<p><strong>ನವಲಗುಂದ:</strong> ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿದ ಭಾರಿ ಮಳೆಗೆ ತಾಲ್ಲೂಕಿನಾದ್ಯಂತ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.</p>.<p>ಪಟ್ಟಣದ ಅಂಬೇಡ್ಕರ್ನಗರ ಸೇರಿದಂತೆ ತಾಲ್ಲೂಕಿನ ಗುಮ್ಮಗೋಳ, ಶಿರಕೋಳ, ಮೊರಬ ಗ್ರಾಮಗಳಲ್ಲಿ ಬೆಣ್ಣಿಹಳ್ಳದ ಪ್ರವಾಹದ ನೀರು ಮನೆಗಳಿ ನುಗ್ಗಿದೆ. ತಿರ್ಲಾಪುರ ಗ್ರಾಮದಲ್ಲಿನ ಕೆರೆ ತುಂಬಿ, ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಪರದಾಡಬೇಕಾಯಿತು.</p>.<p>ಮಳೆಯಿಂದಾಗಿ ಈರುಳ್ಳಿ, ಗೋವಿನಜೋಳ ಹಾಗೂ ಹತ್ತಿ ಬೆಳೆಗಳಿಗೆ ಹಾನಿಯಾಗಿದೆ. ತಾಲ್ಲೂಕಿನಾದ್ಯಂತ 8,965 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ತಾಲ್ಲೂಕು ಆಡಳಿತ ಮಾಹಿತಿ ನೀಡಿದೆ.</p>.<p>ಅರೆಕುರಟ್ಟಿ ಗ್ರಾಮದಲ್ಲಿ 2 ಮನೆಗಳು ಜಲಾವೃತಗೊಂಡಿವೆ. 131 ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಆಹಾರಧಾನ್ಯಗಳು ಹಾಳಾಗಿವೆ. 47 ಮನೆಗಳು ಭಾಗಶಃ ಕುಸಿದಿವೆ.</p>.<p>ತಾಲ್ಲೂಕಿನ ಶಿರಕೋಳ ಗ್ರಾಮದ ಸಮೀಪ ತುಪ್ಪರಿ ಹಳ್ಳ ದಾಟುವ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ಮುಳ್ಳಿನ ಕಂಟಿಯಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ಗ್ರಾಮಸ್ಥರ ಸಹಾಯದಿಂದ ರಕ್ಷಣೆ ಮಾಡಲಾಗಿದೆ.</p>.<p>ಭಾರಿ ಮಳೆಗೆ ತಾಲ್ಲೂಕು ಕೇಂದ್ರದಿಂದ ಪಡೆಸೂರ, ಹಾಲಕುಸುಗಲ್, ಶಾನವಾಡ, ತಿರ್ಲಾಪೂರ, ಮೊರಬ, ತಲೆಮೊರಬ, ಆಹೆಟ್ಟಿ ಶೀರೂರು ಹಾಗೂ ಗುಮ್ಮಗೋಳದಲ್ಲಿ ಸೇತುವೆಗಳು ಮುಳುಗಿದ್ದರಿಂದ ರಸ್ತೆ ಸಂಪರ್ಕ ಕಡೆತವಾಗಿದೆ.</p>.<p>ತಾಲ್ಲೂಕಿನ ಕಡದಳ್ಳಿ, ಗುಡಿಸಾಗರ, ನಾಗನೂರು, ಅರಹಟ್ಟಿ, ತಡಹಾಳ ಹಾಗೂ ಅಮರಗೋಳ ಗ್ರಾಮಗಳೂ ಬೆಣ್ಣಿಹಳ್ಳದ ಪ್ರವಾಹ ಭೀತಿಯಲ್ಲಿದ್ದು, ತಾಲ್ಲೂಕು ಆಡಳಿತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವಲಗುಂದ:</strong> ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿದ ಭಾರಿ ಮಳೆಗೆ ತಾಲ್ಲೂಕಿನಾದ್ಯಂತ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.</p>.<p>ಪಟ್ಟಣದ ಅಂಬೇಡ್ಕರ್ನಗರ ಸೇರಿದಂತೆ ತಾಲ್ಲೂಕಿನ ಗುಮ್ಮಗೋಳ, ಶಿರಕೋಳ, ಮೊರಬ ಗ್ರಾಮಗಳಲ್ಲಿ ಬೆಣ್ಣಿಹಳ್ಳದ ಪ್ರವಾಹದ ನೀರು ಮನೆಗಳಿ ನುಗ್ಗಿದೆ. ತಿರ್ಲಾಪುರ ಗ್ರಾಮದಲ್ಲಿನ ಕೆರೆ ತುಂಬಿ, ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಪರದಾಡಬೇಕಾಯಿತು.</p>.<p>ಮಳೆಯಿಂದಾಗಿ ಈರುಳ್ಳಿ, ಗೋವಿನಜೋಳ ಹಾಗೂ ಹತ್ತಿ ಬೆಳೆಗಳಿಗೆ ಹಾನಿಯಾಗಿದೆ. ತಾಲ್ಲೂಕಿನಾದ್ಯಂತ 8,965 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ತಾಲ್ಲೂಕು ಆಡಳಿತ ಮಾಹಿತಿ ನೀಡಿದೆ.</p>.<p>ಅರೆಕುರಟ್ಟಿ ಗ್ರಾಮದಲ್ಲಿ 2 ಮನೆಗಳು ಜಲಾವೃತಗೊಂಡಿವೆ. 131 ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಆಹಾರಧಾನ್ಯಗಳು ಹಾಳಾಗಿವೆ. 47 ಮನೆಗಳು ಭಾಗಶಃ ಕುಸಿದಿವೆ.</p>.<p>ತಾಲ್ಲೂಕಿನ ಶಿರಕೋಳ ಗ್ರಾಮದ ಸಮೀಪ ತುಪ್ಪರಿ ಹಳ್ಳ ದಾಟುವ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ಮುಳ್ಳಿನ ಕಂಟಿಯಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ಗ್ರಾಮಸ್ಥರ ಸಹಾಯದಿಂದ ರಕ್ಷಣೆ ಮಾಡಲಾಗಿದೆ.</p>.<p>ಭಾರಿ ಮಳೆಗೆ ತಾಲ್ಲೂಕು ಕೇಂದ್ರದಿಂದ ಪಡೆಸೂರ, ಹಾಲಕುಸುಗಲ್, ಶಾನವಾಡ, ತಿರ್ಲಾಪೂರ, ಮೊರಬ, ತಲೆಮೊರಬ, ಆಹೆಟ್ಟಿ ಶೀರೂರು ಹಾಗೂ ಗುಮ್ಮಗೋಳದಲ್ಲಿ ಸೇತುವೆಗಳು ಮುಳುಗಿದ್ದರಿಂದ ರಸ್ತೆ ಸಂಪರ್ಕ ಕಡೆತವಾಗಿದೆ.</p>.<p>ತಾಲ್ಲೂಕಿನ ಕಡದಳ್ಳಿ, ಗುಡಿಸಾಗರ, ನಾಗನೂರು, ಅರಹಟ್ಟಿ, ತಡಹಾಳ ಹಾಗೂ ಅಮರಗೋಳ ಗ್ರಾಮಗಳೂ ಬೆಣ್ಣಿಹಳ್ಳದ ಪ್ರವಾಹ ಭೀತಿಯಲ್ಲಿದ್ದು, ತಾಲ್ಲೂಕು ಆಡಳಿತ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>