<p><strong>ಧಾರವಾಡ</strong>: ಉತ್ತರ ಕರ್ನಾಟಕದವರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದಕ್ಕಾಗಿ ಸಿದ್ದಪ್ಪ ಕಂಬಳಿ ಅವರು ಕರ್ನಾಟಕ ಕಾಲೇಜು ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರಮುಖ ಪಾತ್ರ ವಹಿಸಿದರು ಎಂದು ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಪ್ರೊ. ಮಂಜಳಾ ಸಾಳುಂಕೆ ಹೇಳಿದರು.</p>.<p>ಸಿದ್ದಪ್ಪ ಕಂಬಳಿ ಅವರ 143ನೇ ಜಯಂತ್ಯುತ್ಸವ ಅಂಗವಾಗಿ ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಅವರ ಪುತ್ಥಳಿಗೆ ಗುರುವಾರ ಮಾಲಾರ್ಪಣೆ ಮಾಡಿ ಮಾತನಾಡಿದರು.</p>.<p>‘ಬ್ರಿಟಿಷ್ ಸರ್ಕಾರದಲ್ಲಿ ಸಿದ್ದಪ್ಪ ಕಂಬಳಿ ಅವರು ಶಿಕ್ಷಣ ಖಾತೆಯ ಜೊತೆಗೆ ಏಳು ಖಾತೆಗಳನ್ನು ಹೊಂದಿದ್ದರು. ಶಿಕ್ಷಣದ ಪ್ರೇಮಿ ಆಗಿದ್ದ ಅವರು ಸಾಮಾಜಿಕ ಚಿಂತನೆ, ಮೌಲ್ಯಗಳನ್ನು ಹೊಂದಿದ್ದರು’ ಎಂದರು.</p>.<p>ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಐ.ಸಿ.ಮುಳಗುಂದ, ಸಿದ್ದಪ್ಪ ಕಂಬಳಿ ಟ್ರಸ್ಟ್ ಸದಸ್ಯ ಶಂಕರ ಕುಂಬಿ, ಜಗದೀಶ್ ಗುಡಗೂರ, ಕೆ.ಕೋಟ್ರೇಶ, ಬಿ.ಬಿ.ಬಿರಾದಾರ, ಎಂ.ಎನ್.ಮ್ಯಾಗೇರಿ, ವೀರೇಂದ್ರ ಯಾದವ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ಉತ್ತರ ಕರ್ನಾಟಕದವರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದಕ್ಕಾಗಿ ಸಿದ್ದಪ್ಪ ಕಂಬಳಿ ಅವರು ಕರ್ನಾಟಕ ಕಾಲೇಜು ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರಮುಖ ಪಾತ್ರ ವಹಿಸಿದರು ಎಂದು ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಪ್ರೊ. ಮಂಜಳಾ ಸಾಳುಂಕೆ ಹೇಳಿದರು.</p>.<p>ಸಿದ್ದಪ್ಪ ಕಂಬಳಿ ಅವರ 143ನೇ ಜಯಂತ್ಯುತ್ಸವ ಅಂಗವಾಗಿ ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಅವರ ಪುತ್ಥಳಿಗೆ ಗುರುವಾರ ಮಾಲಾರ್ಪಣೆ ಮಾಡಿ ಮಾತನಾಡಿದರು.</p>.<p>‘ಬ್ರಿಟಿಷ್ ಸರ್ಕಾರದಲ್ಲಿ ಸಿದ್ದಪ್ಪ ಕಂಬಳಿ ಅವರು ಶಿಕ್ಷಣ ಖಾತೆಯ ಜೊತೆಗೆ ಏಳು ಖಾತೆಗಳನ್ನು ಹೊಂದಿದ್ದರು. ಶಿಕ್ಷಣದ ಪ್ರೇಮಿ ಆಗಿದ್ದ ಅವರು ಸಾಮಾಜಿಕ ಚಿಂತನೆ, ಮೌಲ್ಯಗಳನ್ನು ಹೊಂದಿದ್ದರು’ ಎಂದರು.</p>.<p>ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಐ.ಸಿ.ಮುಳಗುಂದ, ಸಿದ್ದಪ್ಪ ಕಂಬಳಿ ಟ್ರಸ್ಟ್ ಸದಸ್ಯ ಶಂಕರ ಕುಂಬಿ, ಜಗದೀಶ್ ಗುಡಗೂರ, ಕೆ.ಕೋಟ್ರೇಶ, ಬಿ.ಬಿ.ಬಿರಾದಾರ, ಎಂ.ಎನ್.ಮ್ಯಾಗೇರಿ, ವೀರೇಂದ್ರ ಯಾದವ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>