<p><strong>ಕುಂದಗೋಳ</strong>: ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷ ಆರಂಭಿಸಿದ್ದು ಪಂಚಮಸಾಲಿ ಸಮುದಾಯವು ಸಮೀಕ್ಷೆಯಲ್ಲಿರುವ ಜಾತಿ ಕಾಲಂ ಸಂಖ್ಯೆ 9 ರಲ್ಲಿ ಕೋಡ್ ಸಂಖ್ಯೆ ಎ-0868 ರಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಬೇಕು ಎಂದು ತಾಲ್ಲೂಕು ಸಮಿತಿ ಒಮ್ಮತದಿಂದ ತೀರ್ಮಾನಿಸಿದ್ದು ಸಮಾಜ ಬಾಂದವರು ಜಾತಿ ಕಾಲಂನಲ್ಲಿ ಇದನ್ನು ನಮೂದಿಸಬೇಕೆಂದು ಲಿಂಗಾಯತ ಪಂಚಮಸಾಲಿ ಸಮಾಜದ ತಾಲ್ಲೂಕ ಅಧ್ಯಕ್ಷ ನಾಗರಾಜ ದೇಶಪಾಂಡೆ ಹೇಳಿದರು.</p>.<p>ಪಟ್ಟಣದ ಕಲ್ಯಾಣಪುರ ಬಸವಣ್ಣಜ್ಜನವರ ಸಭಾ ಮಂಟಪದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದವರು ಯಾವುದೇ ಗೊಂದಲಕ್ಕೆ ಕಿವಿಗೊಡದೆ ಧರ್ಮ ಕಾಲಂನಲ್ಲಿ ಹಿಂದೂ ಎಂದು ನಮೂದಿಸಿ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಿಕೊಳ್ಳಬೇಕು ಎಂದು ಈ ಕುರಿತು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೂಚಿಸಿದ್ದಾರೆ. ನಮ್ಮ ಸಮಾಜದ ಎಳ್ಗೆಗೆ ಶ್ರಮಿಸಿದ ಶ್ರೀಗಳೆ ನಮಗೆ ಮಾರ್ಗ ಎಂದರು.</p>.<p>ವಿಜಯಾನಂದ ಕಾಶಪ್ಪನವರು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮಿಜಿಯವರನ್ನು ಪೀಠದಿಂದ ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಸಮಾಜ ಒಪ್ಪುವುದಿಲ್ಲ. ಸಮಾಜದ ಏಳ್ಗೆಗಾಗಿ ಸ್ವಾಮೀಜಿ ಶ್ರಮಿಸುತ್ತಿದ್ದು, ಶ್ರೀಗಳ ಜೋತೆ ಭಕ್ತ ಸಮೂಹವಿದ್ದು ಕಾಶಪ್ಪನವರು ಒಬ್ಬರೇ ತೀರ್ಮಾನ ಮಾಡುವಂತಿಲ್ಲ ಎಂದರು.</p>.<p>ಪತ್ರಿಕಾಗೋಷ್ಟಿಯಲ್ಲಿ ಸೋಮರಾವ ದೇಸಾಯಿ, ಜಗನಾಥಗೌಡ ಸಿದ್ದನಗೌಡ್ರ, ರಾಜುಗೌಡ್ರ ಪಾಟೀಲ, ಗೌಡಪ್ಪಗೌಡ ಪಾಟೀಲ, ವಾಯ.ಬಿ ಬಿಳೇಬಾಳ, ಆರ್ ಎಮ್ ಕಮತರ, ಬಸವರಾಜ ನಾವಳ್ಳಿ, ಡಾ.ಪ್ರಭುಗೌಡ ಶಂಕ್ಯಾಗೌಶಾನಿ ಮಾತನಾಡಿದರು.</p>.<p>ಅಪ್ಪಣ್ಣ ಹುಂಡೇಕರ, ಜಿ.ಎಸ್.ಯಲಿವಾಳ, ಸೋಮನಗೌಡ ಪಾಟೀಲ, ಚನ್ನಪ್ಪ ಮಲ್ಲಾಪೂರ, ಶಂಕ್ರಪ್ಪ ಸಂಕಣ್ಣವರ, ವೈ.ಎನ್ ಪಾಟೀಲ, ವೆಂಕನಗೌಡ ಕಂಠೇಪ್ಪಗೌಡ್ರ, ಬಸವರಾಜ ಶಿರಸಂಗಿ, ಯಲ್ಲಪ್ಪ ಶಿಗ್ಗಾಂವಿ, ಯಲ್ಲಪ್ಪ ಸವಣೂರ, ಮಂಜು ಕಾಲವಾಡ,ಸಿದ್ದಣ್ಣ ಇಂಗಳಳ್ಳಿ, ಶೇಖಣ್ಣ ಬಾಳಿಕಾಯಿ, ವೆಂಕನಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂದಗೋಳ</strong>: ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷ ಆರಂಭಿಸಿದ್ದು ಪಂಚಮಸಾಲಿ ಸಮುದಾಯವು ಸಮೀಕ್ಷೆಯಲ್ಲಿರುವ ಜಾತಿ ಕಾಲಂ ಸಂಖ್ಯೆ 9 ರಲ್ಲಿ ಕೋಡ್ ಸಂಖ್ಯೆ ಎ-0868 ರಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಬೇಕು ಎಂದು ತಾಲ್ಲೂಕು ಸಮಿತಿ ಒಮ್ಮತದಿಂದ ತೀರ್ಮಾನಿಸಿದ್ದು ಸಮಾಜ ಬಾಂದವರು ಜಾತಿ ಕಾಲಂನಲ್ಲಿ ಇದನ್ನು ನಮೂದಿಸಬೇಕೆಂದು ಲಿಂಗಾಯತ ಪಂಚಮಸಾಲಿ ಸಮಾಜದ ತಾಲ್ಲೂಕ ಅಧ್ಯಕ್ಷ ನಾಗರಾಜ ದೇಶಪಾಂಡೆ ಹೇಳಿದರು.</p>.<p>ಪಟ್ಟಣದ ಕಲ್ಯಾಣಪುರ ಬಸವಣ್ಣಜ್ಜನವರ ಸಭಾ ಮಂಟಪದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದವರು ಯಾವುದೇ ಗೊಂದಲಕ್ಕೆ ಕಿವಿಗೊಡದೆ ಧರ್ಮ ಕಾಲಂನಲ್ಲಿ ಹಿಂದೂ ಎಂದು ನಮೂದಿಸಿ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಿಕೊಳ್ಳಬೇಕು ಎಂದು ಈ ಕುರಿತು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೂಚಿಸಿದ್ದಾರೆ. ನಮ್ಮ ಸಮಾಜದ ಎಳ್ಗೆಗೆ ಶ್ರಮಿಸಿದ ಶ್ರೀಗಳೆ ನಮಗೆ ಮಾರ್ಗ ಎಂದರು.</p>.<p>ವಿಜಯಾನಂದ ಕಾಶಪ್ಪನವರು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮಿಜಿಯವರನ್ನು ಪೀಠದಿಂದ ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಸಮಾಜ ಒಪ್ಪುವುದಿಲ್ಲ. ಸಮಾಜದ ಏಳ್ಗೆಗಾಗಿ ಸ್ವಾಮೀಜಿ ಶ್ರಮಿಸುತ್ತಿದ್ದು, ಶ್ರೀಗಳ ಜೋತೆ ಭಕ್ತ ಸಮೂಹವಿದ್ದು ಕಾಶಪ್ಪನವರು ಒಬ್ಬರೇ ತೀರ್ಮಾನ ಮಾಡುವಂತಿಲ್ಲ ಎಂದರು.</p>.<p>ಪತ್ರಿಕಾಗೋಷ್ಟಿಯಲ್ಲಿ ಸೋಮರಾವ ದೇಸಾಯಿ, ಜಗನಾಥಗೌಡ ಸಿದ್ದನಗೌಡ್ರ, ರಾಜುಗೌಡ್ರ ಪಾಟೀಲ, ಗೌಡಪ್ಪಗೌಡ ಪಾಟೀಲ, ವಾಯ.ಬಿ ಬಿಳೇಬಾಳ, ಆರ್ ಎಮ್ ಕಮತರ, ಬಸವರಾಜ ನಾವಳ್ಳಿ, ಡಾ.ಪ್ರಭುಗೌಡ ಶಂಕ್ಯಾಗೌಶಾನಿ ಮಾತನಾಡಿದರು.</p>.<p>ಅಪ್ಪಣ್ಣ ಹುಂಡೇಕರ, ಜಿ.ಎಸ್.ಯಲಿವಾಳ, ಸೋಮನಗೌಡ ಪಾಟೀಲ, ಚನ್ನಪ್ಪ ಮಲ್ಲಾಪೂರ, ಶಂಕ್ರಪ್ಪ ಸಂಕಣ್ಣವರ, ವೈ.ಎನ್ ಪಾಟೀಲ, ವೆಂಕನಗೌಡ ಕಂಠೇಪ್ಪಗೌಡ್ರ, ಬಸವರಾಜ ಶಿರಸಂಗಿ, ಯಲ್ಲಪ್ಪ ಶಿಗ್ಗಾಂವಿ, ಯಲ್ಲಪ್ಪ ಸವಣೂರ, ಮಂಜು ಕಾಲವಾಡ,ಸಿದ್ದಣ್ಣ ಇಂಗಳಳ್ಳಿ, ಶೇಖಣ್ಣ ಬಾಳಿಕಾಯಿ, ವೆಂಕನಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>