<p><strong>ಹಾಸನ:</strong> ಹಾಸನಾಂಬೆ ದರ್ಶನೋತ್ಸವದ 3ನೇ ದಿನವಾದ ಶನಿವಾರ ಮುಸ್ಲಿಮರು ದರ್ಶನ ಪಡೆದರು. ಈ ಮೂಲಕ ಉತ್ಸವವು ಸೌಹಾರ್ದದ ಸಂದೇಶ ಸಾರಿತು.</p>.<p>ವಿಜಯಪುರದ ಅನ್ವರ್ ಹುಸೇನ್ ಹಾಗೂ ಸಕಲೇಶಪುರ ತಾಲ್ಲೂಕಿನ ಹುರುಡಿ ಗ್ರಾಮದ ಹಸೀನಾ ಲತೀಫ್ ದರ್ಶನ ಪಡೆದರು. ವಿಜಯಪುರ ಜಿಲ್ಲೆಯಿಂದ ಸ್ನೇಹಿತರ ಜೊತೆ ಬಂದಿದ್ದ ಅನ್ವರ್ ವಕೀಲರು. ₹ 300 ಟಿಕೆಟ್ ಪಡೆದು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.</p>.<p>‘ಸೃಷ್ಟಿಕರ್ತ ಎಲ್ಲರಿಗೂ ಒಂದೇ. ದೇವರು, ದೈವ ಭಕ್ತಿಗೆ ಭೇದವಿಲ್ಲ. ದಯೆ, ಕರುಣೆಯಲ್ಲಿ ಇಲ್ಲದ ಭಿನ್ನತೆ ನಮ್ಮಲ್ಲಿ ಏಕೆ? ಎಲ್ಲರೂ ಒಂದೇ. ಹಾಗಾಗಿ ನಾನು ದರ್ಶನಕ್ಕೆ ಬಂದೆ’ ಎಂದು ಅನ್ವರ್ ಹೇಳಿದರು.</p>.<p>‘3 ವರ್ಷಗಳಿಂದ ದರ್ಶನ ಪಡೆಯುತ್ತಿದ್ದೇನೆ. ಸ್ನೇಹಿತರು ದರ್ಗಾಕ್ಕೆ ಬರುತ್ತಾರೆ. ನಾವು ಅವರೊಟ್ಟಿಗೆ ದೇವರ ದರ್ಶನಕ್ಕೆ ಬರುತ್ತೇವೆ’ ಎಂದರು.</p>.<p>ಸ್ನೇಹಿತೆ ಜೊತೆ ದರ್ಶನ ಪಡೆದ ಹಸೀನಾ: ಸಕಲೇಶಪುರ ತಾಲ್ಲೂಕಿನ ಹುರುಡಿ ಗ್ರಾಮದ ಹಸೀನಾ ಲತೀಫ್, ಸ್ನೇಹಿತೆ ದೀಪಾ ಹಾಗೂ ಕುಟುಂಬದೊಂದಿಗೆ ದರ್ಶನ ಪಡೆದರು.</p>.<p>ನಂತರ ಮಾತನಾಡಿ, ‘ಮೂರು ವರ್ಷಗಳಿಂದ ದರ್ಶನ ಪಡೆಯುತ್ತಿದ್ದೇನೆ. ನನಗೆ ಯಾವುದೇ ಧರ್ಮದ ಭೇದವಿಲ್ಲ. ಸಾಮಾನ್ಯ ಸಾಲಿನಲ್ಲಿ ನಿಂತೇ ದರ್ಶನ ಪಡೆದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ಹಾಸನಾಂಬೆ ದರ್ಶನೋತ್ಸವದ 3ನೇ ದಿನವಾದ ಶನಿವಾರ ಮುಸ್ಲಿಮರು ದರ್ಶನ ಪಡೆದರು. ಈ ಮೂಲಕ ಉತ್ಸವವು ಸೌಹಾರ್ದದ ಸಂದೇಶ ಸಾರಿತು.</p>.<p>ವಿಜಯಪುರದ ಅನ್ವರ್ ಹುಸೇನ್ ಹಾಗೂ ಸಕಲೇಶಪುರ ತಾಲ್ಲೂಕಿನ ಹುರುಡಿ ಗ್ರಾಮದ ಹಸೀನಾ ಲತೀಫ್ ದರ್ಶನ ಪಡೆದರು. ವಿಜಯಪುರ ಜಿಲ್ಲೆಯಿಂದ ಸ್ನೇಹಿತರ ಜೊತೆ ಬಂದಿದ್ದ ಅನ್ವರ್ ವಕೀಲರು. ₹ 300 ಟಿಕೆಟ್ ಪಡೆದು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.</p>.<p>‘ಸೃಷ್ಟಿಕರ್ತ ಎಲ್ಲರಿಗೂ ಒಂದೇ. ದೇವರು, ದೈವ ಭಕ್ತಿಗೆ ಭೇದವಿಲ್ಲ. ದಯೆ, ಕರುಣೆಯಲ್ಲಿ ಇಲ್ಲದ ಭಿನ್ನತೆ ನಮ್ಮಲ್ಲಿ ಏಕೆ? ಎಲ್ಲರೂ ಒಂದೇ. ಹಾಗಾಗಿ ನಾನು ದರ್ಶನಕ್ಕೆ ಬಂದೆ’ ಎಂದು ಅನ್ವರ್ ಹೇಳಿದರು.</p>.<p>‘3 ವರ್ಷಗಳಿಂದ ದರ್ಶನ ಪಡೆಯುತ್ತಿದ್ದೇನೆ. ಸ್ನೇಹಿತರು ದರ್ಗಾಕ್ಕೆ ಬರುತ್ತಾರೆ. ನಾವು ಅವರೊಟ್ಟಿಗೆ ದೇವರ ದರ್ಶನಕ್ಕೆ ಬರುತ್ತೇವೆ’ ಎಂದರು.</p>.<p>ಸ್ನೇಹಿತೆ ಜೊತೆ ದರ್ಶನ ಪಡೆದ ಹಸೀನಾ: ಸಕಲೇಶಪುರ ತಾಲ್ಲೂಕಿನ ಹುರುಡಿ ಗ್ರಾಮದ ಹಸೀನಾ ಲತೀಫ್, ಸ್ನೇಹಿತೆ ದೀಪಾ ಹಾಗೂ ಕುಟುಂಬದೊಂದಿಗೆ ದರ್ಶನ ಪಡೆದರು.</p>.<p>ನಂತರ ಮಾತನಾಡಿ, ‘ಮೂರು ವರ್ಷಗಳಿಂದ ದರ್ಶನ ಪಡೆಯುತ್ತಿದ್ದೇನೆ. ನನಗೆ ಯಾವುದೇ ಧರ್ಮದ ಭೇದವಿಲ್ಲ. ಸಾಮಾನ್ಯ ಸಾಲಿನಲ್ಲಿ ನಿಂತೇ ದರ್ಶನ ಪಡೆದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>