<p><strong>ಗದಗ:</strong> ‘ಕಾವ್ಯಕ್ಕೆ ಕಣ್ಣಿರಬೇಕು; ಕಾವ್ಯಕ್ಕೆ ಹೃದಯವಿರಬೇಕು. ಕವಿಯಾದವನು ಒಡೆದ ಮನಸ್ಸುಗಳನ್ನು ಕಟ್ಟುತ್ತಾ ಸಮ ಸಮಾಜ ನಿರ್ಮಿಸಿ, ಓದುಗರ ಅಂತರಂಗದಲ್ಲಿ ಉಳಿಯುವಂತವನಾಗಿರಬೇಕು’ ಎಂದು ಹಿರಿಯ ಸಾಹಿತಿ ಎ.ಎಸ್. ಮಕಾನದಾರ ಹೇಳಿದರು.</p>.<p>ಚಕೋರ ಸಾಹಿತ್ಯ ವೇದಿಕೆ ಮತ್ತು ಡಾ. ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಒಂದು ಹನಿ ಮಸಿ; ಕೋಟಿ ಜನಕ್ಕೆ ಬಿಸಿ. ನಮ್ಮ ವಿಷಯದ ಬರವಣಿಗೆ ಆ ರೀತಿಯಲ್ಲಿರಬೇಕು. ಸ್ವಾಸ್ಥ್ಯ ಸಮಾಜಕ್ಕೆ ಕವಿಯ ಸ್ವಾಸ್ಥ್ಯ ಅಕ್ಷರಗಳು ಬೇಕು’ ಎಂದು ಹೇಳಿದರು.</p>.<p>ಬಸವೇಶ್ವರ ಮಹಾವಿದ್ಯಾಲಯದ ಉಪನ್ಯಾಸಕ ಕೆ.ಪಿ. ಹಂಡಿ ‘ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬದುಕು ಬರಹ’ ವಿಷಯದ ಕುರಿತು ಉಪನ್ಯಾಸ ನೀಡಿ, ‘ಈ ದೇಶಕ್ಕೆ, ಕನ್ನಡ ನಾಡು–ನುಡಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕೊಡುಗೆ ಬಹಳಷ್ಟಿದೆ’ ಎಂದರು.</p>.<p>‘ಗಾಂಧೀಜಿಯವರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಸ್ವಾತಂತ್ರ್ಯ ಹೋರಾಟ ತೊಡಗಿಸಿಕೊಂಡು ಜೈಲುವಾಸ ಅನುಭವಿಸಿದರು. ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಹಲವು ಪ್ರಬಂಧ ಹಾಗೂ ಕೃತಿಗಳು ಚಲನಚಿತ್ರಗಳಾಗಿ ಜನಮನ್ನಣೆ ಗಳಿಸಿವೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಅರ್ಜುನ ಗೊಳಸಂಗಿ ಮಾತನಾಡಿ, ಕಾವ್ಯ ಸಮ ಹಣತೆಯನ್ನು ಹಚ್ಚುವಂತಿಬೇಕು ಎಂದರು.</p>.<p>ದಸರಾ ಕವಿಗೋಷ್ಠಿಯಲ್ಲಿ ನೀಲಮ್ಮ ಅಂಗಡಿ, ಮಂಗಳಗೌರಿ ಹಿರೇಮಠ, ದೀನಬಂಧು ಆದಿ, ಭಾಗ್ಯ ಹುರಕಡ್ಲಿ, ಶಾರದಾ ಬಾನದ, ಗಣೇಶ ಪಾಟೀಲ, ಮಹೇಶ್ ಕೆರಿ, ರಮಾ ಚಿಗಟೇರಿ, ಪದ್ಮಾ ಕಬಾಡಿ, ಪ್ರಿಯಾಂಕ ಹನುಮರ ಕವಿತೆಗಳನ್ನು ವಾಚಿಸಿದರು.</p>.<p>ಪ್ರೊ. ಎಸ್.ಯು.ಸಜ್ಜನಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕಿ ಶಿಲ್ಪಾ ಮ್ಯಾಗೇರಿ ಸ್ವಾಗತಿಸಿದರು. ಮಹೇಶ ಕೆರಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ‘ಕಾವ್ಯಕ್ಕೆ ಕಣ್ಣಿರಬೇಕು; ಕಾವ್ಯಕ್ಕೆ ಹೃದಯವಿರಬೇಕು. ಕವಿಯಾದವನು ಒಡೆದ ಮನಸ್ಸುಗಳನ್ನು ಕಟ್ಟುತ್ತಾ ಸಮ ಸಮಾಜ ನಿರ್ಮಿಸಿ, ಓದುಗರ ಅಂತರಂಗದಲ್ಲಿ ಉಳಿಯುವಂತವನಾಗಿರಬೇಕು’ ಎಂದು ಹಿರಿಯ ಸಾಹಿತಿ ಎ.ಎಸ್. ಮಕಾನದಾರ ಹೇಳಿದರು.</p>.<p>ಚಕೋರ ಸಾಹಿತ್ಯ ವೇದಿಕೆ ಮತ್ತು ಡಾ. ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಒಂದು ಹನಿ ಮಸಿ; ಕೋಟಿ ಜನಕ್ಕೆ ಬಿಸಿ. ನಮ್ಮ ವಿಷಯದ ಬರವಣಿಗೆ ಆ ರೀತಿಯಲ್ಲಿರಬೇಕು. ಸ್ವಾಸ್ಥ್ಯ ಸಮಾಜಕ್ಕೆ ಕವಿಯ ಸ್ವಾಸ್ಥ್ಯ ಅಕ್ಷರಗಳು ಬೇಕು’ ಎಂದು ಹೇಳಿದರು.</p>.<p>ಬಸವೇಶ್ವರ ಮಹಾವಿದ್ಯಾಲಯದ ಉಪನ್ಯಾಸಕ ಕೆ.ಪಿ. ಹಂಡಿ ‘ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬದುಕು ಬರಹ’ ವಿಷಯದ ಕುರಿತು ಉಪನ್ಯಾಸ ನೀಡಿ, ‘ಈ ದೇಶಕ್ಕೆ, ಕನ್ನಡ ನಾಡು–ನುಡಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕೊಡುಗೆ ಬಹಳಷ್ಟಿದೆ’ ಎಂದರು.</p>.<p>‘ಗಾಂಧೀಜಿಯವರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಸ್ವಾತಂತ್ರ್ಯ ಹೋರಾಟ ತೊಡಗಿಸಿಕೊಂಡು ಜೈಲುವಾಸ ಅನುಭವಿಸಿದರು. ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಹಲವು ಪ್ರಬಂಧ ಹಾಗೂ ಕೃತಿಗಳು ಚಲನಚಿತ್ರಗಳಾಗಿ ಜನಮನ್ನಣೆ ಗಳಿಸಿವೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಅರ್ಜುನ ಗೊಳಸಂಗಿ ಮಾತನಾಡಿ, ಕಾವ್ಯ ಸಮ ಹಣತೆಯನ್ನು ಹಚ್ಚುವಂತಿಬೇಕು ಎಂದರು.</p>.<p>ದಸರಾ ಕವಿಗೋಷ್ಠಿಯಲ್ಲಿ ನೀಲಮ್ಮ ಅಂಗಡಿ, ಮಂಗಳಗೌರಿ ಹಿರೇಮಠ, ದೀನಬಂಧು ಆದಿ, ಭಾಗ್ಯ ಹುರಕಡ್ಲಿ, ಶಾರದಾ ಬಾನದ, ಗಣೇಶ ಪಾಟೀಲ, ಮಹೇಶ್ ಕೆರಿ, ರಮಾ ಚಿಗಟೇರಿ, ಪದ್ಮಾ ಕಬಾಡಿ, ಪ್ರಿಯಾಂಕ ಹನುಮರ ಕವಿತೆಗಳನ್ನು ವಾಚಿಸಿದರು.</p>.<p>ಪ್ರೊ. ಎಸ್.ಯು.ಸಜ್ಜನಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕಿ ಶಿಲ್ಪಾ ಮ್ಯಾಗೇರಿ ಸ್ವಾಗತಿಸಿದರು. ಮಹೇಶ ಕೆರಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>