<p><strong>ಹುಬ್ಬಳ್ಳಿ</strong>: ನಗರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ಹಾಗೂ ಗುರುವಾರ ಮಳೆ ಸುರಿಯಿತು. ಇದರಿಂದಾಗಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ತುಸು ಅಡಚಣೆ ಉಂಟಾಯಿತು.</p>.<p>ಬುಧವಾರ ರಾತ್ರಿ ಮಳೆ ಸುರಿದಿದ್ದರಿಂದ ಪಟಾಕಿ ಹೊಡೆಯಲಾಗಲಿಲ್ಲ. ಮನೆಯ ಸುತ್ತ ಬೆಳಗುತ್ತಿದ್ದ ದೀಪಗಳೂ ಆರಿದವು. ಮಳೆ ಬಿಡುವು ನೀಡಿದ ಬಳಿಕ ಮತ್ತೆ ದೀಪಗಳು ಪ್ರಜ್ವಲಿಸಿದವು, ಪಟಾಕಿ ಸದ್ದು ಹೊಮ್ಮಿತು. </p>.<p>ಗುರುವಾರ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣ, ನಡುನಡುವೆ ಬಿಸಿಲು ಇತ್ತು. ಮಧ್ಯಾಹ್ನ ಸುರಿದ ಮಳೆಗೆ ತಗ್ಗು–ಗುಂಡಿಗಳಿಂದ ಕೂಡಿದ್ದ ರಸ್ತೆಗಳಲ್ಲಿ ನೀರು ತುಂಬಿತು. ಮಣ್ಣಿನ ರಸ್ತೆಗಳು ಕೆಸರುಮಯವಾದವು. ಕಸ ತುಂಬಿದ್ದ ಚರಂಡಿಗಳಿಂದ ಕೊಳಚೆ, ರಸ್ತೆಗೆ ಹರಿಯಿತು. ಇದರಿಂದ ವಾಹನ ಸವಾರರು, ಸುತ್ತಲಿನ ಮನೆಯವರು ತೊಂದರೆಗೀಡಾದರು.</p>.<p>ಮಳೆ ನಿಂತ ಬಳಿಕ ವಾಹನಗಳು ಒಮ್ಮೆಲೆ ರಸ್ತೆಗೆ ಇಳಿದಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. ಮಳೆ ನೀರು ನಿಂತ ರಸ್ತೆಗಳಲ್ಲಿ ಕೆಸರು ಸಿಡಿಸುತ್ತಲೇ ವಾಹನಗಳು ಸಾಗಿದ್ದರಿಂದ ಪಾದಚಾರಿಗಳು ಪರದಾಡಿದರು. ಅರೆ ತಾಪದ ವಾತಾವರಣ ಬಹುತೇಕರನ್ನು ಬಾಧಿಸಿತು. ಬೇರಾವುದೇ ಹಾನಿ ಉಂಟಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದರು.</p>.<p>ಜಿಲ್ಲೆಯ ಬಹುತೇಕ ರೈತರು ಹಿಂಗಾರು ಹಂಗಾಮಿನ ಬಿತ್ತನೆಗೆ ಮುಂದಾಗಿದ್ದಾರೆ. ‘ಹಿಂಗಾರು ಬೆಳೆಗಳಿಗೆ ಇಬ್ಬನಿ, ಅಲ್ಪ ಮಳೆ ಸಾಕಿದೆ. ಮಳೆ ಹೀಗೆ ಮುಂದುವರಿದರೆ ಬೆಳೆ ಹಾನಿಯಾಗಲಿದೆ. ಅತಿವೃಷ್ಟಿಯಿಂದ ಮುಂಗಾರು ಬೆಳೆಗಳು ಕೈಸೇರಲಿಲ್ಲ, ಹಿಂಗಾರನ್ನೇ ನಂಬಿಕೊಂಡಿದ್ದೇವೆ’ ಎಂದು ರೈತರು ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ನಗರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ಹಾಗೂ ಗುರುವಾರ ಮಳೆ ಸುರಿಯಿತು. ಇದರಿಂದಾಗಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ತುಸು ಅಡಚಣೆ ಉಂಟಾಯಿತು.</p>.<p>ಬುಧವಾರ ರಾತ್ರಿ ಮಳೆ ಸುರಿದಿದ್ದರಿಂದ ಪಟಾಕಿ ಹೊಡೆಯಲಾಗಲಿಲ್ಲ. ಮನೆಯ ಸುತ್ತ ಬೆಳಗುತ್ತಿದ್ದ ದೀಪಗಳೂ ಆರಿದವು. ಮಳೆ ಬಿಡುವು ನೀಡಿದ ಬಳಿಕ ಮತ್ತೆ ದೀಪಗಳು ಪ್ರಜ್ವಲಿಸಿದವು, ಪಟಾಕಿ ಸದ್ದು ಹೊಮ್ಮಿತು. </p>.<p>ಗುರುವಾರ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣ, ನಡುನಡುವೆ ಬಿಸಿಲು ಇತ್ತು. ಮಧ್ಯಾಹ್ನ ಸುರಿದ ಮಳೆಗೆ ತಗ್ಗು–ಗುಂಡಿಗಳಿಂದ ಕೂಡಿದ್ದ ರಸ್ತೆಗಳಲ್ಲಿ ನೀರು ತುಂಬಿತು. ಮಣ್ಣಿನ ರಸ್ತೆಗಳು ಕೆಸರುಮಯವಾದವು. ಕಸ ತುಂಬಿದ್ದ ಚರಂಡಿಗಳಿಂದ ಕೊಳಚೆ, ರಸ್ತೆಗೆ ಹರಿಯಿತು. ಇದರಿಂದ ವಾಹನ ಸವಾರರು, ಸುತ್ತಲಿನ ಮನೆಯವರು ತೊಂದರೆಗೀಡಾದರು.</p>.<p>ಮಳೆ ನಿಂತ ಬಳಿಕ ವಾಹನಗಳು ಒಮ್ಮೆಲೆ ರಸ್ತೆಗೆ ಇಳಿದಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. ಮಳೆ ನೀರು ನಿಂತ ರಸ್ತೆಗಳಲ್ಲಿ ಕೆಸರು ಸಿಡಿಸುತ್ತಲೇ ವಾಹನಗಳು ಸಾಗಿದ್ದರಿಂದ ಪಾದಚಾರಿಗಳು ಪರದಾಡಿದರು. ಅರೆ ತಾಪದ ವಾತಾವರಣ ಬಹುತೇಕರನ್ನು ಬಾಧಿಸಿತು. ಬೇರಾವುದೇ ಹಾನಿ ಉಂಟಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದರು.</p>.<p>ಜಿಲ್ಲೆಯ ಬಹುತೇಕ ರೈತರು ಹಿಂಗಾರು ಹಂಗಾಮಿನ ಬಿತ್ತನೆಗೆ ಮುಂದಾಗಿದ್ದಾರೆ. ‘ಹಿಂಗಾರು ಬೆಳೆಗಳಿಗೆ ಇಬ್ಬನಿ, ಅಲ್ಪ ಮಳೆ ಸಾಕಿದೆ. ಮಳೆ ಹೀಗೆ ಮುಂದುವರಿದರೆ ಬೆಳೆ ಹಾನಿಯಾಗಲಿದೆ. ಅತಿವೃಷ್ಟಿಯಿಂದ ಮುಂಗಾರು ಬೆಳೆಗಳು ಕೈಸೇರಲಿಲ್ಲ, ಹಿಂಗಾರನ್ನೇ ನಂಬಿಕೊಂಡಿದ್ದೇವೆ’ ಎಂದು ರೈತರು ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>