ಅಸಮರ್ಪಕ ನಿರ್ವಹಣೆ; ನೀರು ಪೂರೈಕೆ ಅಸ್ತವ್ಯಸ್ತ, ಹತ್ತು ದಿನಗಳಿಗೊಮ್ಮೆ ಕೊಳವೆಬಾವಿ ನೀರು
ಚಂದ್ರಶೇಖರ ಭಜಂತ್ರಿ
Published : 26 ಮೇ 2025, 4:37 IST
Last Updated : 26 ಮೇ 2025, 4:37 IST
ಫಾಲೋ ಮಾಡಿ
Comments
ಬೆಳ್ಳಟ್ಟಿ ಗ್ರಾಮದಲ್ಲಿರುವ ಜಲ ಶುದ್ಧೀಕರಣ ಘಟಕ ನದಿ ನೀರು ಸರಬರಾಜು ಸ್ಥಗಿತದಿಂದ ಪಾಳು ಬಿದ್ದಿದೆ
ಕೆಶಿಪ್ ಯೋಜನೆಯಡಿ ಶಿರಹಟ್ಟಿ ಹತ್ತಿರ ರಸ್ತೆ ಅಭಿವೃದ್ಧಿಗಾಗಿ ಮುಳಗುಂದಕ್ಕೆ ನದಿ ನೀರು ಸರಬರಾಜು ಮಾಡುವ ಪೈಪ್ಗಳನ್ನು ಕಿತ್ತು ಹಾಕಲಾಗಿದೆ
ತುಂಗಭದ್ರಾ ನದಿ ನೀರು ಪಕ್ಕದ ಹಳ್ಳಿಗಳಿಗೆ ನಿತ್ಯ ಪೂರೈಕೆ ಆಗುತ್ತಿದೆ. ಆದರೆ ಮುಳಗುಂದಕ್ಕೆ ಆ ಭಾಗ್ಯ ಇನ್ನೂ ದೊರಕುತ್ತಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಇಲ್ಲದ ಕಾರಣ, ಜಲ ಶುದ್ಧೀಕರಣಕ್ಕೆ ಹಾಕಿದ್ದ ಹತ್ತಾರು ಕೋಟಿ ರೂಪಾಯಿ ವೆಚ್ಚದ ಯಂತ್ರಗಳು ಮೂಲೆಗುಂಪಾಗಿವೆ. ಹೆಸರಿಗೆ ಮಾತ್ರ ಶಾಶ್ವತ ಕುಡಿಯುವ ನೀರಿನ ಯೋಜನೆ; ಆದರೆ ನದಿನೀರು ಕುಡಿದಿದ್ದು ಮಾತ್ರ ಕೆಲವೇ ದಿನಗಳು.
ರಾಘವೇಂದ್ರ ಕುಂಬಾರಗೇರಿ, ಸ್ಥಳೀಯರು
ಅಸಮರ್ಪಕ ಕುಡಿಯುವ ನೀರು ಪೂರೈಕೆಯಿಂದ ನೀರಿಗೆ ಬರ ಎದುರಾಗಿದೆ. ಹಣ ಕೊಟ್ಟು ಟ್ಯಾಂಕರ್ ಮೂಲಕ ನೀರು ಕೊಳ್ಳುವಂತಾಗಿದೆ. ಇತ್ತ ಕೊಳವೆಬಾವಿ ನೀರು ಇಲ್ಲ; ಅತ್ತ ನದಿ ನೀರು ಇಲ್ಲವಾಗಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಮನವಿಗಳನ್ನು ನೀಡಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು.
ದತ್ತಪ್ಪ ಯಳವತ್ತಿ, ರೈತ ಸಂಘದ ಮುಖಂಡ
ನದಿ ನೀರು ಪೂರೈಕೆ ಮಾಡುವಂತೆ ಹಲವು ಬಾರಿ ಮನವಿ ಕೊಟ್ಟಿದ್ದೇವೆ. ಆದರೆ ಪ್ರಯೋಜನವಾಗಿಲ್ಲ. ಕುಡಿಯುವ ನೀರಿಗೆ ಬರ ಆವರಿಸಿದೆ. ನದಿ ನೀರು ಪೂರೈಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ.
ಎಂ.ಎಚ್.ಕಣವಿ, ಜೆಡಿಎಸ್ ಸ್ಥಳೀಯ ಘಟಕದ ಅಧ್ಯಕ್ಷ
ನದಿ ನೀರು ಪೂರೈಕೆಗೆ ಈಗ ಯಂತ್ರಗಳ ದುರಸ್ತಿ, ಪೈಪ್ ಜೋಡಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಅದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ನದಿ ನೀರು ಪೂರೈಸಬೇಕು. ಸ್ಥಳೀಯವಾಗಿ ಸಮರ್ಪಕ ನೀರು ಪೂರೈಕೆಗೆ ಕ್ರಮ ಜರುಗಿಸಬೇಕು.
ದ್ಯಾಮಣ್ಣ ನೀಲಗುಂದ, ವಿರೋಧ ಪಕ್ಷದ ನಾಯಕ, ಪಟ್ಟಣ ಪಂಚಾಯಿತಿ ಮುಳಗುಂದ
ಶಿರಹಟ್ಟಿ, ಬೆಳ್ಳಟ್ಟಿ ನಡುವೆ ರಸ್ತೆ ಅಭಿವೃದ್ಧಿಗಾಗಿ ಕಿತ್ತ ಪೈಪ್ ದುರಸ್ತಿ ಕಾರ್ಯ ಮತ್ತು ಯಂತ್ರಗಳ ದುರಸ್ತಿಗೆ ಮನವಿ ಮಾಡಲಾಗಿತ್ತು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಈ ಬಗ್ಗೆ ಕ್ರಮ ವಹಿಸಿದ್ದು, ಪೈಪ್ ದುರಸ್ತಿ ಕಾರ್ಯ ನಡೆದಿದೆ. ಅಮೃತ 2.0 ಯೋಜನೆ ಅಡಿ ಯಂತ್ರಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಪಟ್ಟಣಕ್ಕೆ ಇನ್ನು 3 ತಿಂಗಳಲ್ಲಿ ನದಿ ನೀರು ಪೂರೈಕೆ ಆಗಲಿದೆ.
ಮಂಜುನಾಥ ಗುಳೇದ, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಮುಳಗುಂದ.