ನಗರದ ವಿವಿಧೆಡೆ ದುಡಿಮೆ ಕಂಡುಕೊಂಡಿದ್ದ ಮಧ್ಯಪ್ರದೇಶ ಹಾಗೂ ಮಾಹಾರಾಷ್ಟ್ರದ ಕಾರ್ಮಿಕರು ಲಾಕ್ಡೌನ್ನಿಂದ ನಗರದಲ್ಲೇ ಉಳಿದುಕೊಂಡಿದ್ದರು. ಸೇವಾ ಸಿಂಧು ಆ್ಯಪ್ನಲ್ಲೂ ಇವರು ತಮ್ಮ ಊರುಗಳಿಗೆ ತೆರಳಲು ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ದೆಹಲಿಯಿಂದ ಮಾತ್ರ 15 ರೈಲು ಪ್ರಯಾಣ ಬೆಳೆಸುತ್ತಿರುವುದರಿಂದ, ತಮ್ಮ ಊರುಗಳಿಗೆ ತೆರಳಲು ಅಸಾಧ್ಯ ಎಂದು ಅರಿತ ಇವರು ಬೇರೆಯದೇ ಯೋಜನೆ ಸಿದ್ಧಪಡಿಸಿದರು.