‘ಅರೇಹಳ್ಳಿ ನಿವಾಸಿ, ಸದ್ಯ ಹಾಸನದಲ್ಲಿ ವಾಸವಿರುವ ಸಯ್ಯದ್ ಹಫೀಜ್, ಅವರ ಅಣ್ಣನಮಗ ಖದೀರ್ ಬಂಧಿತ ಆರೋಪಿಗಳು. ಈ ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್ವಶಕ್ಕೆ ನೀಡಲು ಕೋರಲಾಗಿದೆ. ಮೇ 27ರಂದು ಗೂರ್ಗಿಹಳ್ಳಿ ಸಯ್ಯದ್ ಸತ್ತರ್ಎಂಬುವವರ ತೋಟದ ಸಮೀಪ ಆನೆಯ ಕಳೇಬರ ಪತ್ತೆಯಾಗಿತ್ತು. ಪಶುವೈದ್ಯಮಹಾವಿದ್ಯಾಲಯದ ಡಾ.ಗಿರೀಶ್, ಡಾ.ಯಶಸ್, ಡಾ.ನಾಗರಾಜು ಅವರ ತಜ್ಞರ ತಂಡ ಮರಣೋತ್ತರ ಪರೀಕ್ಷೆ ನಡೆಸಿ, ಗುಂಡೇಟಿನಿಂದ ಆನೆ ಸ್ಥಳದಲ್ಲಿಯೇಮೃತಪಟ್ಟಿರುವುದಾಗಿ ವರದಿ ನೀಡಿತ್ತು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿಹೇಳಿದರು.