ಹೆತ್ತೂರು(ಹಾಸನ): ಹೆತ್ತೂರು ಹೋಬಳಿಯ ಬಾಚ್ಚಿಹಳ್ಳಿ ಗ್ರಾಮದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಉರಗ ತಜ್ಞ ಹಾಗೂ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ.
ಗ್ರಾಮದ ಸುಮಂತ್ ಎಂಬುವವರ ಮನೆ ಸಮೀಪ ಕಾಣಿಸಿಕೊಂಡ ಕಾಳಿಂಗಸರ್ಪವನ್ನು ಕೊಡ್ಲಿಪೇಟೆ ಗ್ರಾಮದ ಉರಗ ಪ್ರೇಮಿ ನೀಸರ್ ಎಂಬುವವರು ಅರಣ್ಯ ಇಲಾಖೆಯವರ ಸಹಯೋಗದಲ್ಲಿ ಸತತ ಒಂದು ಗಂಟೆ ಪ್ರಯತ್ನದಿಂದ ಸುಮಾರು 12 ಅಡ್ಡಿ ಉದ್ದ,10 ಕೆ.ಜಿ ತೂಕದ ಹಾವನ್ನು ಹಿಡಿದು ಬಿಸಿಲೆ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.