<p><strong>ಧಾರವಾಡ:</strong> ‘ಸ್ವಸ್ಥ ಸಮಾಜದ ಕುಟುಂಬ ವ್ಯವಸ್ಥೆ ಬಲಪಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಜಾತಿ ಭೇದ ತೊರೆದು ಬಾಹ್ಯಶಕ್ತಿಗಳಿಂದ ದೇಶ ರಕ್ಷಿಸಿ ಆತ್ಮನಿರ್ಭರವಾಗಿಸಬೇಕು’ ಎಂದು ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರವಿಕುಮಾರ ಹೊಸಮನಿ ಹೇಳಿದರು.</p>.<p>ನಗರದ ಕೆಸಿಡಿ ಮೈದಾನದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಶತ ವರ್ಷಾಚರಣೆ, ವಿಜಯ ದಶಮಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಸಂಘವು ಪಂಚ ಪರಿವರ್ತನಿ ಸಂಕಲ್ಪಗಳನ್ನು ಮಾಡಿದೆ. ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಜಾಗೃತಿ, ಸ್ವದೇಶಿ ವಸ್ತು ಬಳಕೆ ಮತ್ತು ನಾಗರಿಕ ಸಂಹಿತೆಗಳು ಸಂಕಲ್ಪಗಳಾಗಿವೆ. ಭಾರತಾಂಬೆಯ ಸ್ಥಾನವನ್ನು ವಿಶ್ವಭೂಮಂಟಪದಲ್ಲಿ ಮಂಚೂಣಿಯಲ್ಲಿ ನಿಲ್ಲಿಸುವ ಸಂಕಲ್ಪದಿಂದ ಎಲ್ಲರಲ್ಲಿ ಏಕತೆ ಭಾವ ಮೂಡುತ್ತದೆ’ ಎಂದರು.</p>.<p>‘ಪ್ರಪಂಚಕ್ಕೆ ಯೋಗ, ಆಯುರ್ವೇದ, ಅಧ್ಯಾತ್ಮ, ಸಂಸ್ಕೃತ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಶತಮಾನಗಳವರೆಗೆ ಪರಕೀಯರ ದಬ್ಬಾಳಿಕೆಗೆ ಒಳಪಟ್ಟಿದ್ದ ಭಾರತ ನಂತರ ಮೈಕೊಡವಿಕೊಂಡು ಅಸ್ವಿತ್ವ ಕಾಪಾಡಿಕೊಂಡ ಅಭೂತಪೂರ್ವ ಪರಂಪರೆ ನಮ್ಮದು. ಅದನ್ನು ಮುಂದುವರಿಸುವುದು ಎಲ್ಲರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.</p>.<p>‘2028ರ ಹೊತ್ತಿಗೆ ಬಾಹ್ಯಾಕಾಶದಲ್ಲಿ ಭಾರತೀಯ ಬಾಹ್ಯಾಕಾಶ ಕೇಂದ್ರ ಸ್ಥಾಪಿಸುವ ಯೋಜನೆ ಸಿದ್ಧಗೊಳ್ಳುತ್ತಿದೆ. ಅದು ಸಾಕಾರಗೊಳ್ಳಲು ನಾಯಕರ ಇಚ್ಛಾಶಕ್ತಿ, ವಿಜ್ಞಾನಿಗಳ ಕಠಿಣ ಪರಿಶ್ರಮ ಮುಖ್ಯ’ ಎಂದರು.</p>.<p>ನಿವೃತ್ತ ಶಿಕ್ಷಕ ದುರ್ಗಣ್ಣ ಮಾತನಾಡಿ, ‘ಕೇಶವ ಬಲಿರಾಮ್ ಹೆಡಗೇವಾರ್ ಅವರು 1925ರಲ್ಲಿ ವಿಜಯದಶಮಿ ದಿನ ಆರ್ಎಸ್ಎಸ್ ಸ್ಥಾಪಿಸಿದರು. ಹೆಡಗೇವಾರ್ ಅವರು ವ್ಯಕ್ತಿ ಕೇಂದ್ರಿತ ಸಿದ್ಧಾಂತ ಪಾಲಿಸಲಿಲ್ಲ, ತತ್ವ ಕೇಂದ್ರಿತ ಸಿದ್ಧಾಂತ ಪಾಲಿಸಿದರು. ಹಿಂದೂಗಳ ಸಂಘಟನೆಗಾಗಿ ಶ್ರಮಿಸಿದರು’ ಎಂದು ತಿಳಿಸಿದರು.</p>.<p>‘ಏಕತೆಯಲ್ಲಿ ವಿವಿಧತೆ ಸಂಘದ ವೈಶಿಷ್ಟ್ಯ. ಸಂಘವು ಎಲ್ಲ ಪರಿಸ್ಥಿತಿಗಳನ್ನು ಎದುರಿಸಿದೆ. 100 ವರ್ಷಗಳಲ್ಲಿ ಹಿಂದೂ ಸಮಾಜದಲ್ಲಿ ಸ್ವಾಭಿಮಾನ ಮೂಡಿಸಿದೆ. ಸಂಘವು ಮುಸ್ಲಿಂ ಸಮುದಾಯದ ವಿರೋಧಿ ಅಲ್ಲ’ ಎಂದರು.</p>.<p>ರಾಮಕೃಷ್ಣ ವಿವೇಕ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ, ಬುದ್ಧಿಯೋಗಾನಂದ ಸರಸ್ವತಿ ಸ್ವಾಮೀಜಿ, ಆತ್ಮದೀಪಾನಂದ ಸ್ವಾಮೀಜಿ, ವಿಭಾಗ ಸಂಘಚಾಲಕ ಗೋವಿಂದಪ್ಪ ಗೌಡಪ್ಪಗೋಳ, ಜಿಲ್ಲಾ ಸಂಘಚಾಲಕ ವೇದವ್ಯಾಸ ದೇಶಪಾಂಡೆ ಇದ್ದರು.</p>.<p><strong>ಪಂಥಸಂಚಲನ</strong> </p><p>ನಗರದ ಕೆ.ಇ. ಬೋರ್ಡ್ ವಿದ್ಯಾಲಯ ಆವರಣದಿಂದ ಕೆಸಿಡಿ ಮೈದಾನದವರೆಗೆ ಗಣ ವೇಷಧಾರಿ ಸ್ವಯಂ ಸೇವಕರು ಪಥ ಸಂಚಲನ ನಡೆಸಿದರು. ಮೂರು ಮಾರ್ಗಗಳಲ್ಲಿ ಸಾಗಿದರು. ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಪಾಲ್ಗೊಂಡಿದ್ದರು. ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ‘ಸ್ವಸ್ಥ ಸಮಾಜದ ಕುಟುಂಬ ವ್ಯವಸ್ಥೆ ಬಲಪಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಜಾತಿ ಭೇದ ತೊರೆದು ಬಾಹ್ಯಶಕ್ತಿಗಳಿಂದ ದೇಶ ರಕ್ಷಿಸಿ ಆತ್ಮನಿರ್ಭರವಾಗಿಸಬೇಕು’ ಎಂದು ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರವಿಕುಮಾರ ಹೊಸಮನಿ ಹೇಳಿದರು.</p>.<p>ನಗರದ ಕೆಸಿಡಿ ಮೈದಾನದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಶತ ವರ್ಷಾಚರಣೆ, ವಿಜಯ ದಶಮಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಸಂಘವು ಪಂಚ ಪರಿವರ್ತನಿ ಸಂಕಲ್ಪಗಳನ್ನು ಮಾಡಿದೆ. ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಜಾಗೃತಿ, ಸ್ವದೇಶಿ ವಸ್ತು ಬಳಕೆ ಮತ್ತು ನಾಗರಿಕ ಸಂಹಿತೆಗಳು ಸಂಕಲ್ಪಗಳಾಗಿವೆ. ಭಾರತಾಂಬೆಯ ಸ್ಥಾನವನ್ನು ವಿಶ್ವಭೂಮಂಟಪದಲ್ಲಿ ಮಂಚೂಣಿಯಲ್ಲಿ ನಿಲ್ಲಿಸುವ ಸಂಕಲ್ಪದಿಂದ ಎಲ್ಲರಲ್ಲಿ ಏಕತೆ ಭಾವ ಮೂಡುತ್ತದೆ’ ಎಂದರು.</p>.<p>‘ಪ್ರಪಂಚಕ್ಕೆ ಯೋಗ, ಆಯುರ್ವೇದ, ಅಧ್ಯಾತ್ಮ, ಸಂಸ್ಕೃತ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಶತಮಾನಗಳವರೆಗೆ ಪರಕೀಯರ ದಬ್ಬಾಳಿಕೆಗೆ ಒಳಪಟ್ಟಿದ್ದ ಭಾರತ ನಂತರ ಮೈಕೊಡವಿಕೊಂಡು ಅಸ್ವಿತ್ವ ಕಾಪಾಡಿಕೊಂಡ ಅಭೂತಪೂರ್ವ ಪರಂಪರೆ ನಮ್ಮದು. ಅದನ್ನು ಮುಂದುವರಿಸುವುದು ಎಲ್ಲರ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.</p>.<p>‘2028ರ ಹೊತ್ತಿಗೆ ಬಾಹ್ಯಾಕಾಶದಲ್ಲಿ ಭಾರತೀಯ ಬಾಹ್ಯಾಕಾಶ ಕೇಂದ್ರ ಸ್ಥಾಪಿಸುವ ಯೋಜನೆ ಸಿದ್ಧಗೊಳ್ಳುತ್ತಿದೆ. ಅದು ಸಾಕಾರಗೊಳ್ಳಲು ನಾಯಕರ ಇಚ್ಛಾಶಕ್ತಿ, ವಿಜ್ಞಾನಿಗಳ ಕಠಿಣ ಪರಿಶ್ರಮ ಮುಖ್ಯ’ ಎಂದರು.</p>.<p>ನಿವೃತ್ತ ಶಿಕ್ಷಕ ದುರ್ಗಣ್ಣ ಮಾತನಾಡಿ, ‘ಕೇಶವ ಬಲಿರಾಮ್ ಹೆಡಗೇವಾರ್ ಅವರು 1925ರಲ್ಲಿ ವಿಜಯದಶಮಿ ದಿನ ಆರ್ಎಸ್ಎಸ್ ಸ್ಥಾಪಿಸಿದರು. ಹೆಡಗೇವಾರ್ ಅವರು ವ್ಯಕ್ತಿ ಕೇಂದ್ರಿತ ಸಿದ್ಧಾಂತ ಪಾಲಿಸಲಿಲ್ಲ, ತತ್ವ ಕೇಂದ್ರಿತ ಸಿದ್ಧಾಂತ ಪಾಲಿಸಿದರು. ಹಿಂದೂಗಳ ಸಂಘಟನೆಗಾಗಿ ಶ್ರಮಿಸಿದರು’ ಎಂದು ತಿಳಿಸಿದರು.</p>.<p>‘ಏಕತೆಯಲ್ಲಿ ವಿವಿಧತೆ ಸಂಘದ ವೈಶಿಷ್ಟ್ಯ. ಸಂಘವು ಎಲ್ಲ ಪರಿಸ್ಥಿತಿಗಳನ್ನು ಎದುರಿಸಿದೆ. 100 ವರ್ಷಗಳಲ್ಲಿ ಹಿಂದೂ ಸಮಾಜದಲ್ಲಿ ಸ್ವಾಭಿಮಾನ ಮೂಡಿಸಿದೆ. ಸಂಘವು ಮುಸ್ಲಿಂ ಸಮುದಾಯದ ವಿರೋಧಿ ಅಲ್ಲ’ ಎಂದರು.</p>.<p>ರಾಮಕೃಷ್ಣ ವಿವೇಕ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ, ಬುದ್ಧಿಯೋಗಾನಂದ ಸರಸ್ವತಿ ಸ್ವಾಮೀಜಿ, ಆತ್ಮದೀಪಾನಂದ ಸ್ವಾಮೀಜಿ, ವಿಭಾಗ ಸಂಘಚಾಲಕ ಗೋವಿಂದಪ್ಪ ಗೌಡಪ್ಪಗೋಳ, ಜಿಲ್ಲಾ ಸಂಘಚಾಲಕ ವೇದವ್ಯಾಸ ದೇಶಪಾಂಡೆ ಇದ್ದರು.</p>.<p><strong>ಪಂಥಸಂಚಲನ</strong> </p><p>ನಗರದ ಕೆ.ಇ. ಬೋರ್ಡ್ ವಿದ್ಯಾಲಯ ಆವರಣದಿಂದ ಕೆಸಿಡಿ ಮೈದಾನದವರೆಗೆ ಗಣ ವೇಷಧಾರಿ ಸ್ವಯಂ ಸೇವಕರು ಪಥ ಸಂಚಲನ ನಡೆಸಿದರು. ಮೂರು ಮಾರ್ಗಗಳಲ್ಲಿ ಸಾಗಿದರು. ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಪಾಲ್ಗೊಂಡಿದ್ದರು. ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>