<p><strong>ಮುಳಗುಂದ:</strong> ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಕನ್ನಡ ಭಾಷೆ ಎಲ್ಲರ ಮನ ಹಾಗೂ ಮನೆಯ ಭಾಷೆಯಾಗಿರಬೇಕು’ ಎಂದು ಸಾಹಿತಿ ಅನ್ನದಾನ ಹಿರೇಮಠ ಹೇಳಿದರು.</p>.<p>ಇಲ್ಲಿನ ಆರ್.ಎನ್. ದೇಶಪಾಂಡೆ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಾಪಕರ ಪರಿಷತ್ ವತಿಯಿಂದ ಮಂಗಳವಾರ ನಡೆದ ತಿಂಗಳ ನಾಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಪಾಚಾರ್ಯ ಆರ್.ಎಂ. ಕಲ್ಲನಗೌಡ್ರ ಮಾತನಾಡಿ, ‘ಕನ್ನಡ ಭಾಷೆಗೆ ಇರುವ ಶಕ್ತಿ ಇನ್ನಾವುದೆ ಭಾಷೆಯಲ್ಲಿ ಕಾಣಸಿಗದು. ನಾಡು-ನುಡಿ ಜಾಗೃತಿ ಎಲ್ಲರಲ್ಲೂ ಬೆಳೆಯಬೇಕು. ಕರ್ನಾಟಕದ ಏಕೀಕರಣಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘ ಕೊಡುಗೆ ಅಪಾರ’ ಎಂದರು.</p>.<p>ಪ್ರೊ.ವಿಶ್ವನಾಥ ಟಿ. ಮಾತನಾಡಿದರು. ಈ ವೇಳೆ ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸದಸ್ಯರಾದ ವೀರಣ್ಣ ವಡ್ಡೀನ, ನಾಗರಾಜ, ಸುರೇಶ ಗೌಡ ಇದ್ದರು. ಎನ್.ಕೆ. ಕಡೆಮನಿ ನಿರೂಪಿಸಿದರು. ಶಂಕರಣ್ಣ ಸಂಕಣ್ಣವರ ತಂಡದಿಂದ ಗೀತ ಗಾಯನ ಕಾರ್ಯಕ್ರಮ ಜರುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಗುಂದ:</strong> ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಕನ್ನಡ ಭಾಷೆ ಎಲ್ಲರ ಮನ ಹಾಗೂ ಮನೆಯ ಭಾಷೆಯಾಗಿರಬೇಕು’ ಎಂದು ಸಾಹಿತಿ ಅನ್ನದಾನ ಹಿರೇಮಠ ಹೇಳಿದರು.</p>.<p>ಇಲ್ಲಿನ ಆರ್.ಎನ್. ದೇಶಪಾಂಡೆ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಾಪಕರ ಪರಿಷತ್ ವತಿಯಿಂದ ಮಂಗಳವಾರ ನಡೆದ ತಿಂಗಳ ನಾಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಪಾಚಾರ್ಯ ಆರ್.ಎಂ. ಕಲ್ಲನಗೌಡ್ರ ಮಾತನಾಡಿ, ‘ಕನ್ನಡ ಭಾಷೆಗೆ ಇರುವ ಶಕ್ತಿ ಇನ್ನಾವುದೆ ಭಾಷೆಯಲ್ಲಿ ಕಾಣಸಿಗದು. ನಾಡು-ನುಡಿ ಜಾಗೃತಿ ಎಲ್ಲರಲ್ಲೂ ಬೆಳೆಯಬೇಕು. ಕರ್ನಾಟಕದ ಏಕೀಕರಣಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘ ಕೊಡುಗೆ ಅಪಾರ’ ಎಂದರು.</p>.<p>ಪ್ರೊ.ವಿಶ್ವನಾಥ ಟಿ. ಮಾತನಾಡಿದರು. ಈ ವೇಳೆ ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸದಸ್ಯರಾದ ವೀರಣ್ಣ ವಡ್ಡೀನ, ನಾಗರಾಜ, ಸುರೇಶ ಗೌಡ ಇದ್ದರು. ಎನ್.ಕೆ. ಕಡೆಮನಿ ನಿರೂಪಿಸಿದರು. ಶಂಕರಣ್ಣ ಸಂಕಣ್ಣವರ ತಂಡದಿಂದ ಗೀತ ಗಾಯನ ಕಾರ್ಯಕ್ರಮ ಜರುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>