<p><strong>ಹುಬ್ಬಳ್ಳಿ:</strong> ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವುದಾಗಿ ಕುಂದಗೋಳ ತಾಲ್ಲೂಕಿನ ಕಮಡೊಳ್ಳಿ ಗ್ರಾಮದ ವಿದ್ಯಾರ್ಥಿ ಸಂದೀಪ ಜುಟ್ಟಲ್ ಅವರನ್ನು ನಂಬಿಸಿದ್ದ ನಾಲ್ವರು, ₹20 ಲಕ್ಷವನ್ನು ನಗದು ಹಾಗೂ ಆನ್ಲೈನ್ನಲ್ಲಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.</p>.<p>ಗುಜರಾತ ಮೂಲದ ಸೋನಿ ರಾಹುಲ್, ಭೂಮಿಕಾ, ಐಶ್ವರ್ಯಾ ಮತ್ತು ಜುಬೇದಾ ಬೇಗಂ ವಿರುದ್ಧ, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸಂದೀಪ ವಂಚನೆ ಪ್ರಕರಣ ದಾಖಲಿಸಿದ್ದಾರೆ.</p>.<p>ನಗರದ ಕೊಪ್ಪಿಕರ ರಸ್ತೆಯ ಸೆಟ್ಲಲೈಟ್ ಕಾಂಪ್ಲೆಕ್ಸ್ನಲ್ಲಿ ಆರೋಪಿಗಳು ಎನ್.ಎಸ್. ಅಕೌಂಟ್ ಮ್ಯಾನೇಜ್ಮೆಂಟ್ ಕಚೇರಿ ತೆರೆದಿದ್ದು, ಪ್ರತಿ ತಿಂಗಳು ಹಣ ಹೂಡಿಕೆ ಮಾಡಿದರೆ ಶೇ 15ರಷ್ಟು ಲಾಭ ನೀಡುವುದಾಗಿ ಜಾಹೀರಾತು ನೀಡಿದ್ದರು. ಆ ಕುರಿತು ಸಂದೀಪ, ಕಚೇರಿಗೆ ಹೋಗಿ ವಿಚಾರಿಸಿ, ಹಣ ಹೂಡಿಕೆ ಮಾಡಿದ್ದರು. ಅಲ್ಲದೆ, ಅವರ ತಂದೆಯ ಹೆಸರಲ್ಲಿರುವ ಕಾರನ್ನು ಬೇರೆಯವರ ಹೆಸರಿಗೆ ನೋಂದಾಯಿಸಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p><strong>ಅಪಘಾತ; ಒಬ್ಬ ಸಾವು:</strong> ತಾಲ್ಲೂಕಿನ ನೂಲ್ವಿ ಗ್ರಾಮದ ಬಳಿ ಆಟೊಗೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ, ಆಟೊದಲ್ಲಿದ್ದ ಚನ್ನಾಪುರ ಗ್ರಾಮದ ಈರಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಾಲ್ವರು ಗಂಭೀರ ಗಾಯಗೊಂಡಿದ್ದು, ಕಿಮ್ಸ್ಗೆ ದಾಖಲಿಸಲಾಗಿದೆ.</p>.<p>ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುವಿನಹಾಳದಲ್ಲಿ ನಡೆಯಲಿರುವ ಸಂತ ಷರೀಫರ ಜಾತ್ರೆಗೆ ಚನ್ನಾಪುರ ಗ್ರಾಮದಿಂದ ನಾಲ್ವರು ಆಟೊದಲ್ಲಿ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಗಾಂಜಾ ಮಾರಾಟ, ಬಂಧನ:</strong> ನಗರದ ಬಿವಿಬಿ ಕಾಲೇಜಿನ ಹಿಂದಿನ ಪ್ರವೇಶದ್ವಾರದ ಬಳಿ (ಲೋಕಪ್ಪನ ಹಕ್ಕಲ) ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿ, ₹11,500 ಮೌಲ್ಯದ ಗಾಂಜಾ ಮತ್ತು ₹500 ನಗದು ವಶಪಡಿಸಿಕೊಂಡಿದ್ದಾರೆ.</p>.<p>ಶಾಂತಿ ಕಾಲೊನಿಯ ಜೆ. ಮರಿಯಾದಾಸ ಮತ್ತು ವಿನಯಕುಮಾರ ಎಚ್. ಬಂಧಿತರು. ಆರೋಪಿಗಳು ಚಿಕ್ಕಚಿಕ್ಕ ಪ್ಯಾಕೆಟ್ಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಲಿ ನಡೆಸಿದ್ದಾರೆ. 238 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವುದಾಗಿ ಕುಂದಗೋಳ ತಾಲ್ಲೂಕಿನ ಕಮಡೊಳ್ಳಿ ಗ್ರಾಮದ ವಿದ್ಯಾರ್ಥಿ ಸಂದೀಪ ಜುಟ್ಟಲ್ ಅವರನ್ನು ನಂಬಿಸಿದ್ದ ನಾಲ್ವರು, ₹20 ಲಕ್ಷವನ್ನು ನಗದು ಹಾಗೂ ಆನ್ಲೈನ್ನಲ್ಲಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.</p>.<p>ಗುಜರಾತ ಮೂಲದ ಸೋನಿ ರಾಹುಲ್, ಭೂಮಿಕಾ, ಐಶ್ವರ್ಯಾ ಮತ್ತು ಜುಬೇದಾ ಬೇಗಂ ವಿರುದ್ಧ, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸಂದೀಪ ವಂಚನೆ ಪ್ರಕರಣ ದಾಖಲಿಸಿದ್ದಾರೆ.</p>.<p>ನಗರದ ಕೊಪ್ಪಿಕರ ರಸ್ತೆಯ ಸೆಟ್ಲಲೈಟ್ ಕಾಂಪ್ಲೆಕ್ಸ್ನಲ್ಲಿ ಆರೋಪಿಗಳು ಎನ್.ಎಸ್. ಅಕೌಂಟ್ ಮ್ಯಾನೇಜ್ಮೆಂಟ್ ಕಚೇರಿ ತೆರೆದಿದ್ದು, ಪ್ರತಿ ತಿಂಗಳು ಹಣ ಹೂಡಿಕೆ ಮಾಡಿದರೆ ಶೇ 15ರಷ್ಟು ಲಾಭ ನೀಡುವುದಾಗಿ ಜಾಹೀರಾತು ನೀಡಿದ್ದರು. ಆ ಕುರಿತು ಸಂದೀಪ, ಕಚೇರಿಗೆ ಹೋಗಿ ವಿಚಾರಿಸಿ, ಹಣ ಹೂಡಿಕೆ ಮಾಡಿದ್ದರು. ಅಲ್ಲದೆ, ಅವರ ತಂದೆಯ ಹೆಸರಲ್ಲಿರುವ ಕಾರನ್ನು ಬೇರೆಯವರ ಹೆಸರಿಗೆ ನೋಂದಾಯಿಸಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p><strong>ಅಪಘಾತ; ಒಬ್ಬ ಸಾವು:</strong> ತಾಲ್ಲೂಕಿನ ನೂಲ್ವಿ ಗ್ರಾಮದ ಬಳಿ ಆಟೊಗೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ, ಆಟೊದಲ್ಲಿದ್ದ ಚನ್ನಾಪುರ ಗ್ರಾಮದ ಈರಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಾಲ್ವರು ಗಂಭೀರ ಗಾಯಗೊಂಡಿದ್ದು, ಕಿಮ್ಸ್ಗೆ ದಾಖಲಿಸಲಾಗಿದೆ.</p>.<p>ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುವಿನಹಾಳದಲ್ಲಿ ನಡೆಯಲಿರುವ ಸಂತ ಷರೀಫರ ಜಾತ್ರೆಗೆ ಚನ್ನಾಪುರ ಗ್ರಾಮದಿಂದ ನಾಲ್ವರು ಆಟೊದಲ್ಲಿ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಗಾಂಜಾ ಮಾರಾಟ, ಬಂಧನ:</strong> ನಗರದ ಬಿವಿಬಿ ಕಾಲೇಜಿನ ಹಿಂದಿನ ಪ್ರವೇಶದ್ವಾರದ ಬಳಿ (ಲೋಕಪ್ಪನ ಹಕ್ಕಲ) ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿ, ₹11,500 ಮೌಲ್ಯದ ಗಾಂಜಾ ಮತ್ತು ₹500 ನಗದು ವಶಪಡಿಸಿಕೊಂಡಿದ್ದಾರೆ.</p>.<p>ಶಾಂತಿ ಕಾಲೊನಿಯ ಜೆ. ಮರಿಯಾದಾಸ ಮತ್ತು ವಿನಯಕುಮಾರ ಎಚ್. ಬಂಧಿತರು. ಆರೋಪಿಗಳು ಚಿಕ್ಕಚಿಕ್ಕ ಪ್ಯಾಕೆಟ್ಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಲಿ ನಡೆಸಿದ್ದಾರೆ. 238 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>