<p><strong>ಅರಸೀಕೆರೆ</strong>: ಬಾಣಾವಾರ ಪಟ್ಟಣದಲ್ಲಿ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ಇತಿಹಾಸವನ್ನು ಸೃಷ್ಟಿಸುತ್ತಿದ್ದು, 60 ರಿಂದ 70 ಜೋಡಿ ಎತ್ತುಗಳು ನೋಂದಣಿಯಾಗಿವೆ ಎಂದು ಹಳ್ಳಿಕಾರ್ ಜೋಡಿ ಎತ್ತಿನ ಬಂಡಿ ಸ್ಪರ್ಧೆ ಸಂಘಟಕ ಸಮಿತಿ ಅಧ್ಯಕ್ಷ ಧರ್ಮಣ್ಣ ಹೇಳಿದರು.</p>.<p>ಬಾಣಾವಾರ ಜಾವಗಲ್ ರಸ್ತೆಯಲ್ಲಿ ಆಯೋಜಿಸಲಾಗಿರುವ ಹಳ್ಳಿಕಾರ್ ಜೋಡಿ ಎತ್ತಿನ ಬಂಡಿ ಸ್ಪರ್ಧೆಗೆ ಕೋಟೆ ಆಂಜನೇಯ ಸ್ವಾಮಿ ದೇಗುಲದ ಸಾನ್ನಿಧ್ಯದಲ್ಲಿ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಕಳೆದ ವರ್ಷ ರಾಜ್ಯಮಟ್ಟದ ಸ್ಪರ್ಧೆ ಯಶಸ್ವಿಯಾಗಿತ್ತು, ಹಾಗಾಘಿ, ಈ ಬಾರಿ ಅಂತರರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಶಾಸಕ ಕೆ.ಎಂ.ಶಿವಲಿಂಗೇಗೌಡ , ಜನಪ್ರತಿನಿಧಿಗಳು, ಗ್ರಾಮದ ರೈತರ ಸಹಕಾರ ದೊರಕಿದೆ’ ಎಂದು ಹೇಳಿದರು. </p>.<p>ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಆರ್. ಶ್ರೀಧರ್ , ಆಟೋ ಚಾಲಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ (ಕಿಟ್ಟಿ ), ಹಳ್ಳಿಕಾರ್ ಗೋತಳಿ ಪ್ರಭುಗಳ ಸಂಘದ ಮಾಲತೇಶ್, ಶರತ್, ಶಿವು, ಸಮಾಜ ಸೇವಕ ಥ್ರಿಲ್ಲರ್ ಮಂಜು, ದೀಪಕ್ ಹಿರೇಮಠ, ರಾಜು, ಬಾಲಾಜಿ ಶೆಟ್ಟಿ ಅಜಯ್, ಕುಮಾರ್ , ಹಳ್ಳಿಕಾರ್ ಗೋತಳಿ ಪ್ರೇಮಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ</strong>: ಬಾಣಾವಾರ ಪಟ್ಟಣದಲ್ಲಿ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ಇತಿಹಾಸವನ್ನು ಸೃಷ್ಟಿಸುತ್ತಿದ್ದು, 60 ರಿಂದ 70 ಜೋಡಿ ಎತ್ತುಗಳು ನೋಂದಣಿಯಾಗಿವೆ ಎಂದು ಹಳ್ಳಿಕಾರ್ ಜೋಡಿ ಎತ್ತಿನ ಬಂಡಿ ಸ್ಪರ್ಧೆ ಸಂಘಟಕ ಸಮಿತಿ ಅಧ್ಯಕ್ಷ ಧರ್ಮಣ್ಣ ಹೇಳಿದರು.</p>.<p>ಬಾಣಾವಾರ ಜಾವಗಲ್ ರಸ್ತೆಯಲ್ಲಿ ಆಯೋಜಿಸಲಾಗಿರುವ ಹಳ್ಳಿಕಾರ್ ಜೋಡಿ ಎತ್ತಿನ ಬಂಡಿ ಸ್ಪರ್ಧೆಗೆ ಕೋಟೆ ಆಂಜನೇಯ ಸ್ವಾಮಿ ದೇಗುಲದ ಸಾನ್ನಿಧ್ಯದಲ್ಲಿ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಕಳೆದ ವರ್ಷ ರಾಜ್ಯಮಟ್ಟದ ಸ್ಪರ್ಧೆ ಯಶಸ್ವಿಯಾಗಿತ್ತು, ಹಾಗಾಘಿ, ಈ ಬಾರಿ ಅಂತರರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ಶಾಸಕ ಕೆ.ಎಂ.ಶಿವಲಿಂಗೇಗೌಡ , ಜನಪ್ರತಿನಿಧಿಗಳು, ಗ್ರಾಮದ ರೈತರ ಸಹಕಾರ ದೊರಕಿದೆ’ ಎಂದು ಹೇಳಿದರು. </p>.<p>ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಆರ್. ಶ್ರೀಧರ್ , ಆಟೋ ಚಾಲಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ (ಕಿಟ್ಟಿ ), ಹಳ್ಳಿಕಾರ್ ಗೋತಳಿ ಪ್ರಭುಗಳ ಸಂಘದ ಮಾಲತೇಶ್, ಶರತ್, ಶಿವು, ಸಮಾಜ ಸೇವಕ ಥ್ರಿಲ್ಲರ್ ಮಂಜು, ದೀಪಕ್ ಹಿರೇಮಠ, ರಾಜು, ಬಾಲಾಜಿ ಶೆಟ್ಟಿ ಅಜಯ್, ಕುಮಾರ್ , ಹಳ್ಳಿಕಾರ್ ಗೋತಳಿ ಪ್ರೇಮಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>