ಗ್ರಾಮದ ಜಗದೀಶ ಹನುಮಂತಪ್ಪ ತಾಂಬೆ (23) ಕೊಲೆಯಾದ ಯುವಕ. ಆರೋಪಿ ಗಳಾದ ದೇವಿಕೊಪ್ಪ ಗ್ರಾಮದ ಮಾಜಿ ಸೈನಿಕ ಗಂಗಾಧರ ನಿಂಗಪ್ಪ ನೂಲ್ವಿ (40) ಹಾಗೂ ಆತನ ಪತ್ನಿ ಶಾರದಾ ಗಂಗಾಧರ ಪಾಟೀಲ (38) ಅವರನ್ನು ಬಂಧಿಸಲಾಗಿದೆ. ಭಾನುವಾರ ಹೋಳಿಗಣಿ ಸರ್ಕಲ್ ಹತ್ತಿರ ಜಗಳವಾದಾಗ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ಸಹೋದರ ದೋಂಡಿಭಾ ತಾಂಬೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸಿಪಿಐ ವಿಜಯ ಬಿರಾದಾರ ತನಿಖೆ ನಡೆಸುತ್ತಿದ್ದಾರೆ.