<p><strong>ಹುಬ್ಬಳ್ಳಿ</strong>: ‘ಕಾದಂಬರಿಕಾರ, ತತ್ವಜ್ಞಾನಿಯೂ ಆಗಿದ್ದ ದಿ.ಎಸ್.ಎಲ್.ಭೈರಪ್ಪ ಅವರ ವ್ಯಕ್ತಿತ್ವವು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ’ ಎಂದು ಪೊಲೀಸ್ ಅಧಿಕಾರಿ ಸೋಮು ರೆಡ್ಡಿ ಹೇಳಿದರು.</p>.<p>ಇಲ್ಲಿನ ಕಾಡಸಿದ್ಧೇಶ್ವರ ಮಹಾವಿದ್ಯಾಲಯ ಹಾಗೂ ಎಚ್.ಎಸ್.ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ‘ಭಾವ-ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಭೈರಪ್ಪ ಅವರು ಗೊಡ್ಡು ಸಂಪ್ರದಾಯ, ಆಚರಣೆಗಳಿಗೆ ಮನ್ನಣೆ ಕೊಡದೆ, ವೈಚಾರಿಕ ಮತ್ತು ವೈಜ್ಞಾನಿಕ ದೃಷ್ಟಿಕೋನ ಹೊಂದಿದ್ದರು. ಅವರು ಸರಳತೆ ಮತ್ತು ವಾಸ್ತವಿಕ ಘಟನೆಗಳಿಗೆ ಬದ್ಧರಾಗಿದ್ದರು’ ಎಂದರು.</p>.<p>ಅಂಕಣಕಾರ ಜನಮೇಜಯ ಉಮರ್ಜಿ ಮಾತನಾಡಿ, ‘ಭೈರಪ್ಪ ಅವರ ಯಾನ, ಆವರಣ, ಮಂದ್ರ, ದಾಟು ಮುಂತಾದ ಕಾದಂಬರಿಗಳಲ್ಲಿ ಸಮಾಜಮುಖಿ ಚಿಂತನೆ ಎದ್ದು ಕಾಣುತ್ತದೆ. ಅವರ ಕಾದಂಬರಿಗಳು ಹೆಚ್ಚು ಮುದ್ರಣ ಕಂಡಿದ್ದು, ಅವುಗಳಲ್ಲಿನ ಸಾಹಿತ್ಯಿಕ ಮೌಲ್ಯಯನ್ನು ಎತ್ತಿ ತೋರಿಸುತ್ತದೆ’ ಎಂದು ತಿಳಿಸಿದರು.</p>.<p>ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥೆ ವಿಜಯಶ್ರೀ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯೆ ಸುಮಂಗಲಾ ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಆರ್.ಐ.ಹರಕುಣಿ, ಕನ್ನಡ ವಿಭಾಗದ ಕಾರ್ಯದರ್ಶಿ ಪ್ರದೀಪ ವಾಲೀಕಾರ, ರಮೇಶಗೌಡ ಕೊಟ್ರಗೌಡರ, ಲಕ್ಷ್ಮೀ ಕರೆಣ್ಣವರ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ‘ಕಾದಂಬರಿಕಾರ, ತತ್ವಜ್ಞಾನಿಯೂ ಆಗಿದ್ದ ದಿ.ಎಸ್.ಎಲ್.ಭೈರಪ್ಪ ಅವರ ವ್ಯಕ್ತಿತ್ವವು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ’ ಎಂದು ಪೊಲೀಸ್ ಅಧಿಕಾರಿ ಸೋಮು ರೆಡ್ಡಿ ಹೇಳಿದರು.</p>.<p>ಇಲ್ಲಿನ ಕಾಡಸಿದ್ಧೇಶ್ವರ ಮಹಾವಿದ್ಯಾಲಯ ಹಾಗೂ ಎಚ್.ಎಸ್.ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ‘ಭಾವ-ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಭೈರಪ್ಪ ಅವರು ಗೊಡ್ಡು ಸಂಪ್ರದಾಯ, ಆಚರಣೆಗಳಿಗೆ ಮನ್ನಣೆ ಕೊಡದೆ, ವೈಚಾರಿಕ ಮತ್ತು ವೈಜ್ಞಾನಿಕ ದೃಷ್ಟಿಕೋನ ಹೊಂದಿದ್ದರು. ಅವರು ಸರಳತೆ ಮತ್ತು ವಾಸ್ತವಿಕ ಘಟನೆಗಳಿಗೆ ಬದ್ಧರಾಗಿದ್ದರು’ ಎಂದರು.</p>.<p>ಅಂಕಣಕಾರ ಜನಮೇಜಯ ಉಮರ್ಜಿ ಮಾತನಾಡಿ, ‘ಭೈರಪ್ಪ ಅವರ ಯಾನ, ಆವರಣ, ಮಂದ್ರ, ದಾಟು ಮುಂತಾದ ಕಾದಂಬರಿಗಳಲ್ಲಿ ಸಮಾಜಮುಖಿ ಚಿಂತನೆ ಎದ್ದು ಕಾಣುತ್ತದೆ. ಅವರ ಕಾದಂಬರಿಗಳು ಹೆಚ್ಚು ಮುದ್ರಣ ಕಂಡಿದ್ದು, ಅವುಗಳಲ್ಲಿನ ಸಾಹಿತ್ಯಿಕ ಮೌಲ್ಯಯನ್ನು ಎತ್ತಿ ತೋರಿಸುತ್ತದೆ’ ಎಂದು ತಿಳಿಸಿದರು.</p>.<p>ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥೆ ವಿಜಯಶ್ರೀ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯೆ ಸುಮಂಗಲಾ ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಆರ್.ಐ.ಹರಕುಣಿ, ಕನ್ನಡ ವಿಭಾಗದ ಕಾರ್ಯದರ್ಶಿ ಪ್ರದೀಪ ವಾಲೀಕಾರ, ರಮೇಶಗೌಡ ಕೊಟ್ರಗೌಡರ, ಲಕ್ಷ್ಮೀ ಕರೆಣ್ಣವರ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>