<p><strong>ಧಾರವಾಡ:</strong> ‘ಸಾರಿಗೆ ಇಲಾಖೆಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು (1991ರಿಂದ 2020 ರವರೆಗೆ) ದಂಡ ಮೊತ್ತದ ಶೇ 50 ಪಾವತಿಸಿ ಇತ್ಯರ್ಥಪಡಿಸಿಕೊಳ್ಳಲು ಡಿ.12ರವರೆಗೆ ಅವಕಾಶ ಇದೆ’ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಕೆ.ಟಿ.ಹಾಲಸ್ವಾಮಿ ತಿಳಿಸಿದರು.</p>.<p>ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೆಳಗಾವಿ ವಿಭಾಗದಲ್ಲಿ 11,557, ಕಲಬುರಗಿ ವಿಭಾಗದಲ್ಲಿ 7,473 ಪ್ರಕರಣಗಳು ಇವೆ. ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ 3,051 ಈ ಪ್ರಕರಣಗಳು ಇವೆ. ದಂಡ ರಿಯಾಯಿತಿ ಅವಕಾಶ ಬಳಸಿಕೊಂಡು ಪ್ರಕರಣ ಇತ್ಯರ್ಥಡಿಸಿಕೊಳ್ಳಬಹುದು’ ಎಂದು ಹೇಳಿದರು.</p>.<p>‘ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿಯಲ್ಲಿ ನೋಂದಣಿ ಶುಲ್ಕ ಕಡಿಮೆ ಎಂದು ರಾಜ್ಯದ ಕೆಲವರು ವಾಹನಗಳನ್ನು (ಕಾರು, ಜೀಪು...) ನೋಂದಣಿ ಮಾಡಿಸಿ ಇಲ್ಲಿ ಓಡಾಡಿಸುವುದು ಕೆಲವೆಡೆ ಕಂಡುಬಂದಿದೆ. ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ ತಪಾಸಣೆ ವೇಳೆಯ ಪಾಂಡಿಚರಿ ನೋಂದಣಿಯ ಸುಮಾರು 15 ವಾಹನಗಳನ್ನು ಪತ್ತೆಹಚ್ಚಿ, ₹ 1.5 ಕೋಟಿ ದಂಡ ವಿಧಿಸಲಾಗಿದೆ’ ಎಂದರು.</p>.<p>‘ಆಟೊಗಳು, ಮ್ಯಾಕ್ಸಿ ಕ್ಯಾಬ್ಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಒಯ್ಯುವ ದೂರುಗಳು ಇವೆ. ವಾಹನಗಳಲ್ಲಿ ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಒಯ್ಯುವುದು ಕಂಡುಬಂದಿದೆ. ಈಗಾಗಲೇ ಹುಬ್ಬಳ್ಳಿ–ಧಾರವಾಡ ವ್ಯಾಪ್ತಿಯಲ್ಲಿ 49 ಪ್ರಕರಣ ದಾಖಲಿಸಲಾಗಿದೆ. ಅವಳಿನಗರದಲ್ಲಿ ನಿರಂತರ ತಪಾಸಣೆ ನಡೆಸುತ್ತೇವೆ’ ಎಂದು ತಿಳಿಸಿದರು.</p>.<p>‘ಟ್ರ್ಯಾಕ್ಟರ್ನ ಟ್ರೈಲರ್ ಹಿಂಬದಿ ಪ್ರತಿಫಲನ (ರಿಫ್ಲೆಕ್ಷನ್) ಬ್ಯಾನರ್ ಅಳವಡಿಸಬೇಕು. ರಾತ್ರಿ ಹೊತ್ತಿನಲ್ಲಿ ಪ್ರತಿಫಲನ ನೋಡಿ ಹಿಂದಿನ ವಾಹನದವರಿಗೆ ಟ್ರ್ಯಾಕ್ಟರ್ ಸಾಗುತ್ತಿರುವುದು ತಿಳಿಯುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ‘ಸಾರಿಗೆ ಇಲಾಖೆಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು (1991ರಿಂದ 2020 ರವರೆಗೆ) ದಂಡ ಮೊತ್ತದ ಶೇ 50 ಪಾವತಿಸಿ ಇತ್ಯರ್ಥಪಡಿಸಿಕೊಳ್ಳಲು ಡಿ.12ರವರೆಗೆ ಅವಕಾಶ ಇದೆ’ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಕೆ.ಟಿ.ಹಾಲಸ್ವಾಮಿ ತಿಳಿಸಿದರು.</p>.<p>ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೆಳಗಾವಿ ವಿಭಾಗದಲ್ಲಿ 11,557, ಕಲಬುರಗಿ ವಿಭಾಗದಲ್ಲಿ 7,473 ಪ್ರಕರಣಗಳು ಇವೆ. ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ 3,051 ಈ ಪ್ರಕರಣಗಳು ಇವೆ. ದಂಡ ರಿಯಾಯಿತಿ ಅವಕಾಶ ಬಳಸಿಕೊಂಡು ಪ್ರಕರಣ ಇತ್ಯರ್ಥಡಿಸಿಕೊಳ್ಳಬಹುದು’ ಎಂದು ಹೇಳಿದರು.</p>.<p>‘ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿಯಲ್ಲಿ ನೋಂದಣಿ ಶುಲ್ಕ ಕಡಿಮೆ ಎಂದು ರಾಜ್ಯದ ಕೆಲವರು ವಾಹನಗಳನ್ನು (ಕಾರು, ಜೀಪು...) ನೋಂದಣಿ ಮಾಡಿಸಿ ಇಲ್ಲಿ ಓಡಾಡಿಸುವುದು ಕೆಲವೆಡೆ ಕಂಡುಬಂದಿದೆ. ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ ತಪಾಸಣೆ ವೇಳೆಯ ಪಾಂಡಿಚರಿ ನೋಂದಣಿಯ ಸುಮಾರು 15 ವಾಹನಗಳನ್ನು ಪತ್ತೆಹಚ್ಚಿ, ₹ 1.5 ಕೋಟಿ ದಂಡ ವಿಧಿಸಲಾಗಿದೆ’ ಎಂದರು.</p>.<p>‘ಆಟೊಗಳು, ಮ್ಯಾಕ್ಸಿ ಕ್ಯಾಬ್ಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಒಯ್ಯುವ ದೂರುಗಳು ಇವೆ. ವಾಹನಗಳಲ್ಲಿ ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಒಯ್ಯುವುದು ಕಂಡುಬಂದಿದೆ. ಈಗಾಗಲೇ ಹುಬ್ಬಳ್ಳಿ–ಧಾರವಾಡ ವ್ಯಾಪ್ತಿಯಲ್ಲಿ 49 ಪ್ರಕರಣ ದಾಖಲಿಸಲಾಗಿದೆ. ಅವಳಿನಗರದಲ್ಲಿ ನಿರಂತರ ತಪಾಸಣೆ ನಡೆಸುತ್ತೇವೆ’ ಎಂದು ತಿಳಿಸಿದರು.</p>.<p>‘ಟ್ರ್ಯಾಕ್ಟರ್ನ ಟ್ರೈಲರ್ ಹಿಂಬದಿ ಪ್ರತಿಫಲನ (ರಿಫ್ಲೆಕ್ಷನ್) ಬ್ಯಾನರ್ ಅಳವಡಿಸಬೇಕು. ರಾತ್ರಿ ಹೊತ್ತಿನಲ್ಲಿ ಪ್ರತಿಫಲನ ನೋಡಿ ಹಿಂದಿನ ವಾಹನದವರಿಗೆ ಟ್ರ್ಯಾಕ್ಟರ್ ಸಾಗುತ್ತಿರುವುದು ತಿಳಿಯುತ್ತದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>