇಡ, ಚುನಾವಣಾ ಪ್ರಚಾರ ಮಾಡುವಂತೆ ಹೇಳಿದರೆ ಅದಕ್ಕೂ ಸಿದ್ಧ’ ಎಂದು ಶೆಟ್ಟರ್ ತಿಳಿಸಿದರು.