ವಿಡಿಯೊ ಹೇಳಿಕೆ ನೀಡಿರುವ ಅವರು, ‘ಮಕ್ಕಳು ರಾಷ್ಟ್ರೀಯ ಚಿಹ್ನೆಗಳಾದ ನವಿಲು, ಅಶೋಕ ಚಕ್ರ, ಕಮಲದ ಹೂವು ಪ್ರದರ್ಶಿಸಿದ್ದರು. ಆದರೆ, ಕಮಲದ ಹೂವು ಎದ್ದುಕಾಣುವಂತೆ ಮಾಡಿದ್ದರು. ಇದಕ್ಕಾಗಿ ಶಿಕ್ಷಕರನ್ನು ನಾನು ಪ್ರಶ್ನಿಸಿದ್ದು ನಿಜ. ಆದರೆ, ಅದರಲ್ಲಿ ರಾಜಕೀಯದ ದುರುದ್ದೇಶದಿಂದ ಕೇಳಿರಲಿಲ್ಲ. ರಾಷ್ಟ್ರಪ್ರೇಮ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಗೌರವವಿದೆ. ಕೀಳುಮಟ್ಟದ ರಾಜಕೀಯ ಮಾಡಿಲ್ಲ. ಇದಕ್ಕೆ ರಾಜಕೀಯ ಬಣ್ಣ ಕಟ್ಟುವುದು ಬೇಡ’ ಎಂದು ತಿಳಿಸಿದ್ದಾರೆ.