ಸೋಮವಾರ ಗದುಗಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ಕಂಡಂತಹ ಒಬ್ಬ ಭ್ರಷ್ಟ ಮುಖ್ಯಮಂತ್ರಿ. ಬರುವ ಮತ್ತೊಬ್ಬ ಸಿಎಂ ಕೂಡ ಭ್ರಷ್ಟರಾಗಿಯೇ ಇರುತ್ತಾರೆ. ಬಿಜೆಪಿಯೇ ಭ್ರಷ್ಟ ಪಕ್ಷ. ಬಿಜೆಪಿ ತೊಲಗದೇ ಹೋದರೆ ಈ ರಾಜ್ಯಕ್ಕೆ ಮುಕ್ತಿ ಇಲ್ಲ. ಸರ್ಕಾರದ ಭ್ರಷ್ಟಾಚಾರ ಹಾಗೂ ನಿಷ್ಕ್ರಿಯತೆಯನ್ನು ಬಯಲು ಮಾಡುವುದೇ ನಮ್ಮ ಗುರಿ’ ಎಂದು ಅವರು ಗುಡುಗಿದರು.