<p><strong>ನಿಪ್ಪಾಣಿ:</strong> ‘ನಗರದ ಅಭಿವೃದ್ಧಿ ಜೊತೆಗೆ ಸೌಂದರ್ಯೀಕರಣಕ್ಕೂ ಒತ್ತು ನೀಡಲಾಗುತ್ತಿದ್ದು ಯುದ್ಧ ವಿಮಾನದ ಸುತ್ತಲೂ ನಿರ್ಮಾಣಗೊಳ್ಳಲಿರುವ ವೈವಿಧ್ಯಮಯ, ಸುಂದರವಾದ ‘ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವ ನಗರದ ಆಕರ್ಷಣೆಯ ಕೇಂದ್ರಬಿಂದುವಾಗಿ ಪರಿಣಮಿಸಲಿದ್ದು, ಇದನ್ನು ಶೈಕ್ಷಣಿಕ ಪ್ರವಾಸ ಕೇಂದ್ರವನ್ನಾಗಿ ಮಾರ್ಪಡಿಸಲಾಗುವುದು’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.</p>.<p>ಸ್ಥಳೀಯ ವಾರ್ಡ್ ನಂ.25ರಲ್ಲಿ 15ನೇ ಹಣಕಾಸಿನ ಯೋಜನೆಯಡಿ ₹ 20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ನಗರಕ್ಕೆ ಯುದ್ಧವಿಮಾನವನ್ನು ಕಲ್ಪಿಸಲು ನಾನು ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಕೇಂದ್ರ ಗೃಹಸಚಿವರನ್ನು ಮನವಿ ಮಾಡಿಕೊಂಡ ಮೇರೆಗೆ ಅವರು ಒಂದು ತಿಂಗಳೊಳಗಾಗಿ ಅದಕ್ಕೆ ಹಸಿರು ನಿಶಾನೆ ಕೊಟ್ಟರು. ಈ ಯುದ್ಧವಿಮಾನವನ್ನು ಇಲ್ಲಿ ತರಲು ಒಟ್ಟು ₹ 2.5 ಕೋಟಿ ವೆಚ್ಚ ಆಗಿದೆ. ಅದಕ್ಕಾಗಿ ಸಂಸದರ ಮತ್ತು ಶಾಸಕರ ಅನುದಾನದಲ್ಲಿ ತಲಾ ₹ 1 ಕೋಟಿ ಮತ್ತು ನಗರಸಭೆಯಿಂದ ₹ 50 ಲಕ್ಷ ಅನುದಾನ ಕಲ್ಪಿಸಲಾಗಿದೆ. ಉದ್ಯಾನಕ್ಕಾಗಿ ಮೊದಲನೇಯ ಹಂತದಲ್ಲಿ ₹ 20 ಲಕ್ಷ ಹಾಗೂ ಮುಂದಿನ ಹಂತಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಕಲ್ಪಿಸಲಾಗುವುದು. ಅಲ್ಲದೆ ರಸ್ತೆ ಬದಿಗೆ ‘ತಿನಿಸು ಕಟ್ಟೆ(ಖಾವು ಕಟ್ಟಾ) ನಿರ್ಮಿಸಲಾಗುವುದು’ ಎಂದರು.</p>.<p>ಪೌರಾಯುಕ್ತ ಜಗದೀಶ ಹುಲಗೆಜ್ಜಿ, ಸದಸ್ಯ ಜಯವಂತ ಭಾಟಲೆ, ರಾಜೇಂದ್ರ ಗುಂದೇಶಾ, ನೀತಾ ಬಾಗಡೆ, ಕಾವೇರಿ ಮಿರ್ಜೆ, ಪ್ರಭಾವತಿ ಸೂರ್ಯವಂಶಿ, ವಿಭಾವರಿ ಖಾಂಡಕೆ, ಮಾಜಿ ಸದಸ್ಯ ವಿಜಯ ಟವಳೆ, ಪ್ರಣವ ಮಾನವಿ, ಅಭಿಜಿತ್ ಮುದುಕುಡೆ, ಸಚಿನ ಥೋರವತ, ಮೊದಲಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಿಪ್ಪಾಣಿ:</strong> ‘ನಗರದ ಅಭಿವೃದ್ಧಿ ಜೊತೆಗೆ ಸೌಂದರ್ಯೀಕರಣಕ್ಕೂ ಒತ್ತು ನೀಡಲಾಗುತ್ತಿದ್ದು ಯುದ್ಧ ವಿಮಾನದ ಸುತ್ತಲೂ ನಿರ್ಮಾಣಗೊಳ್ಳಲಿರುವ ವೈವಿಧ್ಯಮಯ, ಸುಂದರವಾದ ‘ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವ ನಗರದ ಆಕರ್ಷಣೆಯ ಕೇಂದ್ರಬಿಂದುವಾಗಿ ಪರಿಣಮಿಸಲಿದ್ದು, ಇದನ್ನು ಶೈಕ್ಷಣಿಕ ಪ್ರವಾಸ ಕೇಂದ್ರವನ್ನಾಗಿ ಮಾರ್ಪಡಿಸಲಾಗುವುದು’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.</p>.<p>ಸ್ಥಳೀಯ ವಾರ್ಡ್ ನಂ.25ರಲ್ಲಿ 15ನೇ ಹಣಕಾಸಿನ ಯೋಜನೆಯಡಿ ₹ 20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ನಗರಕ್ಕೆ ಯುದ್ಧವಿಮಾನವನ್ನು ಕಲ್ಪಿಸಲು ನಾನು ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಕೇಂದ್ರ ಗೃಹಸಚಿವರನ್ನು ಮನವಿ ಮಾಡಿಕೊಂಡ ಮೇರೆಗೆ ಅವರು ಒಂದು ತಿಂಗಳೊಳಗಾಗಿ ಅದಕ್ಕೆ ಹಸಿರು ನಿಶಾನೆ ಕೊಟ್ಟರು. ಈ ಯುದ್ಧವಿಮಾನವನ್ನು ಇಲ್ಲಿ ತರಲು ಒಟ್ಟು ₹ 2.5 ಕೋಟಿ ವೆಚ್ಚ ಆಗಿದೆ. ಅದಕ್ಕಾಗಿ ಸಂಸದರ ಮತ್ತು ಶಾಸಕರ ಅನುದಾನದಲ್ಲಿ ತಲಾ ₹ 1 ಕೋಟಿ ಮತ್ತು ನಗರಸಭೆಯಿಂದ ₹ 50 ಲಕ್ಷ ಅನುದಾನ ಕಲ್ಪಿಸಲಾಗಿದೆ. ಉದ್ಯಾನಕ್ಕಾಗಿ ಮೊದಲನೇಯ ಹಂತದಲ್ಲಿ ₹ 20 ಲಕ್ಷ ಹಾಗೂ ಮುಂದಿನ ಹಂತಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಕಲ್ಪಿಸಲಾಗುವುದು. ಅಲ್ಲದೆ ರಸ್ತೆ ಬದಿಗೆ ‘ತಿನಿಸು ಕಟ್ಟೆ(ಖಾವು ಕಟ್ಟಾ) ನಿರ್ಮಿಸಲಾಗುವುದು’ ಎಂದರು.</p>.<p>ಪೌರಾಯುಕ್ತ ಜಗದೀಶ ಹುಲಗೆಜ್ಜಿ, ಸದಸ್ಯ ಜಯವಂತ ಭಾಟಲೆ, ರಾಜೇಂದ್ರ ಗುಂದೇಶಾ, ನೀತಾ ಬಾಗಡೆ, ಕಾವೇರಿ ಮಿರ್ಜೆ, ಪ್ರಭಾವತಿ ಸೂರ್ಯವಂಶಿ, ವಿಭಾವರಿ ಖಾಂಡಕೆ, ಮಾಜಿ ಸದಸ್ಯ ವಿಜಯ ಟವಳೆ, ಪ್ರಣವ ಮಾನವಿ, ಅಭಿಜಿತ್ ಮುದುಕುಡೆ, ಸಚಿನ ಥೋರವತ, ಮೊದಲಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>